Home / ಜಿಲ್ಲೆ / ಬೆಳಗಾವಿ / ಮೀನು ಹಿಡಿಯುವ ವಿಚಾರವಾಗಿ ಜಗಳ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಮೀನು ಹಿಡಿಯುವ ವಿಚಾರವಾಗಿ ಜಗಳ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

Spread the love

ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಕೆರೆಯಲ್ಲಿ ಬುಧವಾರ ಮೀನು ಹಿಡಿಯುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ.

ಹುಚ್ಚಾನಟ್ಟಿ ಗ್ರಾಮದ ಶಂಕರ ಪಾಟೀಲ (28) ಹಲ್ಲೆಯಿಂದ ಗಾಯಗೊಂಡವರು.

ಅವರನ್ನು ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದೆ.

ಶಂಕರ ಅವರು ನಾವಗೆ ಗ್ರಾಮದ ಕೆರೆಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಅದೇ ಜಾಗದಲ್ಲಿ ಮೀನು ಹಿಡಿಯಲು ಬಂದ ಇನ್ನೊಂದು ಗುಂಪಿನ ಯುವಕರು ತಕರಾರು ತೆಗೆದರು. ತಾವು ಕೇಳಿದ ಪ್ರಶ್ನೆಗೆ ಮರಾಠಿಯಲ್ಲಿ ಉತ್ತರ ನೀಡುವಂತೆ ಶಂಕರ ಅವರನ್ನು ಗದರಿಸಿದರು. ಆಗ ಶಂಕರ ಬೆಂಬಲಿಗರು ಕೂಡ ಸ್ಥಳಕ್ಕೆ ಬಂದರು. ಎರಡೂ ಗುಂಪಿನ ಯುವಕರ ಮಧ್ಯೆ ಗಲಾಟೆ ಗಲಾಟೆ ನಡೆಯಿತು.

ಈ ವೇಳೆ ಐವರು ಯುವಕರ ಗುಂಪು ಶಂಕರ ಅವರ ತಲೆ, ಕೈ, ಕಾಲುಗಳಿಗೆ ಬಡಿಗೆ, ಕಲ್ಲಿನಿಂದ ಹಲ್ಲೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ


Spread the love

About Laxminews 24x7

Check Also

ಕರ್ನಾಟಕ ‘SSLC ಪರೀಕ್ಷೆ-2’ರ ‘ಪರಿಷ್ಕೃತ ವೇಳಾಪಟ್ಟಿ’ ಪ್ರಕಟ

Spread the love ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯಿಂದ ಎಸ್ ಎಸ್ ಎಲ್ ಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ