ಖಾನಾಪೂರ: ಕ್ರಿಕೆಟ್ ಪಟುಗಳನ್ನು ಪ್ರೋತ್ಸಾಹಿಸಿದ ಮಾಜಿ ಶಾಸಕ ಅರವಿಂದ ಪಾಟೀಲ
ಖಾನಾಪೂರ ತಾಲೂಕಿನ ಪಾಲಿ ಗ್ರಾಮದ ಯುವಕರಲ್ಲಿ ಒಬ್ಬ ಉತ್ಕೃಷ್ಟ ಗುಣಮಟ್ಟದ ಕ್ರೀಡಾ ಪಟು ಉದಯೋನ್ಮುಖ ಆಗಿ ಖಾನಾಪೂರ ತಾಲೂಕಿನ ಹೆಸರನ್ನು ಉಜ್ವಲಗೊಳಿಸುತ್ತಾನೆ ಎಂದು ಹೇಳಿ ಮಾಜಿ ಶಾಸಕ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಪಾಟೀಲರು ಯುವಕರಿಗೆ ಪ್ರೋತ್ಸಾಹ ನೀಡಿದರು.
ಈ ಸಂದರ್ಭದಲ್ಲಿ ಅವರೂ ಸಹ ಸ್ವಲ್ಪ ಹೊತ್ತು ಬ್ಯಾಟ್ ಹಿಡಿದು ಕ್ರೀಕೆಟ್ ಆಡಿ ಯುವಕರನ್ನು ಪ್ರೋತ್ಸಾಹಿಸಿ ನಾನು ಮಾಜಿ ಶಾಸಕ ಆಗಿದ್ರು ಕೂಡಾ ಸದಾ ನಿಮ್ಮ ಸಹಕಾರಕ್ಕೆ ಸಿದ್ಧ ಎಂದು ಹೇಳಿ ನಿಮ್ಮೊಂದಿಗೆ ಇರುವೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಬಹುಸಂಖ್ಯೆಯಲ್ಲಿ ಯುವಕರು, ಕ್ರೀಡಾಳುಗಳು ಉಪಸ್ಥಿತರಿದ್ದರು.
Laxmi News 24×7