ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬ ಆಚರಣೆ.
ಗೋಕಾಕ : ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರು ಹಾಗೂ ಉದ್ಯಮಿಗಳಾದ ಸಂತೋಷ್ ಜಾರಕಿಹೊಳಿ ಅವರ ಪುತ್ರರಾದ ಸೂರ್ಯಶ್ರೇಷ್ಠ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅಭಿಮಾನಿಗಳು ಸಮಾಜಮುಖಿಯಾಗಿ ಸರಳವಾಗಿ ಆಚರಿಸಿದರು.
ಶ್ರೇಷ್ಠ ಫೌಂಡೇಶನ್ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಶಿವಾ ಫೌಂಡೇಶನ್ ಮಕ್ಕಳಿಗೆ ಹಣ್ಣು ಹಂಪಲು ಹಾಗೂ ಉಪಹಾರ, ಸಿಹಿ ವಿತರಣೆ ಮಾಡುವ ಮೂಲಕ ಹುಟ್ಟು ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ನಂತರ ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಕಾರ್ಖಾನೆ ಸಿಬ್ಬಂದಿಗಳೊಂದಿಗೆ ಹಾಗೂ ರೈತರೊಂದಿಗೆ ಹುಟ್ಟು ಹಬ್ಬದ ಆಚರಿಸಿದರು.
ಈ ಸಂದರ್ಭದಲ್ಲಿ ಸೂರ್ಯ ಶ್ರೇಷ್ಠ ಅವರ ಸೋದರ ಮಾವರಾದ ವಿರೇಶ ನಾಯಕ್, ಪ್ರದೀಪ್ ಕುಮಾರ್, ನಾಗೇಶ್ ಹತ್ತಿ, ಮುಖಂಡರಾದ ಪ್ರಶಾಂತ್ ಜೋರಾಪುರ, ಶೇಷಾಚಲ ಹೊನ್ನತ್ತಿ, ಪ್ರವೀಣ ಅವಡಖಾನ, ಸಲಿಲ್ ಜಾಡವಾಲೆ, ಸಚಿನ್ ಕಲಾಲ , ಮಂಜುನಾಥ್ ಮಂಜುನಾಥ ಮುರಘೋಡ, ರಘು, ವಿನಾಯಕ, ಹಾಗೂ ಸಂತೋಷ ಜಾರಕಿಹೊಳಿ ಅವರ ಅಭಿಮಾನಿ ಬಳಗದವರು , ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಸಿಬ್ಬಂದಿಗಳು,ಶ್ರೇಷ್ಠ ಫೌಂಡೇಶನ್ ತಂಡದವರು ಹಾಗೂ ಅನೇಕ ಮುಖಂಡರು, ರೈತರು, ಯುವಕರು ಉಪಸ್ಥಿತರಿದ್ದರು
Laxmi News 24×7