ಬೆಳಗಾವಿ: “ನಾವು ಯಾವುದೇ ಪರಿಸ್ಥಿತಿಯಲ್ಲಿ ಬಿಜೆಪಿ ಪಕ್ಷ ಬಿಡುವುದಿಲ್ಲ. ಅದೇ ರೀತಿ ಬಸನಗೌಡ ಪಾಟೀಲ ಯತ್ನಾಳ್ ಹೊಸ ಪಕ್ಷ ಕಟ್ಟಲ್ಲ, ಬಿಜೆಪಿಯಲ್ಲೇ ಮುಂದುವರೆಯುತ್ತಾರೆ. ನೂರಕ್ಕೆ ನೂರರಷ್ಟು ಯತ್ನಾಳ್ ಬಿಜೆಪಿಗೆ ವಾಪಸ್ ಬರುತ್ತಾರೆ” ಎಂದು ಶಾಸಕ ರಮೇಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಯತ್ನಾಳ್ ಹೊಸ ಪಕ್ಷದ ಬಗ್ಗೆ ಹೇಳಿದ್ದ ಉದ್ದೇಶವೇ ಬೇರೆ. ಮಾಧ್ಯಮದಲ್ಲಿ ಬಂದಿರುವುದೇ ಬೇರೆ. ಹಾಗಾಗಿ, ಬಿಜೆಪಿಯಲ್ಲಿ ಯತ್ನಾಳ್ ಮುಂದುವರೆಯವ ವಿಶ್ವಾಸವಿದೆ. ಅವರು ಎಲ್ಲಿಯೂ ಹೋಗಲ್ಲ” ಎಂದರು.
ಯತ್ನಾಳ್ ಉಚ್ಛಾಟನೆಯಾಗಿದ್ದು ದುರ್ದೈವ: ಹಿಂದುತ್ವಕ್ಕಾಗಿ ಹೊಸ ಪಕ್ಷ ಸ್ಥಾಪನೆ ವಿಚಾರಕ್ಕೆ ಪ್ರತಿಕ್ರಿಯಿಸಿ, “ಆರ್ಎಸ್ಎಸ್ ಇದೆಯಲ್ಲ ಅಷ್ಟೇ ಸಾಕು. ಬೇರೆ ಯಾವುದರ ಅವಶ್ಯಕತೆ ಇಲ್ಲ. ಮೊನ್ನೆ ಶಾಸಕರ ಸಭೆಯಲ್ಲಿ ಚರ್ಚೆ ಆಗಿದೆ. ಪಕ್ಷಕ್ಕೆ ಮುಜಗುರ ಆಗುವ ಹೇಳಿಕೆ ಕೊಡಬೇಡ ಅಂತಾ ಹೇಳಿದ್ದೇವೆ. ಯತ್ನಾಳ್ ನಮ್ಮ ಪಕ್ಷದ ದೊಡ್ಡ ನಾಯಕರಿದ್ದರು. ಉಚ್ಛಾಟನೆ ಆಗಿದ್ದು ದುರ್ದೈವ. ಪಕ್ಷದ ಹಿರಿಯರನ್ನು ಶೀಘ್ರವೇ ಭೇಟಿ ಮಾಡಿ ಯತ್ನಾಳ್ ಅವರ ಉಚ್ಚಾಟನೆ ವಾಪಸ್ ಪಡೆದುಕೊಳ್ಳುವಂತೆ ಮನವಿ ಮಾಡುತ್ತೇವೆ” ಎಂದು ತಿಳಿಸಿದರು.ಅವರನ್ನೇ ಕೇಳಿ: ವಿಜಯೇಂದ್ರ ಹಾಗೂ ಯತ್ನಾಳ್ ಮಾತಿನ ಸಮರ ಮತ್ತೆ ಮುಂದುವರೆದಿದೆ ಎಂಬ ಪ್ರಶ್ನೆಗೆ, “ಯತ್ನಾಳ್ ಅವರನ್ನೇ ಕೇಳಬೇಕು ಈ ವಿಷಯ” ಎಂದರು.
Laxmi News 24×7