ಬಾಗಲಕೋಟೆ ಎಗ್ಗಿಲ್ಲದೆ ನಡೆಯುತ್ತಿದೆ ಅಕ್ರಮ ಮಣ್ಣು ಗಣಿಗಾರಿಕೆ
ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ದಿವ್ಯ ನಿರ್ಲಕ್ಷದಿಂದ
ಅಕ್ರಮ ಮಣ್ಣು ಗಣಿಗಾರಿಕೆ ಹಾಗೂ ಟಿಪ್ಪರಗಳ ಸಂಚಾರದಿಂದ ಲೋಕಾಪೂರ ಪಟ್ಟಣದ ರಸ್ತೆಗಳು ಹದಗೆಟ್ಟು ವಾಹನ ಸವಾರರು ಹಿಡಿ ಶಾಪ ಹಾಕುವಂತಾಗಿದೆ
ಬಾಗಲಕೋಟೆ ಜಿಲ್ಲೆ ಲೋಕಾಪೂರ ಪಟ್ಟಣದ ಹೊರಭಾಗದಲ್ಲಿ ಅಕ್ರಮ ಗಣಿಗಾರಿಕೆ ನಡೆದಿದ್ದು ಲೋಕಾಪುರ ಕಾಡರಕೊಪ್ಪ ಭಾಗದಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದೆ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ಗಮನಕ್ಕಿದ್ರೂ,ನಿತ್ಯ ಭೂಮಿ ಅಗಿಯುತ್ತಿರೋ ದುರುಳರು
ಸಾರ್ವಜನಿಕರ ಕಣ್ಣು ತಪ್ಪಿಸಿ ರಾತ್ರಿ ಅಕ್ರಮ ಮಣ್ಣು ಗಣಿಗಾರಿಕೆ ಸದ್ದಿಲ್ಲದೆ ನಡೆದಿದೆ
ಅಕ್ರಮ ಮಣ್ಣು ಸಾಗಾಟಗಾರರಿಗೆ ಗಣಿ ಇಲಾಖೆ ಅಧಿಕಾರಿಗಳ ಕುಮ್ಮಕ್ಕು ಇರುವ ನಿಟ್ಟಿನಲ್ಲಿ
ಹಗಲು ಬೇಡಾ ರಾತ್ರಿ ಭೂಮಿ ಬಗೆಯಿರಿ ಎಂದು ಮಣ್ಣು ಲೂಟಿ ಕೋರರಿಗೆ ಗಣಿ ಇಲಾಖೆ ಅಧಿಕಾರಿಗಳು ಸಾಥ್ ಇಡುತ್ತಿದ್ದಾರಾ
ಎಂಬ ಗುಮಾನಿಗಳಿವೆ ಕಣ್ಮುಚ್ಚಿ ಕುಡಿತಿರುವ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಇನ್ನು ಮುಂದಾದರೂ ಕಣ್ಣು ತೆರೆದು ಅಕ್ರಮ ಮಣ್ಣು ಗಣಿಗಾರಿಕೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವರೊ ಎಂಬುದನ್ನು ಕಾದು ನೋಡಬೇಕು
Laxmi News 24×7