Breaking News
Home / ಜಿಲ್ಲೆ / ಕೊಪ್ಪಳ / ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ನೇಗಿಲು ಹಿಡಿದಿದ್ದಕ್ಕೆ ರೈತರು ಆಕ್ರೋಶ

ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ನೇಗಿಲು ಹಿಡಿದಿದ್ದಕ್ಕೆ ರೈತರು ಆಕ್ರೋಶ

Spread the love

ಕೊಪ್ಪಳ: ಪೋಸ್ ಕೊಡುವ ಭರದಲ್ಲಿ ಸಂಸದರ ಪುತ್ರ ರೈತರಿಗೆ ಅವಮಾನಿಸಿದ ಘಟನೆ ಕೊಪ್ಪಳದಲ್ಲಿ ಬೆಳಕಿಗೆ ಬಂದಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ವೈರಲ್ ಆಗಿದ್ದು, ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ನೇಗಿಲು ಹಿಡಿದಿದ್ದಕ್ಕೆ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೇಗಿಲು ಹಿಡಿದು ಉಳುಮೆ ಮಾಡುವಾಗ ಸಾಮಾನ್ಯವಾಗಿ ರೈತರು ಚಪ್ಪಲಿ ಧರಿಸುವುದಿಲ್ಲ. ಈ ಮೂಲಕ ನೇಗಿಲನ್ನು ಪೂಜ್ಯನೀಯ ಭಾವನೆಯಿಂದ ಕಾಣುತ್ತಾರೆ. ಆದರೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಪುತ್ರ ಅಮರೇಶ್ ಕರಡಿ ರೈತರ ಪರ ಕಾಳಜಿಯಂತೆ ಪೋಸ್ ಕೊಡುವ ಭರದಲ್ಲಿ ಚಪ್ಪಲಿ ಹಾಕಿಕೊಂಡೇ ನೇಗಿಲು ಹೊಡೆದು ರೈತರಿಗೆ ಅವಮಾನಿಸಿದ್ದಾರೆ.

ಈ ವಿಡಿಯೋವನ್ನು ಸ್ವತಃ ಅಮರೇಶ್ ಕರಡಿ ಅಭಿಮಾನಿಗಳೇ ಹರಿಬಿಟ್ಟಿದ್ದು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಡಿಯೋ ಕಂಡ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪೂಜ್ಯನೀಯ ಭಾವನೆಯಿಂದ ನೋಡುವ ನೇಗಿಲನ್ನು ರೈತರು ಚಪ್ಪಲಿ ಹಾಕಿಕೊಂಡು ಉಳುಮೆ ಮಾಡುವುದಿಲ್ಲ. ಆದರೆ ಸಂಸದರ ಪುತ್ರ ಅಮರೇಶ್ ಕರಡಿ ಚಪ್ಪಲಿ ಹಾಕಿಕೊಂಡು ಪೋಸ್ ನೀಡಿ ರೈತರಿಗೆ ಅವಮಾನಿಸಿದ್ದಾರೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


Spread the love

About Laxminews 24x7

Check Also

ಆಗಸ್ಟ್​ ತಿಂಗಳೊಳಗೆ ಐದೂ ಗ್ಯಾರಂಟಿ ಯೋಜನೆಗಳನ್ನು ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ ಎಂದು ಸಚಿವ ಶಿವರಾಜ ತಂಗಡಗಿ

Spread the love ಕೊಪ್ಪಳ: ಯುಪಿಎ ಸರ್ಕಾರದ ಅವಧಿಯಲ್ಲಿ ಆಹಾರ ಭದ್ರತೆ ಕಾನೂನು ಜಾರಿಗೆ ತರಲಾಗಿದೆ. ನಾವು ಐದೂ ಗ್ಯಾರಂಟಿಗಳನ್ನು ಯಶಸ್ವಿಯಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ