ವಿಜಯಪುರ: ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳ ಭೇಟಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಿದರು. ಶ್ರೀಗಳಿರುವ ಕೊಠಡಿಗೆ ತೆರಳಿದ ಮಾಜಿ ಸಿಎಂ ಸಿದ್ದರಾಮಯ್ಯ ಇವರು ಶ್ರೀಗಳ ಆರೋಗ್ಯ ಕ್ಷೇಮ ವಿಚಾರ ತಿಳಿಯಲು ವೈದ್ಯರ ಭೇಟಿ ಮಾಡಿದರು. ಬಳಿಕ ಮಾತನಾಡಿ ಶ್ರೀಗಳ ಆರೋಗ್ಯ ಸ್ಥಿರವಾಗಿದೆ,
ನಾನು ವೈದ್ಯರ ಜೊತೆಗೆ ಮಾತನಾಡಿದ್ದೇನೆ, ಆರೋಗ್ಯ ಸ್ಥಿರವಾಗಿದೆ ಎಂದಿದ್ದಾರೆ, ಅವರು ಮಹಾಸಂತರು ಧಾರ್ಮಿಕವಾಗಿ ಜಾಗೃತಿಗೊಳಿಸುವ ಕೆಲಸ ಮಾಡಿದ್ದಾರೆ ಎಂದರು. ಪ್ರವಚನದ ಮೂಲಕ ಧಾರ್ಮಿಕ ಭಾವನೆ ಮೂಡಿಸಿದ್ದಾರೆ, ಧರ್ಮ ಎಂದರ ವೇ ಆಫ್ ಲೈಫ್, ಸಮಾಜದ ಒಳತಿಗಾಗಿ ಸಮಾಜ ಇದು ಅವರ ಮಾತಲ್ಲಿ ಸ್ಪಷ್ಡವಾಗಿತ್ತು ಎಂದು ತಿಳಿಸಿದರು. ಆಧ್ಯಾತ್ಮಿಕವಾಗಿ ಅವರಲ್ಲಿ ಆಳವಾದ ಜ್ಞಾನವಿತ್ತು. ಸಂತರಲ್ಲೆ ಮಹಾಸಂತರು ನಾನು ಹೋದಾಗ ಮಾತನಾಡ್ತಾ ಇರಲಿಲ್ಲ ಅವರಿಗೆ ಆಕ್ಸಿಜನ್ ಕೊಟ್ಟಿದ್ದಾರೆ ಹೀಗಾಗಿ ನಾನು ಮಾತನಾಡಿಸಲಿಲ್ಲ ಎಂದರು.