ರಾಮದುರ್ಗ ನಗರದ ಶ್ರೀ ವಿಶ್ವೇಶ್ವರ ಕಲ್ಯಾಣ ಮಂಟಪದಲ್ಲಿ ಇಂದು ಆಯೋಜಿಸಲಾದ ರಾಮದುರ್ಗ ಮಂಡಲದ ನೂತನ ಬಿಜೆಪಿ ವಿವಿಧ ಮೋರ್ಚಾ ಪದಾಧಿಕಾರಿಗಳ ಪದ ಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಗೋಕಾಕ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸಾಹುಕಾರ್ ಶ್ರೀ ರಮೇಶ್ ಜಾರಕಿಹೊಳಿ ಅವರು ಭಾಗವಹಿಸಿ ಪದ ಗ್ರಹಣ ಸಮಾರಂಭ ಉದ್ಘಾಟನೆ ನೆರವೇರಿಸಿ ನೂತನವಾಗಿ ನೇಮಕಗೊಂಡ ಪದಾಧಿಕಾರಿಗಳಿಗೆ ಆದೇಶ ಪತ್ರ ವಿತರಿಸಿ ಮಾತನಾಡಿದ ಅವರು ಪಕ್ಷ ಸಂಘಟನೆಗೆ ಕಂಕಣ ಬದ್ಧರಾಗಿ ಕಾರ್ಯ ನಿರ್ವಹಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ರಾಮದುರ್ಗ ಮಂಡಲ ಅಧಕ್ಷರಾದ ಡಾ.ಕೆ ವಿ ಪಾಟೀಲ, ಪಿ.ಎಫ್ ಪಾಟೀಲ, ಸಿ.ಬಿ ಪಾಟೀಲ, ಮಾರುತಿ ಕೊಪ್ಪದ, ಕಲ್ಲಣ್ಣ ವಜ್ರಮಟ್ಟಿ, ದ್ಯಾವಪ್ಪ ಬೆಳವಡಿ, ಶ್ರೀಮತಿ ಮಹಾದೇವಿ ರೊಟ್ಟಿ, ಈರನಗೌಡ ಹೊಸಗೌಡರ, ಗಂಗಾಧರ ಬೋಸ್ಥೆ, ತೌಕಿರ ಕತಿಬ, ಸಿದ್ದು ಗುಡಿಯನ್ನವರ ಸೇರಿದಂತೆ ಬಿಜೆಪಿ ಪಕ್ಷದ ತಾಲೂಕಾ ಮಟ್ಟದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.
Laxmi News 24×7