ಅಥಣಿ : ಪಟ್ಟಣದಲ್ಲಿ
ಇತ್ತಿಚೆಗೆ ಕಟ್ಟಿದ ಬಸ ನಿಲ್ದಾಣದ ಕಾಮಗಾರಿಯು ಅವೈಜ್ಞಾನಿಕವಾಗಿದೆ .
ಏಕೆಂದರೆ ಸತತ ಮೂರು ದಿನದಿಂದ ಪ್ರತಿನಿತ್ಯ ಸುರಿಯುತ್ತಿರುವ ಮಳೆಗೆ ಶೌಚಾಲಯದಲ್ಲಿ ಮೋಳಕಾಲಿನ ವರೆಗೂ ನೀರು ನಿಂತು ಯಾರು ಹೋಗದಂತಾಗಿದೆ . ಅದಕ್ಕೆ ನೀರು ಹೋರ ಹೋಗಲು ಯಾವುದೆ ದಾರಿ ಇಲ್ಲದೆ ಬಂದ ನೀರೆಲ್ಲಾ ಶೌಚಾಲದಯ ಮೂಲಕವೆ ಹೋಗಬೇಕಾ ಅನಿವಾರ್ಯತೆ ಎದುರಾಗಿದೆ .
ಇದರಿಂದಾಗಿ ಹಲವಾರು ಗಂಟೆಗಳವರೆಗೂ ಯಾರು ಶೌಚಾಲದ ಒಳಗೆ ಹೋಗದಂತಾಗಿತ್ತು ಮತ್ತು ಹೋಗಬೇಕಾದರು ಬಟ್ಟೆ ತೋಯಿಸಿಕೊಂಡೆ ಒಳಗೆ ಹೋಗಬೆಕಾದ ಪರಿಸ್ಥಿತಿ ಎದುರಾಗಿತ್ತು .
ನೇಲದಿಂದ ಸುಮಾರು ೫ಅಡಿ ಕೇಳಗೆ ಅಗದು ಅದರಲ್ಲಿ ಶೌಚಾಲಯ ನಿರ್ಮಾಣ ಮಾಡಿರುವುದರಿಂದ ಈಸಮಸ್ಯೆ ಎದುರಾಗಿದೆ ಹಾಗೂ ಪ್ಲಾಟ್ ಫಾರ್ಮ್ ಪರಿಸ್ಥಿತಿಯು ಇದನ್ನು ಹೊರತೇನಲ್ಲ ಸಾರ್ವಜನಿಕರು ಸಂಚರಿಸಲು ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಉಂಟಾಗಿದೆ ಹಾಗೂ ವಾಣಿಜ್ಯ ಮಳಿಗೆಗಳಿಗೆ ಈ ವ್ಯಾಪಾರಸ್ಥರು ಹೋಗುತ್ತಿಲ್ಲ ಪರಿಣಾಮ ವ್ಯಾಪಾರವಿಲ್ಲದೆ ಪರದಾಡುವ ಸ್ಥಿತಿ ಉಂಟಾಗಿದೆ ಎನ್ನುವುದು ಸಾರ್ವಜನಿಕರ ಮಾತಾಗಿತ್ತು