ಕೆಲವು ದಿನಗಳ ಹಿಂದೆ ಹಿಂದು ದೇವರು ಬಗ್ಗೆ ಕೋಮು ಗಲಭೆ ಉಂಟು ಮಾಡುವ ಉದ್ದೇಶದಿಂದ ಹೇಳಿಕೆ ನೀಡಿರುವ ಮಾಜಿ ಸಚಿವ ಮುರಗೇಶ ನಿರಾಣಿಯವರ ವಿರುದ್ದ ಪಿರ್ಯಾದಿ ಕೊಡಲು ಹೋದಾಗ ಸ್ಥಳಿಯ ನಗರ ಪಿಎಸ್ಐ ಯವರು ತೆಗೆದುಕೊಳ್ಳುತ್ತಿಲ್ಲವೆಂದು ಗೋಕಾಕ ನಗರದ ನ್ಯಾಯವಾದಿಗಳಾದ ಬಸವರಾಜ ಕಾಪಸಿ ಇವರು ಪತ್ರಿಕಗೊಷ್ಟಿಯಲ್ಲಿ ಪೋಲಿಸ ಇಲಾಖೆಯ ವಿರುದ್ದ ತಮ್ಮ ಅಸಹಾಕತೆ ತೋರಿದ್ದಾರೆ.
ಗೋಕಾಕನಲ್ಲಿ ಪಿ,ಎಸ್,ಐ, ಅಮ್ಮಿನಬಾವಿ ಇವರು ಮೂರ್ನಾಲ್ಕು ದಿನಗಳಿಂದ ನ್ಯಾವಾದಿಗಳು ಮುರಗೇಶ ನಿರಾಣಿ ವಿರುದ್ದ ಪಿರ್ಯಾದಿ ನೀಡಲು ಹೋದರು ಸಹ ಎಸ್,ಪಿ,ಯವರಿಗೆ ಮಾತನಾಡಿದ ನಂತರ ತೆಗದುಕೊಳ್ಳುವುದಾಗಿ ಹೇಳಿ ನಿರಾಕರಣೆ ಮಾಡುತಿದ್ದಾರೆ,
ಅದರಿಂದ ನೊಂದ ನ್ಯಾಯವಾದಿಗಳಾದ ಬಸವರಾಜ ಕಾಪಸಿಯವರು ಪೊಸ್ಟ ಮುಖಾಂತರ ಪಿರ್ಯಾದಿ ನೀಡಿದ್ದಾರೆ, ಅದರೆ ನ್ಯಾಯವಾದಿಗಳ ಪಿರ್ಯಾದಿನೆ ತೆಗದುಕೊಳ್ಳದ ಈ ಪೋಲಿಸ್ ಅಧಿಕಾರಿ ಸಾರ್ವಜನಿಕರ ಪರಿಸ್ಥಿತಿ ಎನು ಎಂದು ತಮ್ಮ ಅಸಹಾಯಕತೆ ತೊರಿದ್ದಾರೆ,
ಒಂದು ವೇಳೆ ಮುರಗೇಶ ನಿರಾಣಿಯವರ ಮೇಲೆ ಪಿರ್ಯಾದಿ ತೆಗೆದುಕೊಳ್ಳದೆ ಹೊದಲ್ಲಿ ಗೋಕಾಕ ನಗರ ಪೋಲಿಸ್ ಠಾಣೆಯ ಮುಂದೆ ಹೋರಾಟ ಮಾಡುವುದಾಗಿ ಪತ್ರಿಕಾಗೊಷ್ಟಿಯಲ್ಲಿ ತಿಳಿಸಿದ್ದಾರೆ.