ಬೀದರ್: ಮಾರಕಾಸ್ತ್ರಗಳಿಂದ ಕೊಚ್ಚಿ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಮಾಡಿದ ಘಟನೆ ನಗರದ ಹೊರವಲಯದ ಚಿಕ್ಕಪೇಟ್- ಅಲಿಯಾ ಬಾದ್ ರಿಂಗ್ ರೋಡ್ ನಲ್ಲಿರುವ ಢಾಬಾ ಹತ್ತಿರ ಶುಕ್ರವಾರ ಸಂಜೆ ನಡೆದಿದೆ.
ತಾಲೂಕಿನ ಹೊನ್ನಿಕೇರಿ ನಿವಾಸಿ, ಗ್ರಾಪಂ ಸದಸ್ಯ ವೈಜಿನಾಥ ದತ್ತಾತ್ರೇಯ (50) ಹತ್ಯೆಯಾದ ಉದ್ಯಮಿ. ಅಪರಿಚಿತರು ವೈಜಿನಾಥ ತಲೆ ಮತ್ತು ಹೊಟ್ಟೆಗೆ ಮಚ್ಚಿನಿಂದ ಕೊಚ್ವಿ, ಚಾಕುವಿನಿಂದ ತಿವಿದು ಹಲ್ಲೆ ಮಾಡಿದ್ದರಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ನೂತನ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Laxmi News 24×7