ಅಂಕಲಿ : ಅತ್ಯಂತ ಪ್ರತಿಕೂಲ ಸನ್ನಿವೇಶದಲ್ಲೂ ತಮ್ಮ ಪ್ರಾಣದ ಹಂಗು ತೊರೆದು ದೇಶದ ಗಡಿ ಕಾಯುವ ಯೋಧರಯ ನಮ್ಮ ದೇಶದ ಅಮೂಲ್ಯ ಆಸ್ತಿ ಅತಂಹ ಗಡಿ ಕಾಯುವ ಕರ್ತವ್ಯ ನಿರಂತ ಯೋಧನ ತಾಯಿಯ ಮೇಲೆ ಐದಾರು ಜನ ಹಲ್ಲೆ ಮಾಡಿದ್ದಾರೆ. ಅವರುಗಳ ವಿರುದ್ಧ ಸಾಮಾನ್ಯವಾದ ಪ್ರಕರಣವನ್ನು ಫೋಲಿಸ್ ಅಧಿಕಾರಿಗಳು ದಾಖಲು ಮಾಡಿದ್ದಾರೆಂದು ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ರಾಜಾಧ್ಯಕ್ಷರಾದ ಕೆ. ಶಿವಾನಂದ ಆರೋಪಿಸಿದ್ದಾರೆ.
ಅಂಕಲಿ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಕಾಡಾಪೂರ ಗ್ರಾಮದ ಯೋಧನ ತಾಯಿಯಾದ ಶೋಭಾ ಮಾರುತಿ ನರೋಟ್ಟಿ ಅವರುಗಳ ಮೇಲೆ ರಸ್ತೆ ವಿವಾದ ಹಿನ್ನಲೆಯಲ್ಲಿ ಮಾರನಾತ್ತಿಕ ಹಲ್ಲೆಗೊಳ್ಳಗಾಗಿ ಅಂಕಲಿ ಗ್ರಾಮಕ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ರಾಜಾಧ್ಯಕ್ಷರಾದ ಕೆ. ಶಿವಾನಂದ ಹಾಗೂ ಜಿಲ್ಲಾಧ್ಯಕ್ಷರು ಭೇಟಿ ನೀಡಿ ಹಲ್ಲೆಗೊಳ್ಳಗಾದ ಯೋಧನ ತಾಯಿಗೆ ಧೈರ್ಯ ತುಂಬಿ ಆರೋಗ್ಯ ಹಾಗೂ ಗಾಯಗಳ ಬಗ್ಗೆ ವಿಚಾರಣೆ ನಡೆಸಿ ಹಲ್ಲೆಗೆ ಒಳಗಾದ ಯೋಧನ ತಾಯಿಯೊಂದಿಗೆ ರಾಜ್ಯದ ಮಾಜಿ ಸೈನಿಕ ಸಂಘ ಇರುತ್ತದೆ ಎಂದು ಹೇಳಿ ಮಾತನಾಡುತ್ತಾ. ಒರ್ವ ಯೋಧನ ತಾಯಿಯ ಈ ಸ್ಥಿತಿಯಾದರೆ ಸಾಮಾನ್ಯ ಜನರ ಸ್ಥಿತಿ ಯಾವ ಮಟ್ಟದಲ್ಲಿರಬಹುದು. ಯೋಧನ ತಾಯಿಯ ಮೇಲೆ ಹಲ್ಲೆ ನಡೆದರು ಸಹ ಜನಪ್ರತಿನಿಧಿಗಳು ಹಾಗೂ ಸಂಘ ಸಂಸ್ಥೆಯವರು ಯಾರು ಅವರುಗಳ ಬೆಂಬಲಕ್ಕೆ ನಿತ್ತಿಲ್ಲ. ಕೇವಲ ಸ್ವಾತಂತ್ರ್ಯ ಹಾಗೂ ಗಣರಾಜ್ಯೋತ್ಸವ ದಿನಾಚಾರಣೆಗೆ ಮಾತ್ರ ಈ ಯೋಧರಿಗೆ ಗೌರವಿಸುತ್ತಾರೆ. ಈ ಯೋಧನ ತಾಯಿಯ ಮೇಲೆ ಹಲ್ಲೇಯನ್ನು ಮರು ಪರಿಶೀಲಿಸಿ ಕಟ್ಟಿನ ಕಾನೂನು ಕ್ರಮವನ್ನು ತಗೆದುಕೊಳ್ಳಬೇಕೆಂದು ಇಲ್ಲವಾದಂರೆ ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸುವುದ್ದಾಗಿ ಆಕ್ರೋಶವ್ಯಕ್ತ ಪಡೆಸಿದ್ದರು.
ನಂದ ಗ್ರಾಮದ ಪ್ರಮುಖ್ಯ ಬೀದಿಗಳ ಮೂಲಕ ಪಾದಯಾತ್ರೆ ಮಾಡುವ ಮೂಲಕ ಆರೋಪಿಗಳಿಗೆ ಕಟ್ಟಿನ ಶಿಕ್ಷೆಯನ್ನು ಕಾನೂನು ಅಡಿಯಲ್ಲಿ ಕ್ರಮ ಕೈಗೊಳಬೇಕೆಂದು ಘೋಷನೆ ಹಾಕುಲ ಮೂಲಕ ಪೋಲಿಸ್ ಠಾಣೆಯ ಮುಂದೆ ಪ್ರತಿಭಟನಾಕಾರರು ಆಗಮಿಸಿ ಯೋಧನ ತಾಯಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳಿಗೆ ಕಟ್ಟಿನ ಶಿಕ್ಷೆ ನಈಡಬೇಕೆಂದು ಪಟು ಹಿಡಿದು ಪ್ರತಿಭಟನಾಕಾರರು ಮೇಲಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಬೇಕೆಂದು ಧರಣಿ ನಡೆಸಿದ್ದರು.
ಪ್ರತಿಭಟನಾಕಾರರ ನೇತೃತ್ವ ವಹಿಸಿದ ಮಾಜಿ ಸೈನಿಕ ಸಂಘಟನೆಯ ರಾಜಾಧ್ಯಕ್ಷ ಕೆ. ಶಿವಾನಂದ ಅವರು ಮೊಬೈಲ ಮೂಲಕ ಠಾಣಾ ಅಧಿಕಾರಿಗಳೊಂದಿಗೆ ಮಾತನಾಡಿ ಕಾನೂನಿನ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದ್ದು ಎಂದು ಭರವಸೆ ನೀಡಿದ ಬಳಿಕ ಎ ಎಸ್ ಐ ವಿನಾಯಕ ಖೋತ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಹಾಗೂ ಪೋಲಿಸವ ರೀಷ್ಠಾಧಿಕಾರಿಗಳಿಗೆ ಮನವಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಬೆಳಗಾ ವಿಜಿಲ್ಲೆಯ ತಾಲೂಕಿನ ಮಾಜಿ ಸೈನಿಕ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರು ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.