Breaking News

ರಾಮದುರ್ಗ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಕಿರಿಯ ಎಲ್ಲ NHM ಗುತ್ತಿಗೆ ಆಧಾರದ ಮೇಲೆ ಕಾರ್ಯ ಮಾಡುತ್ತಿರುವ ವರ್ಗದ ಸಿಬ್ಬಂದಿಗಳು ಹಾಗೂ ವೈದ್ಯರು ಸರಕಾರಕ್ಕೆ ತಮ್ಮ ಕೂಗು ನಿಲುಕಲಿ ಎಂದು.

Spread the love

ರಾಮದುರ್ಗ: ಬೆಳಗಾವಿ ಜಿಲ್ಲೆಯ ರಾಮದುರ್ಗ ನಗರದ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಹಿರಿಕಿರಿಯ ಎಲ್ಲ NHM ಗುತ್ತಿಗೆ ಆಧಾರದ ಮೇಲೆ ಕಾರ್ಯ ಮಾಡುತ್ತಿರುವ ವರ್ಗದ ಸಿಬ್ಬಂದಿಗಳು ಹಾಗೂ ವೈದ್ಯರು ಸರಕಾರಕ್ಕೆ ತಮ್ಮ ಕೂಗು ನಿಲುಕಲಿ ಎಂದು.. ದಿನದ ಕರ್ತವ್ಯ ನಿಭಾಯಿಸುತ್ತಲೇ.. ಸಮವಸ್ತ್ರದಲ್ಲಿದ್ದೂ ರಟ್ಟೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಪ್ರತಿಭಟನೆ ಮಾಡಿ.. ಈ ಮೂಲಕ ಮನವಿ ಕೂಡ ಅರ್ಪಿಸಿದರು.
ಸಮಾನ ವೇತನ, ಸೇವಾಭದ್ರತೆ ಹಾಗೂ ಇನ್ನಿತರ ವಿಷಯಗಳನ್ನು ಇಟ್ಟುಕೊಂಡು.. ಈ ವಿಷಯಗಳ ಭಿತ್ತಿಚಿತ್ರ ಪ್ರದರ್ಶಿಸುತ್ತ ಸರಕಾರವನ್ನು ಎಚ್ಚರಿಸಿದರು. ಈ ಬಗ್ಗೆ NHM ವೈದ್ಯ ಸಿಬ್ಬಂದಿಯ ಶ್ರೀ ರಾಜು ಚವಾಣ್ ಮಾತನಾಡಿ ಬಹಳ ವರ್ಷಗಳಿಂದ ಈ ಮೂಲಭೂತ ಅನುಕೂಲತೆಗಾಗಿ ನಾವುಗಳು ಒಗ್ಗಟ್ಟಿನಿಂದ ಸರಕಾರಕ್ಕೆ ಬಾರಿ ಬಾರಿಗೆ ಮನವಿ ಮಾಡಿಕೊಂಡರೂ ಸರಕಾರ ಈ ಬಗ್ಗೆ ಕ್ರಮ ಕೈಗೊಳ್ಳುವುದು ಮರೀಚಿಕೆಯಾಗಿಯೇ ಉಳಿದಿದೆ. ಕಾರಣ ಇನ್ನೂ ವಿಳಂಬ ಮಾಡದೇ ನಮ್ಮ ಪ್ರಮುಖ ಮೂಲಭೂತ ಈ ಬೇಡಿಕೆಗಳನ್ನು ಈಡೇರಿಸಲು ವಿನಂತಿಸಿಕೊಂಡಿದ್ದೇವೆ. ಆದರೇ ಇನ್ನೂ ಸರಕಾರ ಎಂದಿನ ವಿಳಂಬ ನೀತಿ ಅನುಸರಿಸಿದರೆ.. ಮುಂದಿನ ದಿನಗಳಲ್ಲಿ ಈ ಹೋರಾಟವು ಅತ್ಯಂತ ತೀವ್ರ ಸ್ವರೂಪ ಪಡೆದುಕೊಳ್ಳುವಲ್ಲಿ ಯಾವ ಸಂಶಯವೂ ಇಲ್ಲ.. ಎಂದು ಹೇಳಿದರು.. ಆದಷ್ಟು ಬೇಗ ಸರಕಾರವು ನಮ್ಮ ಬಗ್ಗೆ ಮಿಡಿಯಲಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಂಡರು. ಸ್ಥಳೀಯ ಜನಪ್ರತಿನಿಧಿಗಳೂ ನಮ್ಮ ಈ ಕೂಗಿಗೆ ಓಗೊಟ್ಟು ಕಾರ್ಯ ಮಾಡಲು ಕೇಳಿಕೊಂಡರು.


Spread the love

About Laxminews 24x7

Check Also

ಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್

Spread the loveಗೋಕಾಕ ಜಾತ್ರೆ:ದೇವಿಯರ ದರ್ಶನ ಪಡೆದ ಸಚಿವ ಸತೀಶ ಜಾರಕಿಹೊಳಿ ಹಾಗೂ ಪುತ್ರ ರಾಹುಲ್ ಜುಲೈ ಒಂದರಿಂದ ಆರಂಭಗೊಂಡಿರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ