Home / ಜಿಲ್ಲೆ / ಬೆಂಗಳೂರು / ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

ಸೊಳ್ಳೆ ಕಚ್ತಿದೆಂದು ನಿದ್ರಿಸದೆ ಸಂಜನಾ ರಂಪಾಟ!

Spread the love

ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಪರಪ್ಪನ ಅಗ್ರಹಾರ ಜೈಲು ಸೇರಿರುವ ತುಪ್ಪದ ಬೆಡಗಿ ಏನು ಮಾಡಬೇಕೆಂದು ತಿಳಿಯದೇ ಒದ್ದಾಡುತ್ತಿದ್ದಾರೆ. ಈಗ ಸಂಜನಾ ಕೂಡ ಅವರಿಗೆ ಸಾಥ್ ಕೊಟ್ಟಿದ್ದಾರೆ. ಇಬ್ಬರೂ ಒಂದೇ ಕೋಣೆಯಲ್ಲಿ ವಾಸ ಮಾಡುತ್ತಿದ್ದಾರೆ.

ಇಷ್ಟು ದಿನ ಸುಪ್ಪತ್ತಿಗೆಯಲ್ಲಿದ್ದ ನಟಿಮಣಿಯರು ಈಗ ಜೈಲು ಸೇರಿ ಪಡಬಾರದ ಕಷ್ಟ ಪಡುತ್ತಿದ್ದಾರೆ. ರಾಗಿಣಿ ಜೈಲುವಾಸ 4ನೇ ದಿನಕ್ಕೆ ಕಾಲಿಟ್ಟಿದ್ದರೆ, ಸಂಜನಾ ಜೈಲುವಾಸ ಒಂದು ದಿನ ಪೂರೈಸಿದೆ. ಜೈಲು ಅಧಿಕಾರಿಗಳು ಸಂಜನಾ-ರಾಗಿಣಿಯನ್ನು ಕ್ವಾರಂಟೈನ್ ಕೇಂದ್ರದ ಒಂದೇ ಕೊಠಡಿಯಲ್ಲಿ ಇರಿಸಿದ್ದಾರೆ. ಕಳೆದ ರಾತ್ರಿ 2 ಗಂಟೆ ತನಕ ನಟಿ ಸಂಜನಾ ನಿದ್ದೆ ಮಾಡದೇ ಅರಚಿ ರಂಪಾಟ ನಡೆಸಿದ್ದಾರೆ. ಸೊಳ್ಳೆ ಕಚ್ಚುತ್ತಿದೆ, ನಿದ್ದೆ ಬರ್ತಿಲ್ಲ, ತಲೆ ನೋವು ಜಾಸ್ತಿ ಆಗಿದೆ, ಟ್ರೀಟ್ಮೆಂಟ್ ಕೊಡಿಸಿ ಎಂದು ಮಧ್ಯರಾತ್ರಿ ಕಿರುಚಾಡಿದ್ದಾರೆ. ಈ ವೇಳೆ, ನಟಿ ರಾಗಿಣಿ, ಸಂಜನಾರನ್ನು ಸಂತೈಸಿದ್ದಾರೆ ಎಂದು ತಿಳಿದುಬಂದಿದೆ.

ಮೇಕಪ್ ಕಿಟ್ ತರಿಸಿಕೊಂಡ್ರಾ ತುಪ್ಪದ ಬೆಡಗಿ?
ನಟಿ ರಾಗಿಣಿ ಬಾಕಿ ದಿನಗಳನ್ನು ಇದೇ ಕೋಣೆಯಲ್ಲಿ ಹೇಗೆ ಕಳೆಯಬೇಕೆಂದು ಚಿಂತಿಸುತ್ತಿದ್ದಾರೆ. ಲೈಫೇ ಸುಟ್ಟು ಹೋಯ್ತಲ್ಲ ಎನ್ನುತ್ತಾ ಅಳುತ್ತಿದ್ದಾರೆ. ಸಂಜನಾ ಕೂಡ ಈಗ ರಾಗಿಣಿಗೆ ಸಾಥ್ ಕೊಟ್ಟಿದ್ದಾರೆ. ಒಂದೇ ಕೋಣೆಯಲ್ಲಿ ಇಬ್ಬರೂ ನಟಿಯರು ಕಷ್ಟ ಸುಖ ಹಂಚಿಕೊಳ್ಳುತ್ತಿದ್ದಾರೆ. ಜೈಲಿನ ಕೋಣೆ ಹೊರಗೆ ಸುತ್ತಾಡಲು ಅವಕಾಶ ಇದ್ದರೂ ರಾಗಿಣಿ ನಾಲ್ಕು ದಿನಗಳಿಂದ ಹೊರಗೆ ಬಂದಿಲ್ವಂತೆ. ಜೈಲೂಟವನ್ನೇ ಮೃಷ್ಟಾನ್ನವೆಂದು ತಿನ್ನುತ್ತಿದ್ದಾರೆ. ಮನೆಯಿಂದ ತರಿಸಿಕೊಂಡ ಇಂಗ್ಲಿಷ್ ಪುಸ್ತಕಗಳನ್ನು ಓದುತ್ತಿದ್ದಾರೆ. ಅಪ್ಪ-ಅಮ್ಮ ನೋಡಲು ಬಂದರೂ ಅದಕ್ಕೆ ಪೊಲೀಸರು ಅವಕಾಶ ಕೊಟ್ಟಿಲ್ಲ. ಇದೆಲ್ಲದರ ನಡುವೆ ರಾಗಿಣಿ ಮನೆಯಿಂದ ಮೇಕಪ್ ಕಿಟ್ ತರಿಸಿಕೊಂಡಿದ್ದಾರೆ ಎಂಬ ಸುದ್ದಿಯೊಂದು ಹಬ್ಬಿದೆ.

 

ಜೈಲಲ್ಲಿರುವ ಸಂಜನಾಗೆ ಬಿಗ್ ಶಾಕ್!
ಡ್ರಗ್ ಪೆಡ್ಲರ್ ಪ್ರಶಾಂತ್ ರಂಕಾ ಜೊತೆಗೆ ಡ್ರಗ್ಸ್ ಸರಬರಾಜಿನಲ್ಲಿ ನಟಿ ಸಂಜನಾ ಕೂಡ ಪಾಲುದಾರರಾಗಿದ್ದರು ಎಂಬ ಅಂಶ ಸಿಸಿಬಿ ತನಿಖೆಯಲ್ಲಿ ಬಯಲಾಗಿದೆ ಎನ್ನಲಾಗಿದೆ. ಖುದ್ದು ಡ್ರಗ್ ಪೆಡ್ಲರ್ ಪ್ರಶಾಂತ್ ರಂಕಾ ಈ ವಿಚಾರವನ್ನು ಸಿಸಿಬಿ ಅಧಿಕಾರಿಗಳ ಮುಂದೆ ಹೇಳ್ಕೊಂಡು ತಪ್ಪೊಪ್ಪಿಕೊಂಡಿದ್ದಾನೆ. ಕೇರಳ, ಪಂಜಾಬ್, ಗೋವಾ, ಮುಂಬೈ ಹೀಗೆ ಬೇರೆ ಬೇರೆ ಕಡೆಯಿಂದ ಡ್ರಗ್ಸ್ ತರಿಸಿಕೊಂಡು ತಾವು ಪಾಲ್ಗೊಳ್ಳುವ ಪಾರ್ಟಿಗಳಿಗೆ ಇಬ್ಬರು ಮಾದಕ ವಸ್ತು ಸರಬರಾಜು ಮಾಡ್ತಿದ್ರು. ಪಾರ್ಟಿಗೆ ಬರುವ ಉದ್ಯಮಿಗಳಿಗೆ, ರಾಜಕಾರಣಿಗಳು, ಚಿತ್ರನಟರಿಗೆ ಮಾದಕ ವಸ್ತುವನ್ನ ಮಾರಾಟ ಮಾಡಿದ್ರು. ಅಲ್ಲದೇ, ಪ್ರಶಾಂತ್ ರಂಕಾ ಕೂಡ ಸಂಜನಾ ಜೊತೆ ವಿದೇಶಗಳಲ್ಲೂ ಡ್ರಗ್ಸ್ ಪಾರ್ಟಿ ಮಾಡಿದ್ದಾನಂತೆ. ಇದೆಲ್ಲಾ ವಿಚಾರ ಸಿಸಿಬಿ ಕೋರ್ಟ್‍ಗೆ ಸಲ್ಲಿಸಿರುವ ರಿಮ್ಯಾಂಡ್ ಅರ್ಜಿಯಲ್ಲಿ ನಮೂದಾಗಿದೆ.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ