Breaking News
Home / Madikeri / ಮಂಕಡಿಂಗ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ!

ಮಂಕಡಿಂಗ್​ಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ!

Spread the love

 ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ನಡುವಿನ ಪಂದ್ಯದಲ್ಲಿ ರವಿಚಂದ್ರನ್ ಅಶ್ವಿನ್ , ಆರ್​ಸಿಬಿಯ ಓಪನರ್ ಆರನ್ ಫಿಂಚ್ ಅವರನ್ನು ‘ಮಂಕಡಿಂಗ್’ ಮಾಡದೆ ಕೇವಲ ಎಚ್ಚರಿಸಿದ್ದು ಕ್ರಿಕೆಟ್ ವಲಯಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ .

ಭಾರತದ ಮಾಜಿ ಕ್ಯಾಪ್ಟನ್​ಗಳಾದ ಸುನಿಲ್ ಗವಾಸ್ಕರ್ ಮತ್ತು ಕಪಿಲೆ ದೇವ್ , ನಾನ್​ಸ್ಟ್ರೈಕರ್ ಬ್ಯಾಟ್ಸ್​ಮನ್​ನನ್ನು ಮಂಕಡಿಂಗ್ ( ನಾನ್​ಸ್ಟ್ರೈಕರ್ ಬ್ಯಾಟ್ಸ್​ಮನ್ , ಬೌಲರ್ ಚೆಂಡೆಸೆಯುವ ಮೊದಲೇ ಕ್ರೀಸ್ ಬಿಟ್ಟು ಮುಂದೆ ಸಾಗಿದಾಗ ಬೌಲರ್ ಅವನನ್ನು ರನೌಟ್ ಮಾಡುವುದು ) ತಪ್ಪಲ್ಲ , ಕ್ರಿಕೆಟ್ ರೂಲ್ ಬುಕ್​ನಲ್ಲಿ ಅದಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ವಾದಿಸಿದ್ದಾರೆ .

1983 ರಲ್ಲಿ ಬಾರತಕ್ಕೆ ವಿಶ್ವಕಪ್ ಗೆದ್ದು ಕೊಟ್ಟ ಕಪಿಲ್ ಅವರಂತೂ ಕ್ರೀಡಾ ಸ್ಫೂರ್ತಿಯ ಅಂಶವನ್ನೇ ಜಾಲಾಡಿದ್ದಾರೆ . ಹಾಗೆ ಔಟ್ ಮಾಡಬಹುದೆಂದು ಕ್ರಿಕೆಟ್ ನಿಯಮವೇ ಹೇಳುವಾಗ ಕ್ರೀಡಾ ಸ್ಫೂರ್ತಿಯ ಮಾತು ಹೇಗೆ ಉದ್ಭವಿಸುತ್ತದೆ ಅಂತ ಅವರು ಕಿಡಿ ಕಾರಿದ್ದಾರೆ . ಅವತ್ತು ಅಶ್ವಿನ್ , ಫಿಂಚ್​ರನ್ನು ಔಟ್ ಮಾಡಿದ್ದರೆ ಅದು ಖಂಡಿತವಾಗಿಯೂ ಪ್ರಮಾದವೆನಿಸಿಕೊಳ್ಳುತ್ತಿರಲಿಲ್ಲ ಮತ್ತು ಸ್ಪಿರಿಟ್ ಆಫ್ ದಿ ಗೇಮ್​ಗೆ ಧಕ್ಕೆಯೂ ಆಗುತ್ತಿರಲಿಲ್ಲ ಎಂದು ಕಪಿಲ್ ಹೇಳಿದ್ದಾರೆ . ಕಳೆದ ವರ್ಷದ ಐಪಿಎಲ್ ಸೀಸನ್​ನಲ್ಲಿ ಅಶ್ವಿನ್ ರಾಜಸ್ತಾನ ರಾಯಲ್ಸ್ ತಂಡದ ಜೊಸ್ ಬಟ್ಲರ್ ಅವರನ್ನು ಮಂಕಡಿಂಗ್ ಮಾಡಿದ್ದರು . ಆದರೆ , ಅವರ ಕ್ರಮವನ್ನು ವ್ಯಾಪಕವಾಗಿ ಖಂಡಿಸಲಾಗಿತ್ತು .

”ಕ್ರಿಕೆಟ್ ಈಗಾಗಲೇ ಸಂಪೂರ್ಣವಾಗಿ ಬ್ಯಾಟ್ಸ್​ಮನ್ ಪರವಾಗಿದೆ , ಇನ್ನೆಷ್ಟು ದಿನ ಬೌಲರ್​ಗಲು ಸುಖಾಸುಮ್ಮನೆ ದಂಡನೆಗೊಳಗಾಗಬೇಕು ? ಅವರು ಬೌಲ್ ಮಾಡುವಾಗ ಓವರ್​ಸ್ಟೆಪ್ ಮಾಡಿದರೆ ಅಂಪೈರ್ ನೋ ಬಾಲ್   ಅಂತ ಕೂಗುತ್ತಾನೆ , ಒಂದು ಸೆಂಟಿಮೀಟರ್​ನಷ್ಟೇ ಲೆಗ್​ಸ್ಟಂಪ್​ನಿಂದ ಎಸೆತ ಆಚೆಯಿದ್ದರೆ ವೈಡ್ ಬಾಲ್ ಅಂತಾನೆ . ಪರಿಸ್ಥಿತಿ ಹೀಗಿರುವಾಗ ಬ್ಯಾಟ್ಸ್​ಮನ್​ಗೆ ಯಾಕೆ ಅನುಚಿತ ಲಾಭ ಸಿಗಬೇಕು ? ಬೌಲರ್ ಚೆಂಡನ್ನು ಎಸೆಯುವ ಮೋದಲೇ ನಾನ್​ಸ್ಟ್ರೈಕರ್ ಕ್ರೀಸ್ ಬಿಟ್ಟು ಮುಂದೆ ಹೋದರೆ ಅದು ಕಳ್ಳತನವೆನಿಸಿಕೊಳ್ಳುತ್ತದೆ , ಅದು ಕ್ರೀಡಾ ಸ್ಫೂರ್ತಿಯೇ ?” ಎಂದು ಕಪಿಲ್ ದೇವ್ ಹೇಳಿದ್ದಾರೆ .

ಕ್ರೀಡೆಯನ್ನು ಬಹಳ ವರ್ಷಗಳಿಂದ ಅನುಸರಿಸಿಕೊಂಡು ಬಂದವರಿಗೆ , ಕಪಿಲ್ ಸಹ ಒಮ್ಮೆ ಮಂಕಡಿಂಗ್ ಮಾಡಿದ್ದು ನೆನೆಪಿರಬಹುದು . ಆದು ನಡೆದಿದ್ದು ಭಾರತದ 1991-92 ರ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ . ಪೋರ್ಟ್ ಎಲಿಜಬೆತ್​ನಲ್ಲಿ ನಡೆದ ಒಂದು ದಿನದ ಅಂತರರಾಷ್ಟ್ರೀಯ ಪಂದ್ಯದಲ್ಲಿ , ನಾನ್​ಸ್ಟ್ರೈಕರ್ ತುದಿಯಲ್ಲಿದ್ದ ಪೀಟರ್ ಕರ್ಸ್ಟೆನ್ ತಾನು ಬೌಲ್ ಮಾಡುವ ಮೊದಲೇ ಕ್ರೀಸ್​ನಿಂದ ಆಚೆ ಹೋಗುತ್ತಿರುವುದನ್ನು ಗಮನಿಸಿದ ಕಪಿಲ್ ಹಾಗೆ ಮಾಡಬೇಡವೆಂದು ಒಂದೆರಡು ಬಾರಿ ಎಚ್ಚರಿಕೆ ನೀಡಿದ್ದರು . ಆದರೆ ಕರ್ಸ್ಟೆನ್ ಕ್ರೀಸ್ ಬಿಡುವುದನ್ನು ಮುಂದುವರಿಸಿದಾಗ ಕಪಿಲ್ , ಮಂಕಡಿಂಗ್ ಮಾಡಿದರು .

ಬ್ಯಾಟ್ಸ್​ಮನ್​ಗಳು ಹಾಗೆ ಅನುಚಿತ ಲಾಭ ಪಡೆಯಬಾರದೆಂದು , ಸನ್ನಿ ಮತ್ತು ಕಪಿಲ್ ಪ್ರತಿಪಾದಿಸುತ್ತಾರೆ . ಅಂಪೈರ್​ಗಳು ಅದನ್ನು ಗಮನಿಸುತ್ತಿರಬೇಕೆಂದು ಹೇಳುವ ಅವರು , ನಾನ್​ಸ್ಟ್ರೈಕರ್ ಕ್ರೀಸ್ ಬಿಟ್ಟರೆ , ಬ್ಯಾಟಿಂಗ್ ಮಾಡುತ್ತಿರುವ ತಂಡಕ್ಕೆ ಒಂದು ರನ್ ದಂಡ ವಿಧಿಸಬೇಕೆನ್ನುತ್ತಾರೆ .


Spread the love

About Laxminews 24x7

Check Also

ಲೋಕಸಭಾ ಚುನಾವಣೆ: ಸಂಜೆ 5 ಗಂಟೆಯವರೆಗೆ ಯಾವ ಕ್ಷೇತ್ರದಲ್ಲಿ ಎಷ್ಟು ಮತದಾನ? ಇಲ್ಲಿದೆ ಮಾಹಿತಿ

Spread the loveಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ 2ನೇ ಹಂತದ ಮತದಾನ ನಡೆಯುತ್ತಿದ್ದು, ಮತದಾನ ಪ್ರಕ್ರಿಯೆ ಮುಗಿಯಲು ಕೆಲವೇ ಹೊತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ