Breaking News
Home / ರಾಜಕೀಯ / ಕಾಂಗ್ರೆಸ್‍ನ ಕೀಳು ಮಟ್ಟದ ಟೂಲ್ ಕಿಟ್ ಟೆರರಿಸಮ್ ಸಮಾಜದಲ್ಲಿ ಗೊಂದಲ ಉಂಟು ಮಾಡುವುದು

ಕಾಂಗ್ರೆಸ್‍ನ ಕೀಳು ಮಟ್ಟದ ಟೂಲ್ ಕಿಟ್ ಟೆರರಿಸಮ್ ಸಮಾಜದಲ್ಲಿ ಗೊಂದಲ ಉಂಟು ಮಾಡುವುದು

Spread the love

ಪಠ್ಯಕ್ರಮದ ವಿಷಯದಲ್ಲಿ ಜನರ ಭಾವನೆ ಉದ್ರೇಕಗೊಳಿಸುವುದು, ಸಮಾಜದಲ್ಲಿ ಗೊಂದಲ ಉಂಟು ಮಾಡುವುದು ಕಾಂಗ್ರೆಸ್‍ನ ಕೀಳುಮಟ್ಟದ ಟೂಲ್ ಕಿಟ್ ಟೆರರಿಸಮ್ ಎಂದು ಕುಡಚಿ ಶಾಸಕ ಪಿ.ರಾಜೀವ್ ಕಿಡಿಕಾರಿದ್ದಾರೆ.

ಬುಧವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಶಾಸಕ ಪಿ.ರಾಜೀವ್ ಮುಗ್ಧ ಜನರು, ಸಾಹಿತಿಗಳನ್ನು ಉದ್ರೇಕಗೊಳಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಹಿಟ್ ಆಂಡ್ ರನ್ ಎಂಬುವುದು ಕಾಂಗ್ರೆಸ್‍ನ ಸಂಸ್ಕøತಿಯಾಗಿದೆ. ಬಿಟ್ ಕ್ವಾಯಿನ್, ಸಾಹಿತ್ಯದ ವಿಷಯ ತೆಗೆದುಕೊಳ್ಳುತ್ತಾರೆ. ಅದು ಪೂರ್ಣಗೊಳ್ಳವುದು ಕಡಿಮೆ ಹೀಗಾಗಿ ಈಗ ಪಠ್ಯ ಕ್ರಮದ ಬಗ್ಗೆ ಅಪಸ್ವರ ಎತ್ತಿರುವುದು ಕಾಂಗ್ರೆಸ್‍ನ ಕೀಳು ಮಟ್ಟದ ಟೂಲ್ ಕಿಟ್ ಟೆರರಿಸಮ್ ಎಂದು ಗುಡುಗಿದರು.

ಬರಗೂರು ರಾಮಚಂದ್ರಪ್ಪನವರ ಸೈದ್ಧಾಂತಿಕ ವಿಚಾರ ಏನೇ ಇದ್ದರೂ ಅವರ ಅಕ್ಷರಗಳನ್ನು ಗೌರವಿಸುತ್ತೇನೆ. ಆದರೆ ಅವರ ಮೊಂಡು ವಾದ ಸರಿಯಲ್ಲ. ರೋಹಿತ ಚಕ್ರತೀರ್ಥ ಪಠ್ಯಕ್ರಮದ ಸಮಿತಿಯನ್ನು ವಿರೋಧ ಮಾಡುತ್ತಿರುವ ಬರಗೂರು ರಾಮಚಂದ್ರಪ್ಪನವರು ಸಿದ್ದರಾಮಯ್ಯನವರ ಸರಕಾರದಲ್ಲಿ ಏನೂ ಮಾಡಿದರು ಎನ್ನುವುದನ್ನು ಒಮ್ಮೆ ನೆನಪಿಸಿಕೊಳ್ಳಲಿ. ಬಸವಣÐವರ ವಚನಗಳನ್ನು ಪಠ್ಯಕ್ರಮದಲ್ಲಿ ಕೈ ಬಿಟ್ಟಿಲ್ಲ. ಬರಗೂರು ರಾಮಚಂದ್ರಪ್ಪನವರ ಪಠ್ಯಕ್ರಮದಲ್ಲಿ ಕರ್ನಾಟಕದಲ್ಲಿ ಬ್ರಿಟಿμï ಆಡಳಿತದ ವಿರೋಧಗಳು ಎಂಬ ವಿಷಯದಲ್ಲಿ ಕೇವಲ ಟಿಪ್ಪು ಸುಲ್ತಾನ್, ಹೈದರಾಲಿ ಸೇರಿದಂತೆ ಕೆಲವೇ ಕೆಲವು ಜನರ ವಿಷಯ ಹಾಕಿದ್ದರು. ಯಾಕೆ ಕಿತ್ತೂರು ರಾಣಿ ಚೆನ್ನಮ್ಮ, ವೀರಮದಕರಿ ಅಂಥವರ ಹೆಸರನ್ನು ಸೇರಿಸುವ ಪ್ರಯತ್ನ ಮಾಡಲಿಲ್ಲ ಎಂದು ಪಿ.ರಾಜೀವ್ ಪ್ರಶ್ನಿಸಿದರು.


Spread the love

About Laxminews 24x7

Check Also

ಬೆಂ.ಗ್ರಾದಲ್ಲಿ ಕಾಂಗ್ರೆಸ್​ನಿಂದ ಗ್ಯಾರಂಟಿ ಕಾರ್ಡ್​​ ಹಂಚಿಕೆ ಆರೋಪ; BJP-JDS ಕಾರ್ಯಕರ್ತರ ಮೇಲೆ ಹಲ್ಲೆ!

Spread the love ರಾಮನಗರ: ಬೆಂಗಳೂರು ಗ್ರಾಮಾಂತರದ (Bengaluru Rural) ರಾಮನಗರದಲ್ಲಿ (Ramanagara) ಕಾಂಗ್ರೆಸ್ ಕಾರ್ಯಕರ್ತರು, ಡಿಸಿಎಂ ಡಿಕೆ ಶಿವಕುಮಾರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ