ಸದಾಕಾಲ ಗಡಿ-ಭಾಷೆ ವಿವಾದದ ಹೆಸರಿನಲ್ಲಿ ಹೋರಾಟ ಮಾಡುತ್ತಿದ್ದ ಎಂಇಎಸ್ ಇದೀಗ ಹಲಗಾ-ಮಚ್ಛೆ ರಿಂಗ್ ರೋಡ್ ನಿರ್ಮಾಣ ವಿರೋಧಿಸಿ ಇದೇ ನ.28ರಂದು ಪ್ರತಿಭಟನೆಗೆ ನಿರ್ಧರಿಸಿದೆ.
ಹೌದು ಬೆಳಗಾವಿಯ ರಿಂಗ್ ರೋಡ್ ನಿರ್ಮಾಣಕ್ಕೆ ಬೆಳಗಾವಿ ಸುತ್ತಮುತ್ತಲಿನ ಬಹಳಷ್ಟು ರೈತರು ಫಲವತ್ತಾದ ಜಮೀನು ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ. ಹೀಗಾಗಿ ರಿಂಗ್ ರೋಡ್ ನಿರ್ಮಾಣಕ್ಕೆ ಸಾಕಷ್ಟು ರೈತರು ತೀವ್ರ ವಿರೋಧ ವ್ಯಕ್ತಪಡಿಸಿ ಹೋರಾಟ ಮಾಡಿದ್ದಾರೆ. ಇದೀಗ ಎಂಇಎಸ್ ಕೂಡ ಇದೇ ನ.28ರಂದು ಧರಣಿ ನಡೆಸಲು ಮುಂದಾಗಿದೆ. ಈ ಸಂಬಂಧ ಪ್ರತಿಭಟನೆಗೆ ಅನುಮತಿ ನೀಡುವಂತೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಬಿ.ಬೋರಲಿಂಗಯ್ಯ ಅವರಿಗೆ ಎಂಇಎಸ್ ಮುಖಂಡರು ಮನವಿ ಸಲ್ಲಿಸಿದರು.
ಈ ವೇಳೆ ಮಾಜಿ ಶಾಸಕ ಮನೋಹರ ಕಿಣೇಕರ್, ಪ್ರಕಾಶ ಮರಗಾಳೆ, ನ್ಯಾಯವಾದಿ ಸುಧೀರ್ ಚವ್ಹಾಣ, ಮಾಝಿ ಮೇಯರ್ ಶಿವಾಜಿ ಸುಂಟಕರ್, ವಿಕಾಸ ಕಲಘಟಗಿ ಸೇರಿ ಇನ್ನಿತರರು ಉಪಸ್ಥಿತರಿದ್ದರು.