Breaking News
Home / ರಾಜಕೀಯ / ರವಿ ಚೆನ್ನಣ್ಣನವರ್ ವರ್ಗಾವಣೆ; ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೇಮಕ

ರವಿ ಚೆನ್ನಣ್ಣನವರ್ ವರ್ಗಾವಣೆ; ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೇಮಕ

Spread the love

ಬೆಂಗಳೂರು: ಇತ್ತೀಚೆಗೆ ಸಾಕಷ್ಟು ಆರೋಪ ಹಾಗೂ ವಿವಾದಗಳಿಗೆ ಈಡಾಗಿದ್ದ ಹಿರಿಯ ಐಪಿಎಸ್​ ಅಧಿಕಾರಿ ರವಿ ಚನ್ನಣ್ಣನವರ್​ಗೆ ರಾಜ್ಯ ಸರ್ಕಾರ ಶಾಕ್ ನೀಡಿದೆ. ಎಕ್ಸಿಕ್ಯೂಟಿವ್​​ ಸ್ಥಾನದಿಂದ ನಾನ್​​-ಎಕ್ಸಿಕ್ಯೂಟಿವ್ ಸ್ಥಾನಕ್ಕೆ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಆದೇಶ ನೀಡಿದೆ.

ಸಿಐಡಿಯಲ್ಲಿ ಅಧಿಕಾರಿಯಾಗಿದ್ದ ರವಿ ಚನ್ನಣ್ಣನವರ್​​ ಅವರನ್ನ ಸರ್ಕಾರ ನಿಗಮ ಮಂಡಳಿಗೆ ವರ್ಗಾವಣೆ ಮಾಡಿರೋದು ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಕೇವಲ ರವಿ ಚನ್ನಣ್ಣನವರ್ ಮಾತ್ರವಲ್ಲ, ಒಟ್ಟು ಒಂಬತ್ತು ಐಪಿಎಸ್​ ಅಧಿಕಾರಿಗಳನ್ನು ಸರ್ಕಾರ ವರ್ಗಾವಣೆ ಮಾಡಿ ಆದೇಶ ನೀಡಿದೆ. ಐಪಿಎಸ್​ ರವಿ. ಡಿ. ಚೆನ್ನಣ್ಣನವರ್ ಅವರನ್ನು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮಕ್ಕೆ ನೇಮಿಸಲಾಗಿದೆ. ಇನ್ನುಳಿದ ಐಪಿಎಸ್​ ಅಧಿಕಾರಿಗಳಾದ ಭೀಮಾಶಂಕರ್​ ಗುಳೇದ್​, ಅಬ್ದುಲ್​ ಅಹ್ಮದ್​, ಟಿ.ಶ್ರೀಧರ್​, ಟಿ.ಪಿ.ಶಿವಕುಮಾರ್​, ದಿವ್ಯಾಸಾರಾ ಥಾಮಸ್​, ಡಿ. ಕಿಶೋರ್​ ಬಾಬು, ಎ. ಗಿರಿ ಅವರನ್ನು ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಯಾವ ಅಧಿಕಾರಿ ಎಲ್ಲಿಗೆ ವರ್ಗ?

  1. ರವಿ ಚನ್ನಣ್ಣನವರ್, ಸಿಐಡಿಯಿಂದ ವಾಲ್ಮಿಕಿ ಅಭಿವೃದ್ಧಿ ನಿಗಮ
  2. ಅಬ್ದುಲ್ ಅಹಾದ್ ಎಸಿಬಿ ಯಿಂದ ಕೆಎಸ್​ಆರ್​ಟಿಸಿ ವಿಜಿಲೆನ್ಸ್
  3. ಟಿ. ಶ್ರೀಧರ ಕೊಪ್ಪಳ ಎಸ್.ಪಿ ಯಿಂದ ಡಿಸಿಆರ್​ಇ
  4. ದಿವ್ಯಸಾರ ಥಾಮಸ್, ಚಾಮರಾಜನಗರ ಎಸ್.ಪಿ ಯಿಂದ ಪೊಲೀಸ್ ಅಕಾಡೆಮಿಯ ಮೈಸೂರು ಡೆಪ್ಯೂಟಿ ಡೈರೆಕ್ಟರ್
  5. ಕಿಶೋರ್ ಬಾಬು, ಬೀದರ್ ಎಸ್​ಪಿ ಯಾಗಿ ವರ್ಗಾವಣೆ
  6. ಅರುಣಗಂಶು ಗಿರಿ, ಎಸಿಬಿ ಯಿಂದ ಕೊಪ್ಪಳ ಎಸ್​ಪಿಯಾಗಿ ವರ್ಗಾವಣೆ
  7. ಎಲ್.ನಾಗೇಶ್, ಬೀದರ್ ಎಸ್.ಪಿ ಯಿಂದ ಸಿಐಡಿ ಗೆ ವರ್ಗಾವಣೆ
  8. ಟಿ.ಪಿ ಶಿವಕುಮಾರ್, ಚಾಮರಾಜನಗರ ಎಸ್​ಪಿಯಾಗಿ ನೇಮಕ

ವರ್ಗಾವಣೆ ಪತ್ರ ಇಲ್ಲಿದೆ:


Spread the love

About Laxminews 24x7

Check Also

ಐಸ್ ಕ್ರೀಂ ತಿಂದು ಅವಳಿ ಮಕ್ಕಳು ಸಾವು ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಹೆತ್ತ ಕಂದಮ್ಮಗಳನ್ನೇ ವಿಷಪ್ರಾಶನ ಮಾಡಿಸಿ ಕೊಂದ ತಾಯಿ

Spread the love ಮಂಡ್ಯ: ಐಸ್ ಕ್ರೀಂ ಸೇವಿಸಿದ್ದ ಅವಳಿ ಮಕ್ಕಳಿಬ್ಬರೂ ಮೃತಪಟ್ಟಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಹೆತ್ತ ತಾಯಿಯೇ ವಿಷವುಣಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ