Home / Madikeri / ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು

ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು

Spread the love

ನವ​ದೆ​ಹ​ಲಿ : ಸಚಿವ ಡಿ.ವಿ. ಸದಾ​ನಂದ​ಗೌ​ಡರ ಉಸ್ತು​ವಾ​ರಿಯ ರಸ​ಗೊಬ್ಬರ ಇಲಾಖೆಯು ಕೇಂದ್ರ ಸರ್ಕಾ​ರದ ಒಟ್ಟಾ​ರೆ 65 ಇಲಾ​ಖೆ​ಗ​ಳ ರಾರ‍ಯಂಕಿಂಗ್‌​ನಲ್ಲಿ 3ನೇ ಸ್ಥಾನ ಪಡೆ​ದಿ​ದೆ. ಇದೇ ವೇಳೆ, ವಿವಿಧ 16 ಆರ್ಥಿಕ ಸಚಿ​ವಾ​ಲ​ಯ​ಗ​ಳಲ್ಲಿ 2ನೇ ಸ್ಥಾನ ಗಳಿ​ಸಿ​ದೆ.

ನೀತಿ ಆಯೋಗದ ಅಭಿ​ವೃದ್ಧಿ ಮೇಲ್ವಿ​ಚಾ​ರಣೆ ಹಾಗೂ ಮೌಲ್ಯ​ಮಾ​ಪನ ಕಚೇರಿ (ಡಿ​ಇ​ಎಂಒ​), ಕೇಂದ್ರ ಸರ್ಕಾ​ರದ ಯೋಜ​ನೆ​ಗಳನ್ನು ಇಲಾ​ಖೆ​ಗಳು ಹೇಗೆ ಅನು​ಷ್ಠಾನ ಮಾಡುತ್ತಿವೆ ಎಂಬ ಪ್ರಶ್ನಾ​ವಳಿ ಆಧ​ರಿತ ಆನ್‌​ಲೈ​ನ್‌ ಸಮೀಕ್ಷೆ ನಡೆ​ಸಿತ್ತು. ಇದರ ಫಲಿ​ತಾಂಶ ಆಧ​ರಿಸಿ ಶ್ರೇಯಾಂಕ ಪ್ರಕ​ಟಿ​ಸಿದೆ. ಶ್ರೇಯಾಂಕವು ಸದಾ​ನಂದಗೌಡರ ಇಲಾಖೆ ಉತ್ತಮ ಕಾರ್ಯ​ನಿ​ರ್ವ​ಹಣೆ ತೋರು​ತ್ತಿದೆ ಎಂಬು​ದನ್ನು ಸಾಬೀ​ತು​ಪ​ಡಿ​ಸಿ​ದೆ.

ಈ ಬಗ್ಗೆ ಖುಷಿ ವ್ಯಕ್ತ​ಪ​ಡಿ​ಸಿ​ರುವ ರಸ​ಗೊ​ಬ್ಬರ ಹಾಗೂ ರಾಸಾ​ಯ​ನಿಕ ಸಚಿ​ವ ಸದಾ​ನಂದ​ಗೌ​ಡ, ‘ನೀತಿ ಆಯೋ​ಗವು ವಿವಿಧ ಸಚಿ​ವಾ​ಲ​ಯ​ಗಳ ಕಾರ್ಯ​ವೈ​ಖರಿ ಪರಾ​ಮ​ರ್ಶಿಸಿ ರಿಪೋರ್ಟ್‌ ಕಾರ್ಡ್‌ ಬಿಡು​ಗಡೆ ಮಾಡು​ತ್ತಿ​ರು​ವುದು ಸಂತ​ಸದ ವಿಚಾ​ರ.

ಇದ​ರಿಂದ ಯೋಜ​ನೆ​ಗಳ ಪರಿ​ಣಾ​ಮ​ಕಾರಿ ಜಾರಿ ಹಾಗೂ ಗುರಿ ಮುಟ್ಟಲು ಸಹಾ​ಯ​ವಾ​ಗು​ತ್ತದೆ’ ಎಂದಿ​ದ್ದಾ​ರೆ.


Spread the love

About Laxminews 24x7

Check Also

ಯುವ ಮತದಾರರ ಚುನಾವಣೆ ಉತ್ಸಾಹ

Spread the loveಯುವ ಮತದಾರರ ಚುನಾವಣೆ ಉತ್ಸಾಹ ಉಡುಪಿ: ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಯುವ ಮತದಾರರ ಪಾತ್ರವೂ ಮಹತ್ವದ್ದಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ