Breaking News

ಹೃದಯಾಘಾತದಿಂದ ಚೇರ್ ಮೇಲೆ ಕುಳಿತಲ್ಲೇ ವ್ಯಕ್ತಿ ಸಾವು…!

Spread the love

ವಿಜಯಪುರ: ವ್ಯಕ್ತಿಯೊರ್ವ ಚೇರ್ ಮೇಲೆ ಕುಳಿತ ಸ್ಥಳದಲ್ಲೇ ಹೃದಯಾಘಾತದಿಂದ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ಪಟ್ಟಣದಲ್ಲಿ ಬೆಳ್ಳಂ ಬೆಳಿಗ್ಗೆ ಸಂಭವಿಸಿದೆ. ಮೃತ ದುರ್ದೈವಿಯನ್ನು ಸಾಹೇಬಗೌಡ ಹೆರಾಣವರ (72) ಎಂದು ಗುರುತಿಸಲಾಗಿದೆ. ಇನ್ನೂ ಮೃತ ವ್ಯಕ್ತಿ ಬಸವನ ಬಾಗೇವಾಡಿ ಪಟ್ಟಣದ ಮಿನಿ ವಿಧಾನ ಸೌಧದ ಮುಂದೆ ಚಿಕ್ಕ ಅಂಗಡಿ ಹಾಕಿಕೊಂಡಿದ್ದರು.

ತಹಶೀಲ್ದಾರ ಕಚೇರಿಗೆ ಕೆಲಸದ ನಿಮಿತ್ಯ ಆಗಮಿಸಿದ ಸಾರ್ವಜನಿಕರಿಗೆ ಅರ್ಜಿ ಫಾರ್ಮ್ ತುಂಬವ ಕಾಯಕ ಮಾಡಿ ಕೊಂಡಿದ್ದರು ಎನ್ನಲಾಗಿದೆ. ಎಂದಿನಂತೆ ಇಂದು ಬೆಳಗಿನ ಜಾವ ಬಂದು ಅಂಗಡಿ ತಗೆದು ಕುರ್ಚಿ ಮೇಲೆ ಕುಳಿತು ಕೆಲಸ ಆರಂಭಿಸುತ್ತಿದ್ದಂತೆ ಹೃದಯಾಘಾತವಾಗಿ ಸಾವನಪ್ಪಿರುವುದಾಗಿ ಶಂಕೆ ವ್ಯಕ್ತಪಡಿಸಲಾಗಿದೆ. ಇನ್ನೂ ಸ್ಥಳದಲ್ಲೇ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಬಸವನ ಬಾಗೇವಾಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

 


Spread the love

About Laxminews 24x7

Check Also

ವಿದ್ಯುತ್ ತಂತಿ ತಗುಲಿ ಟಿಪ್ಪರ್ ಗೆ ಆವರಿಸಿದ ಬೆಂಕಿ

Spread the love ವಿದ್ಯುತ್ ತಂತಿ ತಗುಲಿ ಟಿಪ್ಪರ್ ಗೆ ಆವರಿಸಿದ ಬೆಂಕಿ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಟಿಪ್ಪರ್ ಚಾಲಕನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ