Breaking News

25 ವರ್ಷಗಳ ಬಳಿಕ ಬೆಂಗಳೂರಲ್ಲಿ ದಾಖಲೆಯ ಮಳೆ – 170 ಮರಗಳು ಧರಾಶಾಹಿ, 68 ಕಡೆ ಜಲಾವೃತ

Spread the love

ಬೆಂಗಳೂರು:  ಸುರಿದ ಭಾರೀ ಮಳೆಗೆ ನಡೆದ ಅವಾಂತರಗಳು ಒಂದಾ.. ಎರಡಾ..? ಬೇಸಿಗೆ ಮಳೆಗೆ ಇಡೀ ಸಿಲಿಕಾನ್ ಸಿಟಿ ತೊಯ್ದು ತೊಪ್ಪೆಯಾಗಿದೆ. ಬೆಂಗಳೂರಿನ ಹಲವೆಡೆ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಗಿದೆ.

ವಿಧಾನಸೌಧ, ಪೊಲೀಸ್ ಕಮಿಷನರ್ ಕಚೇರಿ, ಇನ್‌ಫೆಂಟ್ರಿ ರೋಡ್, ಲ್ಯಾವೆಲ್ಲೆ ರೋಡ್, ಶಿವಾಜಿನಗರ, ರಿಚ್‌ಮಂಡ್ ಟೌನ್, ಅವೆನ್ಯೂ ರೋಡ್ ಸುತ್ತಮುತ್ತ ಬಿರುಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ. ಸುಮ್ಮನಹಳ್ಳಿ ಫ್ಲೈ ಓವರ್ ಮೇಲೆ ಸರಣಿ ಅಪಘಾತವಾಗಿದೆ. ಕಾರು-ಲಾರಿ ಸೇರಿದಂತೆ 7-8 ವಾಹನಗಳ ಮಧ್ಯೆ ಅಪಘಾತವಾಗಿದ್ದು, ಹಲವಾರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನೂ, ಗಾಲ್ಫ್ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮುಳುಗಡೆಯಾದ್ರೆ, ಮಲ್ಲೇಶ್ವರಂ, ಯಶವಂತಪುರದ ಬೃಹದಾಕಾರದ ಮರಗಳು ಧರೆಗುರುಳಿದ್ವು. ಕೆಲವೆಡೆ ಕಾರುಗಳೂ ಕೂಡ ಮುಳಗಡೆಯಾದ ದೃಶ್ಯಗಳು ಕಂಡುಬಂದವು. ವಿಧಾನಸೌಧದಲ್ಲಿ ವಿಪಕ್ಷ ನಾಯಕ ಆರ್ ಅಶೋಕ್ ಕೊಠಡಿಗೆ ಮಳೆ ನೀರು ನುಗ್ಗಿದೆ. ಕಿಟಕಿಯಿಂದ ಮಳೆನೀರು ನುಗ್ಗಿ ನೆಲದ ಮೇಲೆ ಹರಿದಿದೆ. ಮಳೆ ನೀರಲ್ಲಿ ದಿನಪತ್ರಿಕೆಗಳು ತೇಲಿವೆ. ಶಾಂತಿನಗರದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ.

ಬಿನ್ನಿಮಿಲ್‌ನಲ್ಲಿ 30 ಅಡಿ ಉದ್ದದ ಗೋಡೆ ಕುಸಿತ
ಹೌದು ಬೆಂಗಳೂರಿನಲ್ಲಿ ರಣರಕ್ಕಸ ಮಳೆಗೆ ಭಾರೀ ಅವಾಂತರ ಸೃಷ್ಟಿಯಾಗಿದೆ. ಬಿನ್ನಿಮಿಲ್ ರಸ್ತೆಯಲ್ಲಿ 30 ಅಡಿ ಉದ್ದದ ಗೋಡೆ ಕುಸಿತಗೊಂಡಿದ್ದು ಕಿರಿದಾದ ರಸ್ತೆಗೆ ಬೃಹತ್ ಗೋಡೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಆಗಿಲ್ಲ.

ಮಲ್ಲೇಶ್ವರ ದ ಮಾರ್ಗೋಸಾ ರಸ್ತೆಯಲ್ಲಿ ಹತ್ತಾರು ಕಡೆ ಮರಗಳು, ಮರದ ಕೊಂಬೆಗಳು ಮುರಿದು ಬಿದ್ದಿದ್ದವು. ಹೀಗಾಗಿ ಪ್ರಮುಖ ಸಂಚಾರ ರಸ್ತೆಯಾದ ಮಾರ್ಗೋಸಾ ರಸ್ತೆ ಬಂದ್ ಆಗಿತ್ತು. ಮಳೆ, ಗಾಳಿಗೆ ಸಿಟಿ ಯೂನಿಯನ್ ಬ್ಯಾಂಕ್ ನ ಬೃಹತ್ ನಾಮಫಲಕ ಬಿದ್ದುಹೋಗಿದೆ.

170 ಧರಾಶಾಹಿ, 68 ಕಡೆ ಜಲಾವೃತ
ನಿನ್ನೆ ಸುರಿದ ಒಂದೇ ಒಂದು ಧಾರಾಕಾರ ಮಳೆಗೆ ಬೆಂಗಳೂರಿನ ಮರಗಳು ಧರೆಗುರಳಿದ್ರೆ, ಟ್ರಾಫಿಕ್ ಜಾಮ್‌ಗೆ ಜನ ಹೈರಾಣಾದ್ರು. 170 ಕ್ಕೂ ಅಧಿಕ ಮರಗಳು ಧರೆಗುರುಳಿದ್ರೆ 408 ಮರದ ಕೊಂಬೆಗಳು ಮುರಿದು ಬಿದ್ದಿವೆ. 5 ಪಾಲಿಕೆಗಳ ವ್ಯಾಪ್ತಿಯಲ್ಲಿ 68 ಕಡೆ ಜಲಾವೃತವಾಗಿದೆ. 25 ವರ್ಷಗಳ ಬಳಿಕ ಏಪ್ರಿಲ್ ನಲ್ಲಿ ದಾಖಲೆ ಮಳೆ ದಾಖಲಾಗಿದೆ. ಇಂದು 111.0 ಮಿಮೀ ಆಗಿದ್ದು, ಏಪ್ರಿಲ್ ತಿಂಗಳ ಇಲ್ಲಿಯವರೆಗೆ *ಹೊಸ ದಾಖಲೆ ಇದಾಗಿದೆ. ಈ ಹಿಂದೆ 2001ರ ಏಪ್ರಿಲ್ 19ರಂದು 108.6 ಮಿಮೀ ಮಳೆಯಾಗಿತ್ತು.

5 ಪಾಲಿಕೆಗಳ ವ್ಯಾಪ್ತಿಯಲ್ಲಿ ಎಷ್ಟು ಪ್ರದೇಶಗಳಲ್ಲಿ ಜಲಾವೃತ?
* ಬೆಂಗಳೂರು ಕೇಂದ್ರದಲ್ಲಿ 19 ಪ್ರದೇಶ
* ಬೆಂಗಳೂರು ಪೂರ್ವದಲ್ಲಿ 5 ಪ್ರದೇಶ
* ಬೆಂಗಳೂರು ಉತ್ತರದಲ್ಲಿ 3 ಪ್ರದೇಶ
* ಬೆಂಗಳೂರು ದಕ್ಷಿಣದಲ್ಲಿ 29 ಪ್ರದೇಶ
* ಬೆಂಗಳೂರು ಪಶ್ಚಿಮದಲ್ಲಿ 12 ಪ್ರದೇಶ

5 ಪಾಲಿಕೆಗಳ ವ್ಯಾಪ್ತಿಯಲ್ಲಿ ಧರೆಗುರುಳಿದ ಮರಗಳೆಷ್ಟು?
* ಬೆಂಗಳೂರು ಕೇಂದ್ರದಲ್ಲಿ 67 ಮರಗಳು ಧರಾಶಾಹಿ
* ಬೆಂಗಳೂರು ಪೂರ್ವದಲ್ಲಿ 01 ಮರಗಳು ಧರಾಶಾಹಿ
* ಬೆಂಗಳೂರು ಪಶ್ಚಿಮದಲ್ಲಿ 55 ಮರಗಳು ಧರಾಶಾಹಿ
* ಬೆಂಗಳೂರು ದಕ್ಷಿಣದಲ್ಲಿ 23 ಮರಗಳು ಧರಾಶಾಹಿ
* ಬೆಂಗಳೂರು ಉತ್ತರದಲ್ಲಿ 24 ಮರಗಳು ಧರಾಶಾಹಿ


Spread the love

About Laxminews 24x7

Check Also

ಕಾಂಪೌಂಡ್ ಕುಸಿದು 7 ಜನರ ಸಾವಿನಿಂದ ಆಘಾತ: ಡಿಕೆಶಿ

Spread the loveಬೆಂಗಳೂರು: ಕಾಂಪೌಂಡ್ ಕುಸಿದು  ಏಳು ಜನ ಮೃತಪಟ್ಟಿರುವುದು ಅತ್ಯಂತ ದುಃಖಕರ ವಿಚಾರ. ಇಂತಹ ಘಟನೆಗಳು ಆಗಬಾರದಿತ್ತು. ನನಗೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ