Breaking News
Home / ರಾಜಕೀಯ / ಬೆಳಗಾವಿ: ‘ಸರ್ಕಾರದ ಮೇಲೆ ಅವಲಂಬನೆ ಬಿಡಿ’

ಬೆಳಗಾವಿ: ‘ಸರ್ಕಾರದ ಮೇಲೆ ಅವಲಂಬನೆ ಬಿಡಿ’

Spread the love

ಬೆಳಗಾವಿ: ‘ಸರ್ಕಾರಿ ಯೋಜನೆಗಳ ಮೇಲೆಯೇ ಪ್ರತಿಯೊಬ್ಬರು ಅವಲಂಬಿತರಾದರೆ ದೇಶ ಪ್ರಗತಿ ಹೊಂದುವುದು ಕಷ್ಟ. ಹಾಗಾಗಿ ದೇಶ ಮತ್ತು ತನಗೆ ಏನು ನೀಡುತ್ತಿದೆ ಎಂಬ ಸ್ವಾರ್ಥ ಚಿಂತನೆಯನ್ನು ತೊರೆಯುವುದು ಮುಖ್ಯ. ದೇಶ ಮತ್ತು ಸಮಾಜದ ಪ್ರಗತಿಗೆ ಶ್ರಮಿಸುವ ಅವಶ್ಯಕತೆ ಇದೆ’ ಎಂದು ವಿಧಾನ ಪರಿಷತ್ ಸದಸ್ಯ ಪ್ರೊ.ತಳವಾರ ಸಾಬಣ್ಣ ಹೇಳಿದರು.

 

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುವೆಂಪು ಸಭಾಭವನದಲ್ಲಿ ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠದ ನೇತೃತ್ವದಲ್ಲಿ ಶನಿವಾರ ಜರುಗಿದ ಪಂಡಿತ ದೀನದಯಾಳ ಉಪಾಧ್ಯಾಯ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸಾಮಾಜಿಕ ಮತ್ತು ಆರ್ಥಿಕವಾಗಿ ಸಬಲ ಹೊಂದಿದವರು, ದುರ್ಬಲ ಜನಾಂಗದ ಉನ್ನತಿಗೆ ತ್ಯಾಗ ಮಾಡುವ ಅವಶ್ಯಕತೆಯಿದೆ. ಮೇಲ್ವರ್ಗ- ಕೆಳವರ್ಗ ಎಂಬ ದೊಡ್ಡ ಕಂದಕ ಸಮಾಜದಲ್ಲಿ ಉಂಟಾಗಿದೆ. ಈ ಕಂದಕ ತೊಡೆದು ಹಾಕಲು ಪರಸ್ಪರ ಹೊಂದಾಣಿಕೆ ಅಗತ್ಯ. ಒಬ್ಬರಿಗೊಬ್ಬರು ಶ್ರಮಿಸುವುದು ಅಗತ್ಯ. ಪಂಡಿತ ದೀನದಯಾಳ ಅಶಯದಂತೆ ಸಮಾಜದ ಕೊನೆಯ ವ್ಯಕ್ತಿಗೂ ಸರ್ಕಾರದ ಎಲ್ಲ ಯೋಜನೆಗಳು ಲಭಿಸುವಂತಾಗಬೇಕು’ ಎಂದರು.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ