Breaking News

ಪರಿಹಾರ ನೀಡಿ ಅಥವಾ ನನ್ನನ್ನು ಸ್ಮಶಾನಕ್ಕೆ ಕಳುಹಿಸಿ…ದಾನಪ್ಪ ಹಡಪದ

Spread the love

ಪರಿಹಾರ ನೀಡಿ ಅಥವಾ ನನ್ನನ್ನು ಸ್ಮಶಾನಕ್ಕೆ ಕಳುಹಿಸಿ…ದಾನಪ್ಪ ಹಡಪದ
ಕಳೆದಕೊಂಡ ಅಂಗಡಿಗೆ ಪರಿಹಾರವೋ ಅಥವಾ ಸ್ಮಶಾನವೋ ಎನ್ನುತ್ತಾ ಕಳೆದ 6-7 ತಿಂಗಳುಗಳಿಂದ ಗಟಾರ ನಿರ್ಮಾಣದ ಹೆಸರಿನಲ್ಲಿ ತೆರವುಗೊಂಡ ಅಂಗಡಿಯ ಮುಂದೆ ಕಣ್ಣೀರುಡುತ್ತಾ ಕಾಯುತ್ತಿರುವ ಕ್ಷೌರಿಕನ ಬಗ್ಗೆ ಒಂದು ವಿಶೇಷ ವರದಿ ಇಲ್ಲಿದೆ ನೋಡಿ.
ಇದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಲೋಕಾಪುರ ಪಟ್ಟಣದ ದಾನಪ್ಪಾ ಮಹಾಲಿಂಗಪ್ಪ ಹಡಪದ ಅವರ ಕಥೆಯಾಗಿದೆ.
ದಾನಪ್ಪನ ತಂದೆ ಮಹಾಲಿಂಗಪ್ಪ ಖುಲ್ಲಾ ಜಾಗೆಯನ್ನು 1951 ರಲ್ಲಿ ಖರೀದಿಸಿದ್ದಾರೆ. ದಾನಪ್ಪಾ 1990 ರಲ್ಲಿ ಕೆನರಾ ಬ್ಯಾಂಕ್ನಲ್ಲಿ ಸಾಲ ಮಾಡಿ ಅಂಗಡಿ ನಿರ್ಮಿಸಿ ಕ್ಷೌರಿಕ ಕೆಲಸ ನೀರ್ವಹಿಸುತ್ತ 12 ಜನರ ಬಾಳಿಗೆ ಬೆಳಕಾಗಿದ್ದ. ಆದರೆ ವಿಧಿಯಾಟ ಎನ್ನುವಂತೆ ಕಳೆದ ನವೆಂಬರನಲ್ಲಿ ಗಟಾರ ನಿರ್ಮಾಣದ ಹೆಸರಿನಲ್ಲಿ ಮುಂಜಾನೆ 5ರ ಸುಮಾರಿಗೆ ಅಂಗಡಿ ಕಳೆದುಕೊಂಡು ಎಲ್ಲರ ಮುಖ ಸ್ವಚ್ಛ ಮಾಡುತ್ತಿದ್ದ ದಾನಪ್ಪ ತನ್ನ ಮುಖದಲ್ಲಿ ನೀರು ತುಂಬಿಕೊಂಡು ಬೀದಿಗೆ ಬಿದ್ದಿದ್ದಾನೆ.
ಕಳೆದುಕೊಂಡ ಅಂಗಡಿಗೆಗೆ ಪರಿಹಾರಕ್ಕಾಗಿ ದಾನಪ್ಪ ಅಧಿಕಾರಿಗಳಿಂದ ಹಿಡಿದು ಅಧಿಕಾರ ನಡೆಸುತ್ತಿರುವ ಜನಪ್ರತಿನಿಧಿಗಳಿಗೂ ಮನವಿ ಮಾಡಿಕೊಂಡರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಆದ್ದರಿಂದ ನೋಂದಿರುವ ದಾನಪ್ಪ ಹಡಪದ ಬದುಕು ಕಳೆದುಕೊಂಡಿರುವ ನಮ್ಮಗೆ ಪರಿಹಾರ ನೀಡಿ ಇಲ್ಲವೋ ಸಶ್ಮಾನಕ್ಕೆ ಕಳುಹಿಸಿ ಬೀಡಿ ಎನ್ನುತ್ತಿದ್ದಾನೆ.
ಇನ್ನಾದರೂ ದಾನಪ್ಪನ ಕಣ್ಣೀರು ಓರಿಸುವ ಮೂಲಕ ಅವರ ಕುಟುಂಬಕ್ಕೆ ಸರ್ಕಾರ ಆಸರೆಯಾಗುತ್ತದೇಯಾ ಕಾದು ನೋಡಬೇಕು.

Spread the love

About Laxminews 24x7

Check Also

ಜಯಮೃತ್ಯುಂಜಯ ಶ್ರೀ ವಿರುದ್ಧದ ಕೇಸ್‌ಗೆ ಬಿಗ್ ಟ್ವಿಸ್ಟ್ – ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿಲ್ಲ ಎಂದ ಸಂತ್ರಸ್ತೆ

Spread the loveಬಾಗಲಕೋಟೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ ವಿರುದ್ಧದ ಕೇಸ್‌ಗೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಸಂತ್ರಸ್ತ ಮಹಿಳೆ ನನ್ನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ