ಗೋಕಾಕ: ಹಿಂದುಳಿದ ಹಾಗೂ ಅಲೆಮಾರಿ ಜನಾಂಗದ ಕುಟುಂಬಗಳಿಗೆ ಇಲ್ಲಿಯ ನಗರಸಭೆ ವಾರ್ಡ ನಂ 12ರ ಸದಸ್ಯೆ ಭಾರತಿ ಶಿವಾನಂದ ಹತ್ತಿ ಅವರು ಆಸರೆಯಾಗಿದ್ದಾರೆ.
ನಗರದ ಹೊರವಲಯದಲ್ಲಿ ವಾಸವಾಗಿರುವ ಅಲೆಮಾರಿ ಜನಾಂಗ ಹಾಗೂ ನಿರ್ಗತಿಕ ಕುಟುಂಬಗಳಿಗೆ ಆಹಾರ ದಿನಸಿ ಕಿಟ್ ವಿತರಿಸಿ ಮಾನವಿಯತೆ ಮೆರದಿದ್ದಾರೆ.
ಕೊರೋನಾ 2ನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವ ನಗರದ ಎಪಿಎಮ್ಸಿ ಆಗ್ನಿ ಶಾಮಕ ಠಾಣೆಯ ಹತ್ತಿರ ವಾಸವಾಗಿರುವ ಅಲೆಮಾರಿ ಕುಟುಂಬದವರಿಗೆ ಶಾಸಕ ರಮೇಶ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ ಆಹಾರ ಧಾನ್ಯಗಳ ಕಿಟ್ ವಿತರಣೆ ಮಾಡಿರುವುದಾಗಿ ಸಮಾಜ ಸೇವಕ ಶಿವಾನಂದ ಹತ್ತಿ ಹೇಳಿದರು.
ಈ ಸಂದರ್ಭದಲ್ಲಿ ರವಿ ಹನಿಮನಾಳ, ಮುತ್ತುರಾಜ ಜಮಖಂಡಿ, ನಿತ್ಯಾನಂದ ಅಮ್ಮಿನಭಾಂವಿ, ಸುಧೀರ ಜೋಗೊಜಿ, ಕಾಶೀನಾಥ, ಜಾಫರ್ ಶಭಾಶಖಾನ ಸೇರಿದಂತೆ ಇನ್ನಿತರರು ಇದ್ದರು.