ಹೊಸದಿಲ್ಲಿ: ವಜಾಗೊಂಡಿರುವ ಎಲ್ಲಾ ಕ್ಯಾಬಿನ್ ಸಿಬಂದಿಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ಮರುನೇಮಕ ಮಾಡಿಕೊಳ್ಳಲು ಏರ್ ಇಂಡಿಯಾ ಎಕ್ಸ್ಪ್ರೆಸ್ ಒಪ್ಪಿಕೊಂಡಿದೆ. ಗುರುವಾರ ಮಧ್ಯಾಹ್ನ 2 ಗಂಟೆಗೆ ಮುಖ್ಯ ಕಾರ್ಮಿಕ ಆಯುಕ್ತರು ಕರೆದಿದ್ದ ಸಭೆಯಲ್ಲಿ ಏರ್ ಇಂಡಿಯಾ ಎಕ್ಸ್ಪ್ರೆಸ್ ಆಡಳಿತವು ಪ್ರತಿಭಟನಾ ನಿರತ ಸಿಬಂದಿಯನ್ನು ಭೇಟಿ ಮಾಡಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಂಗಳವಾರ ರಾತ್ರಿಯಿಂದ ಸೂಚನೆ ನೀಡದೆ ಸಾಮೂಹಿಕ ಅನಾರೋಗ್ಯ ರಜೆಗೆ ತೆರಳಿದ 30 ಕ್ಯಾಬಿನ್ ಸಿಬಂದಿಯ ಸೇವೆಗಳನ್ನು ವಜಾಗೊಳಿಸುವುದಾಗಿ ಟಾಟಾ ಗ್ರೂಪ್ ಒಡೆತನದ ಏರ್ಲೈನ್ ಘೋಷಿಸಿದ ಗಂಟೆಗಳ ನಂತರ ಈ ಕ್ರಮವು ಬಂದಿದೆ.
ಗುರುವಾರ ಸಂಜೆ 4 ಗಂಟೆಯೊಳಗೆ ಮತ್ತೆ ಕರ್ತವ್ಯಕ್ಕೆ ಮರಳಬೇಕು, ಇಲ್ಲವಾದಲ್ಲಿ ವಜಾಗೊಳಿಸುವುದಾಗಿ ಸೂಚನೆ ನೀಡದೆ ಅನಾರೋಗ್ಯ ವರದಿ ಮಾಡಿದ ಸಿಬಂದಿಗೆ ವಿಮಾನಯಾನ ಸಂಸ್ಥೆ ಖಡಕ್ ಸೂಚನೆ ನೀಡಿತ್ತು.
ಗುರುವಾರ, ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು ರದ್ದುಗೊಳಿಸುವುದಾಗಿ ಘೋಷಿಸಿತ್ತು, ಕ್ಯಾಬಿನ್ ಸಿಬಂದಿಯ ಕೊರತೆಯ ನಡುವೆ ಅದರ ದೈನಂದಿನ ನಿಗದಿತ ವಿಮಾನಗಳಲ್ಲಿ ಸುಮಾರು 20 ಪ್ರತಿಶತದಷ್ಟು ಪರಿಣಾಮ ಬೀರಿದೆ. 20 ಮಾರ್ಗಗಳಲ್ಲಿ ಏರ್ ಇಂಡಿಯಾದ ಬೆಂಬಲದೊಂದಿಗೆ ಗುರುವಾರ 283 ವಿಮಾನಗಳನ್ನು ನಿರ್ವಹಿಸಲಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.