ಹಾನಗಲ್ 13/10/2020 ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ATM ನಲ್ಲಿ ATM ಕಾರ್ಡುಗಳನ್ನು ಅದಲು ಬದಲು ಮಾಡಿ ಜನರಿಗೆ ವಂಚಿಸುವ ಬುರ್ಕಾದಾರಿ ಮಹಿಳೆ ಶಿರಾಳಕೊಪ್ಪದ ಕೆಸರಬಾನು, ಇಸ್ರಾಅಹಮದ್ ಇವರ ಹೆಂಡತಿಯಾದ ಕೆಸರಬಾನು ಬಂಕಾಪುರ, ಶಿರಾಳಕೊಪ್ಪದಲ್ಲಿ ಇಂತಹ ATM ನಲ್ಲಿ ಕಾರ್ಡುಗಳನ್ನು ಅದಲು ಬದಲು ಮಾಡಿ ಜನರಿಗೆ ವಂಚಿಸಿದ. ಈ ಕೆಸರಬಾನು ಸಾಮಾನ್ಯ ಮಹಿಳೆಯಲ್ಲ, ದಿನಾಂಕ 29/06/2020 ರಂದು ಈ ಆರೋಪಿಯ ಮೇಲೆ ಕಲಂ 420 IPCC ಕಾಯ್ದೆ ಪ್ರಕಾರ ಹಾವೇರಿ ಜಿಲ್ಲೆಯ ಹಿರೇಕೆರೂರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆದರೂ ಪೋಲಿಸರಿಗೆ ಮರೆಮಾಚಿದ ಈ ಚಾಲಾಕಿ ಹೆಣ್ಣು(ಕೆಸರಬಾನು)ಹಾನಗಲ್, ಆನವಟ್ಟಿ, ಬಂಕಾಪುರ, ಶಿರಾಳಕೊಪ್ಪ, ಶಿಕಾರಿಪುರ, ಈ ಊರೂಗಳನ್ನು ಸೇರಿದಂತೆ ಇನ್ನೂ ಅನೇಕ ಊರೂಗಳನ್ನು ತಿರುಗಾಡಿ ATM ಗ್ರಾಹಕರನ್ನು ವಂಚಿಸುವ ಈ ಚಾಲಾಕಿ ಹೆಂಗಸು ಪೋಲಿಸರಿಗೆ ಮರೆಮಾಚಿ ಗ್ರಾಹಕರಿಗೆ ಮರೆಮಾಚಿ ಸದೃಢವಾಗಿ ತನ್ನ ಚಾಣಾಕ್ಷತನದಿಂದ ATM ಗ್ರಾಹಕರಿಗೆ ವಂಚಿಸುವ ಈ ಮಹಿಳೆಯನ್ನು ಬೇಟೆಗಾರರ ಬೇಟೆಯಾಡುವ ರಣಬೇಟೆಗಾರರು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಪೋಲಿಸ್ ಠಾಣೆಯ ಪೋಲಿಸರು ಖಚಿತ ಮಾಹಿತಿ ಪಡೆದ ಇವರು CPI ಗಣಾಚಾರ್ಯ, PSI ಶ್ರೀಶೈಲ ಪಟ್ಟಣಶೆಟ್ಟಿ ಅಪರಾಧ ವಿಭಾಗದ ಸಿಬ್ಬಂದಿಗಳಾದ ಮಹೇಶ ಹೊರಕೆರಿ, ಕಿರಣ ಸಣ್ಣಗೌಡರ ಹೊನ್ನಳ್ಳಿ, ಮಾರುತಿ ಹಾಲಬಾವಿ, ಆನಂದ ದೊಡ್ಡ ಕುರಬರ, ಪಿ. ಬಿ ಹೊಸಮನಿ, ವೀರಣ್ಣ ತಿಗರಿ, ಇಲಿಯಾ ಜೆ, ಮಾಳಪ್ಪ ಹೆಚ್, ಜಾಲಗೇರಿ ಅಪರಾಧಿಯನ್ನು ಬಂಧಿಸುವಲ್ಲಿ ಹಾನಗಲ್ ಪೋಲಿಸರು ಯಶಸ್ವಿಯಾಗಿದ್ದಾರೆ.
*ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ ಸೈಟ್ ಫಾಲೋ ಮಾಡಿ*??
ಸುದ್ದಿ ಮತ್ತು ಜಾಹೀರಾತುಗಳಿಗೆ ಸಂಪರ್ಕಿಸಿರಿ: 8123967576
Laxmi News