Home / Uncategorized / ಹೆಚ್​​.ಡಿ. ರೇವಣ್ಣ ಪೌರ ಕಾರ್ಮಿಕರನ್ನು ಬಿಡ್ತಿರಲಿಲ್ಲ : ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್

ಹೆಚ್​​.ಡಿ. ರೇವಣ್ಣ ಪೌರ ಕಾರ್ಮಿಕರನ್ನು ಬಿಡ್ತಿರಲಿಲ್ಲ : ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್

Spread the love

ಹೆಚ್​​.ಡಿ. ರೇವಣ್ಣ ಪೌರ ಕಾರ್ಮಿಕರನ್ನು ಬಿಡ್ತಿರಲಿಲ್ಲ : ಪ್ರಜ್ವಲ್ ಮಾಜಿ ಕಾರು ಚಾಲಕ ಕಾರ್ತಿಕ್

ಬೆಂಗಳೂರು : ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಕಾಮಕಾಂಡವನ್ನು ಮಾಜಿ ಕಾರು ಚಾಲಕ ಕಾರ್ತಿಕ್​​ ಬಿಚ್ಚಿಟ್ಟಿದ್ದಾರೆ. ಪ್ರಜ್ವಲ್ ರೇವಣ್ಣ ಅದೆಷ್ಟರ ಮಟ್ಟಿಗೆ ಕಾಮಿಯಾಗಿದ್ದನು ಎಂದರೆ ಮನೆಗೆ ಬರುವ ಪ್ರತಿಯೊಬ್ಬ ಹೆಣ್ಣು ಮಕ್ಕಳನ್ನು ಬಿಡ್ತಾ ಇರಲಿಲ್ಲ ಎಂದು ಹೇಳಿದ್ದಾರೆ.

ಪವರ್​ ಟಿವಿಯಲ್ಲಿ ನಡೆದ ಸಂದರ್ಶನದಲ್ಲಿ ಮಾತನಾಡಿದ ಕಾರ್ತಿಕ್​​, ಮಾಜಿ ಸಚಿವ ಹೆಚ್​​.ಡಿ. ರೇವಣ್ಣ ಪೌರ ಕಾರ್ಮಿಕರನ್ನು ಬಿಡ್ತಿರಲಿಲ್ಲ ಎಂಬ ಸ್ಫೋಟಕ ಅಂಶ ಬಾಯ್ಬಿಟ್ಟಿದ್ದಾರೆ. ರೇವಣ್ಣ ಮನೆಗೆ ಪೌರ ಕಾರ್ಮಿಕರು ಬರಲು ಭಯಪಡುತ್ತಿದ್ದರು. ರೇವಣ್ಣ ಪೌರ ಕಾರ್ಮಿಕರನ್ನು ತನ್ನ ಕಾಮತೃಷೆಗೆ ಬಳಸಿಕೊಳ್ತಿದ್ದರು ಎಂದು ಆರೋಪಿಸಿದ್ದಾರೆ.

ಸಂಸದ ಪ್ರಜ್ವಲ್​​ ರೇವಣ್ಣ ಗುತ್ತಿಗೆದಾರರ ಬಳಿ ಕೆಲಸ ಮಾಡಿಸಿ ಹಣ ಪಾವತಿ ಮಾಡುತ್ತಿರಲಿಲ್ಲವಂತೆ. ಎಷ್ಟೋ ಜನ ಕಾಂಟ್ರ್ಯಾಕ್ಟರ್​​ ಹಣ ಪಾವತಿ ಮಾಡಲು ಮನವಿ ಮಾಡಿದ್ರೆ, ಅವರ ಪತ್ನಿಯರನ್ನು ಈತನ ಬಳಿ ಬಿಡಬೇಕಾಗಿತ್ತು. ಯಾರ ಅಕ್ಕ, ತಂಗಿಯಾದ್ರೂ ಆತನಿಗೆ ಬೇಕಿತ್ತು. ಯಾರ ಹೆಂಡತಿ, ತಾಯಿಯನ್ನಾದರೂ ಆತ ಕಾಮಕೇಳಿಗೆ ಬಳಸಿಕೊಳ್ತಿದ್ದ ಎಂದು ತಿಳಿಸಿದ್ದಾರೆ.

ಪಾಸ್​​ಪೋರ್ಟ್​ಇಲ್ಲ, ಇನ್ನೆಲ್ಲಿಮಲೇಷ್ಯಾ?

ಮಾಜಿ ಕಾರು ಚಾಲಕ ಕಾರ್ತಿಕ್​ ಮಲೇಷ್ಯಾಕ್ಕೆ ತೆರಳಿದ್ದಾನೆ ಎಂದ ಮಾಜಿ ಸಿಎಂ H.D.ಕುಮಾರಸ್ವಾಮಿ ಆರೋಪಕ್ಕೆ ಕಾರ್ತಿಕ್​ ಪ್ರತಿಕ್ರಿಯಿಸಿದ್ದಾರೆ. ಅವರು ಮಾಜಿ ಮುಖ್ಯಮಂತ್ರಿಗಳು, ಅವರ ಬಗ್ಗೆ ನಾನು ಮಾತನಾಡುವುದಿಲ್ಲ. ನನ್ನ ಬಳಿ ಪಾಸ್​​ಪೋರ್ಟ್​​ ಇಲ್ಲ. ನಾನು ಹೇಗೆ ಮಲೇಷ್ಯಾಗೆ ತೆರಳಲಿ. ನನ್ನ ಮನೆ ಬಳಿಯೇ ಸಾಕಷ್ಟು ಕೆಲಸವಿದೆ. ನಾನ್ಯಾಕೆ ಮಲೇಷ್ಯಾಕ್ಕೆ ಹೋಗಲಿ ಎಂದು ಪ್ರಶ್ನಿಸಿದ್ದಾರೆ.

ವಿಡಿಯೋವೈರಲ್ಮಾಡಿದ್ದುದೇವರಾಜೇಗೌಡ

ನಾನು ವಕೀಲ ದೇವರಾಜೇಗೌಡರಿಗೆ ನನ್ನ ಬಳಿ ಇದ್ದ ಮೆಮೋರಿ ಕಾರ್ಡ್​ಗಳನ್ನು ನೀಡಿದ್ದೆ. ಅದನ್ನ ಅವರು ಮಿಸ್​ ಯೂಸ್​ ಮಾಡಿದ್ದಾರೆ. ಕೇಸ್​ ಸಂಬಂಧ ಕೊಟ್ಟಿರೋ ಮೆಮೋರಿ ಕಾರ್ಡ್​ಗಳನ್ನು ಸಾರ್ವಜನಿಕವಾಗಿ ಹಂಚಿದ್ದಾರೆ ಎಂದು ಕಾರ್ತಿಕ್​ ಆರೋಪಿಸಿದ್ದಾರೆ.


Spread the love

About Laxminews 24x7

Check Also

ಬೆಳಗಾವಿ: ಶತಮಾನೋತ್ಸವ ಕಾರ್ಯಕ್ರಮ ಸಂಪನ್ನ

Spread the love ಬೆಳಗಾವಿ: ಇಲ್ಲಿನ ಖಾಸಬಾಗದ ಉಪ್ಪಾರ ಗಲ್ಲಿಯಲ್ಲಿ ನಾಲ್ಕು ದಿನ ವೈಭವದಿಂದ ನಡೆದ ಬನಶಂಕರಿ ದೇವಸ್ಥಾನದ ಶತಮಾನೋತ್ಸವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ