Breaking News

ಪೊಲೀಸ್ ಪೇದೆ ಮದುವೆಗೆ ಮುಧೋಳಕ್ಕೆ ಓಡೋಡಿ ಬಂದ ರಾಜ್ಯಪಾಲ ಗೆಹ್ಲೋಟ್…!

Spread the love

ಬೆಳಗಾವಿ : ಸದಾಕಾಲವೂ ತಮ್ಮ ಬೆನ್ನೆಲುಬಾಗಿ ನಿಂತು‌ ಭದ್ರತೆ ಒದಗಿಸುವ ಸಿಬ್ಬಂದಿ ಮದುವೆಗೆ ರಾಜ್ಯಪಾಲರು ಓಡೋಡಿ ಬಂದು ಆಶಿರ್ವದಿಸಿದ ಅಪರೂಪದ ಘಟನೆ ನಡೆದಿದೆ.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಭದ್ರತಾ ಸಿಬ್ಬಂದಿ ಪೊಲೀಸ್ ಕಾನ್ಸ್ಟೇಬಲ್ ಪರಮಾನಂದ ‌ಮಂಟೂರ್ ಮದುವೆ ಕಾರ್ಯಕ್ರಮಕ್ಕೆ ಸ್ವತಃ ರಾಜ್ಯಪಾಲರೇ ಆಗಮಿಸಿ ಶುಭಾಶಯ ತಿಳಿಸಿದ ಅಪರೂಪದ ‌ಘಟನೆ ಕಳೆದ ಶನಿವಾರ ನಡೆದಿದೆ.

ಮುಧೋಳ ‌ಪಟ್ಟಣದಲ್ಲಿ ನಡೆದ ಪರಮಾನಂದ ಮಂಟೂರ್ ಅವರ ಮದುವೆ ಸಮಾರಂಭಕ್ಕೆ ಬೆಂಗಳೂನಿಂದ ಬೆಳಗಾವಿಗೆ ವಿಮಾನ ಮೂಲಕ‌ ಆಗಮಿಸಿ‌ ಶುಭಾಶಯ ತಿಳಿಸಿದ್ದಾರೆ.‌

ಸಧ್ಯ ರಾಜ್ಯಪಾಲರ‌ ನಡೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ಭದ್ರತೆಗೆ ನೇಮಿಸಿರುವ ಕೆಳ ಹಂತದ ಸಿಬ್ಬಂದಿಗೂ ಅವರು ನೀಡುವ ಗೌರವ ಇತರರಿಗೂ ಮಾದರಿಯಾಗಿದೆ ಎಂದರೆ ತಪ್ಪಾಗಲಾರದು.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ