Breaking News
Home / new delhi / ಇವನು ಸಂಜು ಬಾಬಾ ಅಲ್ಲ ಸಂಜು ದಾದಾ!

ಇವನು ಸಂಜು ಬಾಬಾ ಅಲ್ಲ ಸಂಜು ದಾದಾ!

Spread the love

ಸಂಜು ಸ್ಯಾಮ್ಸನ್​ರ ಸಿಡಿಲಬ್ಬರದ ಬ್ಯಾಟಿಂಗ್ ಮತ್ತು ರಾಹುಲ್ ತೆವಾಟಿಯಾರ ಸ್ಪಿನ್ ಮೋಡಿಯ ನೆರವಿನಿಂದ ರಾಜಸ್ತಾನ ರಾಯಲ್ಸ್ , ಇಂಡಿಯನ್ ಪ್ರಿಮೀಯರ್ ಲೀಗ್ 13 ನೇ ಆವೃತಿಯ ತನ್ನ ಮೊದಲ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್ ಅಪ್ ಚೆನೈ ಸೂಪರ್ ಕಿಂಗ್ಸ್ ತಂಡವನ್ನು 16 ರನ್​ಗಳಿಂದ ಸುಲಭವಾಗಿ ಸೋಲಿಸಿತು .

ಗೆಲ್ಲಲು 217 ರನ್​ಗಳ ಬೃಹತ್ ಮೊತ್ತದ ಬೆನ್ನಟ್ಟಿದ ಚೆನೈ 200/6 ಗಳಿಸುವಲ್ಲಿ ಮಾತ್ರಯಶ ಕಂಡಿತು . ಮೂರನೇ ಕ್ರಮಾಂಕದಲ್ಲಿ ಆಡಿದ ಫಫ್ ಡು ಪ್ಲೆಸ್ಸಿಸ್ ಅವರ ಶರವೇಗದ ಅರ್ಧ ಶತಕದ (72 ರನ್ , 37 ಎಸೆತ 1X4 7X6) ಹೊರತಾಗಿಯೂ ಪಂದ್ಯವನ್ನು ಸೋತಿತು . ಶೇನ್ ವಾಟ್ಸನ್ 33 (21 1X4 4X6), ಮುರಳಿ ವಿಜಯ್ 21 (21 3X4), ಕೇದಾರ್ ಜಾಧವ್ 22 (16 3X4) ರನ್​ಗಳ ಕಾಣಿಕೆ ನೀಡಿದರು . ಇನ್ನಿಂಗ್ಸ್ ಕೊನೆಯಲ್ಲಿ ನಾಯಕ ಎಮ್ ಎಸ್ ಧೋನಿ ಲಾಂಗ್ ಹ್ಯಾಂಡಲ್ ಉಪಯೋಗಿಸಿ ಅಜೇಯ 29 (17 3X6) ರನ್ ಬಾರಿಸಿದರಾದರೂ ಅದು ಸೋಲಿನ ಅಂತರವನ್ನು ಕಡಿಮೆ ಮಾಡುವಲ್ಲಿ ಮಾತ್ರ ನೆರವಾಯಿತು .

ರಾಜಸ್ತಾನದ ಪರ ತೆವಾಟಿಯಾ 37 ರನ್ ನೀಡಿ 3 ವಿಕೆಟ್ ಪಡೆದರೆ , ಜೊಫ್ರಾ ಆರ್ಚರ್ , ಶ್ರೇಯಸ್ ಗೋಪಾಲ ಮತ್ತು ಟಾಮ್ ಕರನ್ ತಲಾ ಒಂದು ವಿಕೆಟ್ ಪಡೆದರು .

ಅಪಾರ ಪ್ರತಿಭಾವಂತನಾದರೂ ಸದಾ ರಾಷ್ಟ್ರೀಯ ಆಯ್ಕೆ ಸಮಿತಿಯ ಅವಕೃಪೆಗೊಳಗಾಗಿರುವ ಸಂಜು ಸ್ಯಾಮ್ಸನ್ ಇಂದು ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಬಗ್ಗೆ ಮತ್ತೊಂದು ಸ್ಟೇಟ್​ಮೆಂಟ್ ಹೊರಡಿಸಿದರು.

ಯುವ ಆಟಗಾರ ಯಶಸ್ವೀ ಜೈಸ್ವಾಲ್ ಔಟಾದ ನಂತರ ಕ್ರೀಸಿಗೆ ಆಗಮಿಸಿದ 25ರ ಪ್ರಾಯದ ಸ್ಯಾಮ್ಸನ್ ಕೇವಲ 19 ಎಸೆತಗಳಲ್ಲಿ ಅರ್ಧ ಶತಕ ಪೂರೈಸಿದರು. ಲೆಗ್ ಸ್ಪಿನ್ನರ್ ಪಿಯುಷ್ ಚಾವ್ಲಾ ಅವರ ಒಂದು ಓವರ್​ನಲ್ಲಿ ಸ್ಯಾಮ್ಸನ್ ಮತ್ತು ಸ್ಮಿತ್ 28 ರನ್​ಗಳನ್ನು ಚಚ್ಚಿದರು. ಬಿರುಗಾಳಿ ವೇಗದಲ್ಲಿ ಬ್ಯಾಟ್ ಮಾಡಿದ ಸ್ಯಾಮ್ಸನ್ 32 ಎಸೆತಗಳಲ್ಲಿ 74 ರನ್ ಬಾರಿಸಿ ಔಟಾಗುವ ಮುನ್ನ 9 ಬಾರಿ ಚೆಂಡನ್ನು ಬೌಂಡರಿ ಗೆರೆ ಮೇಲಿಂದ ಆಚೆ ಕಳಿಸಿದ್ದರು. ಅವರ ಇನ್ನಿಂಗ್ಸ್​ನಲ್ಲಿದ್ದಿದ್ದ್ದು ಕೇವಲ ಒಂದು ಬೌಂಡರಿ ಮಾತ್ರ. ಸ್ಯಾಮ್ಸನ್ ಅಕ್ಷರಶಃ ಸಿಎಸ್​ಕೆ ಬೌಲರ್​ಗಳ ಮಾರಣ ಹೋಮ ನಡೆಸಿದರು.

  ಆಕ್ರಮಣಕಾರಿ ಮತ್ತು ಅಷ್ಟೇ ಸೆನ್ಸಿಬಲ್ ಆಟವಾಡಿದ ಸ್ಮಿತ್ 47 ಎಸೆತಗಳಲ್ಲಿ 69 ರನ್ (4X4 4X6) ಬಾರಿಸಿದರು . ಸ್ಮಿತ್ ಮತ್ತು ಸ್ಯಾಮ್ಸನ್​ ಎರಡನೇ ವಿಕೆಟ್​ಗೆ ಕೇವಲ 9.2 ಓವರ್​ಗಳಲ್ಲಿ 121 ರನ್ ಸೇರಿಸಿದರು .

  ಇದು ಸಾಲದೆಂಬಂತೆ , ಇನ್ನಿಂಗ್ಸ್ ಕೊನೆಯ ಓವರ್​ನಲ್ಲಿ ಜೊಫ್ರಾ ಆರ್ಚರ್ , ಎನ್ಗಿಡಿಯನ್ನು ಮನಬಂದಂತೆ ಚಚ್ಚಿದರು . ಆ ಓವರ್​ನಲ್ಲಿ ಎನ್ಗಿಡಿ ನೀಡಿದ್ದು ; ಆರ್ಚರ್ ಬಾರಿಸಿದ ನಾಲ್ಕು ಸಿಕ್ಸ್​ರ್​ಗಳು ಸೇರಿದಂತೆ 30 ರನ್ !

ಸಿಎಸ್​ಕೆ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಸ್ಯಾಮ್ ಕರನ್ 33 ರನ್ ನೀಡಿ 3 ವಿಕೆಟ್ ಪಡೆದರೆ , ದೀಪಕ್ ಚಹರ್ , ಎನ್ಗಿಡಿ ಮತ್ತು ಚಾವ್ಲಾ ತಲಾ ಒಂದು ವಿಕೆಟ್ ಪಡೆದರು .


Spread the love

About Laxminews 24x7

Check Also

ಒಂದು ಮತ; ಐದು ವರ್ಷ ಪುಕ್ಕಟೆ ಕೆಲಸ- ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ

Spread the loveವಿಜಯಪುರ: ರಾಜ್ಯ ರಾಜಕೀಯದಲ್ಲಿ ‘ಅಜಾತ ಶತ್ರು’ ಎಂದೇ ಗುರುತಿಸಿಕೊಂಡಿರುವ ದಲಿತ ನಾಯಕ, ಬಿಜೆಪಿ ಲೋಕಸಭೆ ಅಭ್ಯರ್ಥಿ ರಮೇಶ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ