ಬೆಂಗಳೂರು: ಡ್ರಗ್ಸ್ ಪ್ರಕರಣ ಸಂಬಂಧಿಸಿ ಬಾಲಿವುಡ್ ಮತ್ತು ಸ್ಯಾಂಡಲ್ವುಡ್ನಲ್ಲಿ ಕೇವಲ ನಟಿಯರೇ ವಿಚಾರಣೆಗೆ ಒಳಪಡುತ್ತಿದ್ದಾರೆ. ಡ್ರಗ್ಸ್ ಕೇಸ್ನಲ್ಲಿ ನಟಿಯರದ್ದೇ ಕೈ ಕಾಣಿಸುತ್ತಿದೆ. ಈ ನಡುವೆ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಮಾಡಿರುವ ಟ್ವೀಟ್ ಕುತೂಹಲ ಕೆರಳಿಸಿದೆ.
ಡ್ರಗ್ಸ್ ಕೇಸ್ನಲ್ಲಿ ಜೈಲು ಸೇರಿರುವ ಸಂಜನಾಗೂ, ಪ್ರಶಾಂತ್ ಸಂಬರಗಿಗೂ ಹಾವು ಮುಂಗುಸಿಯ ನಂಟು. ಆಗಾಗ ಒಬ್ಬರನೊಬ್ಬರು ಕಾಲೆಳಿತಾನೇ ಇರ್ತಾರೆ.
ಅಲ್ಲದೆ ಪ್ರಕರಣ ಸಂಬಂಧ ಜೈಲು ಸೇರಿದ ಮೇಲೆ ನಟಿಮಣಿಯರು ಒಂದಲ್ಲಾ ಒಂದು ತಕರಾರು ಮಾಡುತ್ತಲೇ ಬಂದಿದ್ದಾರೆ. ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡ್ತಾನೆ ಇದಾರೆ. ಈ ಪ್ರಕರಣ ಸಂಬಂಧ ಈಗ ಆಯಂಕರ್ ಅನುಶ್ರೀ ಕೂಡ ವಿಚಾರಣೆ ಎದುರಿಸಿದ್ದಾರೆ. ವಿಚಾರಣೆ ಎದುರಿಸಿದವರೆಲ್ಲಾ ಒಂದಲ್ಲಾ ಒಂದು ಡ್ರಾಮಾಗಳನ್ನು ಮಾಡುತ್ತಿದ್ದಾರೆ.
ಈ ಕುರಿತು ಪ್ರಶಾಂತ್ ಸಂಬರಗಿ ಟ್ವೀಟ್ ಮಾಡಿದ್ದಾರೆ. ಅವರು ಮಾಡಿದ ಟ್ವೀಟ್ ಹೀಗಿದೆ:
ಕೊರೊನಾ ಇದೆ, ಹತ್ತಿರ ಬರಬೇಡಿ. ಇದು ಇವತ್ತು ಪ್ರದರ್ಶನವಾಗಲಿರುವ ಹೊಸ ಡ್ರಾಮಾ. ಪೊಲೀಸರು ಅರೆಸ್ಟ್ ಮಾಡುತ್ತಾರೆಂದು ಗೊತ್ತಾದ ತಕ್ಷಣ ನಾಟಕದ ರಾಣಿಯ ಹೊಸ ಅವತಾರ ಶುರುವಾಗುತ್ತದೆ ಎಂದು ನಟಿಯರ ಹೈಡ್ರಾಮಾದ ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.