Breaking News

ವಿಜಯದುರ್ಗ ಕಡಲತೀರದಲ್ಲಿ ಬೆಳಗಾವಿ ಈಜುಪಟುಗಳ ಅಬ್ಬರ: ಹರ್ಷವರ್ಧನ್‌ಗೆ ಚಿನ್ನದ ಪದಕ

Spread the love

ಸಿಂಧುದುರ್ಗದ ವಿಜಯದುರ್ಗ ಖಾಡಿಯಲ್ಲಿ ನಡೆದ ರಾಜ್ಯ ಮಟ್ಟದ ಮುಕ್ತ ಜಲತರಂಗ ಸ್ಪರ್ಧೆಯಲ್ಲಿ ಬೆಳಗಾವಿಯ ಆಬಾ ಮತ್ತು ಹಿಂದ್ ಸ್ಪೋರ್ಟ್ಸ್ ಕ್ಲಬ್‌ನ ಈಜುಪಟುಗಳು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಈ ಕಠಿಣ ಸ್ಪರ್ಧೆಯಲ್ಲಿ ಬೆಳಗಾವಿಯ ಪ್ರತಿಭೆಗಳು ಚಿನ್ನ ಮತ್ತು ಬೆಳ್ಳಿ ಪದಕಗಳನ್ನು ಮುಡಿಗೇರಿಸಿಕೊಳ್ಳುವ ಮೂಲಕ ನಾಡಿಗೆ ಕೀರ್ತಿ ತಂದಿದ್ದಾರೆ.
ಜಿಮ್ ಸ್ವಿಮ್ ಅಕಾಡೆಮಿ ಕೊಲ್ಹಾಪುರ ಮತ್ತು ಸಿಂಧುದುರ್ಗ ಕ್ರೀಡಾ ಮಂಡಳಿ ಆಯೋಜಿಸಿದ್ದ ಈ ಸ್ಪರ್ಧೆಯಲ್ಲಿ, ಬೆಳಗಾವಿಯ ಹರ್ಷವರ್ಧನ್ ಕರ್ಲೇಕರ್ 1 ಕಿಲೋಮೀಟರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಸುದರ್ಣ ಪದಕ ಜಯಿಸಿದ್ದಾರೆ. ಇವರೊಂದಿಗೆ ಸ್ಮರಣ್ ಮಂಗಳೂರುಕರ್ (5 ಕಿಮೀ), ಗಣಿಷ್ಕಾ ಯಲಜಿ (1 ಕಿಮೀ) ಮತ್ತು ಗಾಥಾ ದಡ್ಡೀಕರ್ (500 ಮೀಟರ್) ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕಗಳನ್ನು ಗೆದ್ದಿದ್ದಾರೆ. ಉಳಿದಂತೆ ಸೋಯರಾ ಮನ್ನೋಳಕರ್ ತೃತೀಯ ಸ್ಥಾನ ಪಡೆಯಲಾಗಿ, ರಂಜನ್ ಕುಲಕರ್ಣಿ, ಪ್ರಸಾದ್ ಸಾಯನೇಕರ್, ಮಯೂರೇಶ್ ಜಾಧವ್, ಪ್ರಣಮ್ಯಾ ಪ್ರಭು ಮತ್ತು ಪ್ರಾಜಕ್ತಾ ಪ್ರಭು ಅವರು ವಿವಿಧ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿ ಗಮನ ಸೆಳೆದಿದ್ದಾರೆ. ಈ ಸಾಧಕರಿಗೆ ತರಬೇತುದಾರರಾದ ವಿಶ್ವಾಸ ಪವಾರ್, ಅಮಿತ್ ಜಾಧವ್ ಮತ್ತು ತಂಡದ ಮಾರ್ಗದರ್ಶನ ಹಾಗೂ ಕ್ಲಬ್‌ನ ಅಧ್ಯಕ್ಷ ಶೀತಲ್ ಹುಲಭತೆ ಅವರ ಪ್ರೋತ್ಸಾಹ ಲಭಿಸಿದೆ


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ