Breaking News
Home / ರಾಜಕೀಯ / ಈ ಸರ್ಕಾರದ ಆಯಸ್ಸು 7 ತಿಂಗಳು:ಮೈಲಾರ ಶ್ರೀಗಳ ಭವಿಷ್ಯ

ಈ ಸರ್ಕಾರದ ಆಯಸ್ಸು 7 ತಿಂಗಳು:ಮೈಲಾರ ಶ್ರೀಗಳ ಭವಿಷ್ಯ

Spread the love

ವಿಜಯನಗರ : ಈಗಾಗಲೇ ರಾಜ್ಯ ರಾಜಕೀಯ, ನೆರೆ, ಪ್ರವಾಹ ಕುರಿತಂತೆ ಸ್ಪೋಟ ಭವಿಷ್ಯವನ್ನು ಕೋಡಿ ಮಠದ ಶ್ರೀಗಳು ( Kodi Matt Sri ) ನುಡಿದಿದ್ದಾರೆ. ಇದರ ಬೆನ್ನಲ್ಲೇ, ರಾಜ್ಯದಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆ ( Karnataka Next CM ) ಕುರಿತಂತೆ ಮೈಲಾರಲಿಂಗೇಶ್ವರ ಭವಿಷ್ಯವಾಣಿ ( Mylaralingeshwar Prediction ) ನುಡಿದಿದೆ.

 

ಈ ಕುರಿತಂತೆ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದ ಧರ್ಮಕರ್ತರು, ಇಂದು ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತಂತೆ ಭವಿಷ್ಯವಾಣಿ ನುಡಿದಿದ್ದು, ಈಗ ಮುಖ್ಯಮಂತ್ರಿಯಾಗಿರುವಂತ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಕೇವಲ 6 -7 ತಿಂಗಳು ಮಾತ್ರವೇ ರಾಜ್ಯಭಾರ ಮಾಡಲಿದ್ದಾರೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

 

ಇನ್ನೂ ಮುಂದುವರೆದು.. ಯಡಿಯೂರಪ್ಪ ರಾಜೀನಾಮೆ ( Yediyurappa Resignation ) ಬಳಿಕ, ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾರೆ. ಅವರು 6 ರಿಂದ 7 ತಿಂಗಳು ಮಾತ್ರವೇ ಮುಖ್ಯಮಂತ್ರಿಯಾಗಿ ಕೆಲಸ ಮಾಡಬಹುದು. ಮಾರ್ಚ್ ವೇಳೆಗೆ ರಾಜ್ಯದಲ್ಲಿ ಗಡ್ಡಧಾರಿ ವ್ಯಕ್ತಿಯೊಬ್ಬರು ಮತ್ತೆ ಮುಖ್ಯಮಂತ್ರಿಯಾಗಲಿದ್ದಾರೆ ಎಂಬುದಾಗಿ ಭವಿಷ್ಯವಾಣಿ ನುಡಿದ್ದಾರೆ.


Spread the love

About Laxminews 24x7

Check Also

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಜೋಶಿ

Spread the love ಹುಬ್ಬಳ್ಳಿ : ಮುಸ್ಲಿಂ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ