ಖಾನಾಪೂರ ಪಟ್ಟಣದಲ್ಲಿನ ರೇಷನ್ ಅಂಗಡಿಗಳಿಗೆ ಹೋಗಿ ಪರಿಶೀಲನೆ ನಡೆಸಿದ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್
ಖಾನಾಪೂರ ಪಟ್ಟಣದ ರೇಷನ್ ವಿತರಣೆ ಅಂಗಡಿಗಳಾದ ಗರೀಭಿ ಹಟಾವೋ ಜನಸೇವಾ ಸಹಕಾರಿ ಸಂಘದ ನಿಂಗಾಪೂರಗಲ್ಲಿಯಲ್ಲಿ ಇರುವ ಅಂಗಡಿ ನಂಬರ್ 132 ಅಂಗಡಿ ಸೇರಿದಂತೆ ಟಿಎಪಿಸಿಎಂಎಸ್ ಖಾನಾಪೂರ ಶಾಖೆಯ ಅಂಗಡಿ ನಂಬರ್ 129 ಕ್ಕೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಸದಸ್ಯ ಇಸಾಕ್ ಖಾನ್ ಪಠಾಣ್ ಅವರು ಭೇಟಿ ನೀಡಿ ಯೋಗ್ಯ ರೀತಿಯಲ್ಲಿ ರೇಷನ್ ಅಕ್ಕಿಗಳನ್ನು ವಿತರಣೆ ಮಾಡಲಾಗುತ್ತಿದೆಯೇ
ಎಂಬುದನ್ನು ಪರಿಶೀಲಿಸಿದರು ಸರ್ಕಾರದ ಆದೇಶದ ಪ್ರಕಾರ ಅರ್ಹ ರೇಷನ್ ದಾರರಿಗೆ ರೇಷನ್ ವಿತರಣೆ ಮಾಡಿ ಎಂದು ರೇಷನ್ ವಿತರಣಾ ಅಂಗಡಿಯ ಮಾಲೀಕರಿಗೆ ಸೂಚನೆ ನೀಡಿದರು.
ಸರ್ಕಾರವು ಒಂದು ರೇಷನ್ ಕಾರ್ಡ್ ಗೆ ಒಬ್ಬ ವ್ಯಕ್ತಿಗೆ ಇಷ್ಟರಂತೆ ಒಟ್ಟು ಸದಸ್ಯರರೊಳ್ಳಗೊಂಡು ಇಷ್ಟು ಎಂಬ ಸೂಚನಾ ಫಲಕವನ್ನು ಅಳವಡಿಸಿ ಎಂದು ರೇಷನ್ ವಿತರಣಾ ಕೇಂದ್ರದ ಮುಖ್ಯಸ್ಥರಿಗೆ ಸೂಚನೆ ನೀಡಿದರು.
ರೇಷನ್ ಪಡೆಯಲು ಬಂದಂತಹವರನ್ನು ಸರಿಯಾಗಿ ಪೂರೈಕೆ ಆಗುತ್ತಿದೆಯೇ ಎಂಬುದನ್ನು ವಿಚಾರಿಸಿ ಪಂಚ ಗ್ಯಾರಂಟಿ ಯೋಜನೆಗಳ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
Laxmi News 24×7