Breaking News
Home / ಜಿಲ್ಲೆ / ಬೆಂಗಳೂರು / ಬೆಂಗಳೂರಿನಲ್ಲಿ ಮಧ್ಯಾಹ್ನವಾಗುತ್ತಿದ್ದಂತೆಯೇ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ಇಳಿಮುಖ

ಬೆಂಗಳೂರಿನಲ್ಲಿ ಮಧ್ಯಾಹ್ನವಾಗುತ್ತಿದ್ದಂತೆಯೇ ಕೆಎಸ್ಸಾರ್ಟಿಸಿ ಬಸ್ ಪ್ರಯಾಣಿಕರ ಸಂಖ್ಯೆ ಇಳಿಮುಖ

Spread the love

ಬೆಂಗಳೂರು(ಮೇ.19): ದೇಶಾದ್ಯಂತ ನಾಲ್ಕನೇ ಹಂತದ ಲಾಕ್​ಡೌನ್​ ಮೇ 18ರಿಂದ ಜಾರಿಯಾಗಿದ್ದು, ಮೇ 31ರವರೆಗೂ ಇರಲಿದೆ. ಲಾಕ್​ಡೌನ್​ 4.0 ನಲ್ಲಿ ಭಾರಿ ಸಡಿಲಿಕೆ ನೀಡಲಾಗಿದ್ದು, ಬಹುತೇಕ ಎಲ್ಲ ವ್ಯಾಪಾರ- ವಹಿವಾಟು, ಸಂಚಾರ ವ್ಯವಸ್ಥೆ ಆರಂಭವಾಗಲಿದೆ. ಬಸ್ ಸಂಚಾರ ನಿರ್ಧಾರವನ್ನು ಕೇಂದ್ರ ಸರ್ಕಾರ ಆಯಾ ರಾಜ್ಯ ಸರ್ಕಾರಗಳಿಗೆ ವಹಿಸಿದ್ದರಿಂದ ಸೋಮವಾರ ಸಭೆ ನಡೆಸಿದ ಸಿಎಂ ಬಿಎಸ್ ಯಡಿಯೂರಪ್ಪ ಅವರು ಇಂದಿನಿಂದ ಸಾರಿಗೆ ಸಂಚಾರ ಆರಂಭಿಸಲು ನಿರ್ಧರಿಸಿದ್ದಾರೆ. ಅದರಂತೆ ಇಂದಿನಿಂದ ಬಿಎಂಟಿಸಿ ಮತ್ತು ಕೆಎಸ್​ಆರ್​ಟಿಸಿ ಬಸ್ಸುಗಳ ಸಂಚಾರ ಆರಂಭವಾಗಲಿದೆ. ಈ ಕುರಿತಾದ ಕ್ಷಣಕ್ಷಣದ ಮಾಹಿತಿ ನ್ಯೂಸ್​​​-18 ಕನ್ನಡದಲ್ಲಿ..

2:16 pm (IST)

ಮೆಜೆಸ್ಟಿಕ್ ಹಾಗೂ ಸ್ಯಾಟ್ ಲೈಟ್ ಬಸ್ ನಿಲ್ದಾಣದಿಂದ 4100 ಜನ ಪ್ರಯಾಣ

ಬೇರೆ ಬೇರೆ ಜಿಲ್ಲೆ ಗಳಿಗೆ ಪ್ರಯಾಣ ಮಾಡಿರೋ ಪ್ರಯಾಣಿಕರು

ಮೆಜೆಸ್ಟಿಕ್ ನಿಂದ 2900 ಹಾಗೂ ಸ್ಯಾಟ್ ಲೈಟ್ ನಿಂದ 1200 ಜನರ ಪ್ರಯಾಣ

ಮಧ್ಯಾಹ್ನದ ವೇಳೆಗೆ ಪ್ರಯಾಣಿಕರೇ ಇಲ್ಲದೆ ಸುಮ್ಮನೆ ನಿಲ್ಲಿಸಿರೋ ಬಸ್ ಗಳು

ಶೇ80% ರಷ್ಟು ಬಸ್ ಗಳನ್ನು ನಿಲ್ಲಿಸಿರೋ ಕೆಎಸ್ ಆರ್ ಟಿಸಿ

ಇನ್ನು ಕೇವಲ ಹತ್ತಿರದ ಜಿಲ್ಲೆಗಳಿಗೆ ಮಾತ್ರ ಬಸ್ ಗಳ ಸೌಲಭ್ಯ

12:47 pm (IST)

ಕೊಡಗಿನ ಪ್ರತೀ ಗ್ರಾಮೀಣ ಭಾಗದ ಸಂಪರ್ಕ ಸೇತುವೆಯಾಗಿರುವ ಖಾಸಗೀ ಬಸ್ಸುಗಳ ಸಂಚಾರ ಸದ್ಯಕ್ಕೆ ಆರಂಭವಾಗುವಂತೆ ಕಾಣಿಸುತ್ತಿಲ್ಲ. ಕೊಡಗಿನಲ್ಲಿ ಸಾರ್ವಜನಿಕ ಸಾರಿಗೆಯನ್ನು ಬಂದ್ ಮಾಡಿ 60 ದಿನಗಳೇ ಕಳೆದಿವೆ. ಇದೀಗ ಸರ್ಕಾರವೇ ಸಾರಿಗೆ ಸಂಚಾರಕ್ಕೆ ಅವಕಾಶ ನೀಡಿದ್ದರೂ ಕೊಡಗಿನಲ್ಲಿ ಖಾಸಗೀ ಬಸ್ಸುಗಳ ಸಂಚಾರ ಮಾತ್ರ ಆರಂಭವಾಗಿಲ್ಲ. ಒಂದು ಬಸ್ಸಿನಲ್ಲಿ ಕೇವಲ 30 ಜನರ ಓಡಾಟಕ್ಕೆ ಮಾತ್ರವೇ ಅವಕಾಶ ನೀಡಿರುವುದರಿಂದ ಇದರಿಂದ ನಮ್ಮಗೆ ನಷ್ಟವಾಗುವುದೆಂದು ಖಾಸಗೀ ಬಸ್ಸ್ ಮಾಲಿಕರ ಸಂಘ ಜೂನ್ 1 ರವೆಗೆ ಬಸ್ಸುಗಳನ್ನು ಓಡಿಸುವುದಿಲ್ಲೆ ಂದು ನಿರ್ಧರಿಸಿದೆ. ಕನಿಷ್ಠ ಆರು ತಿಂಗಳವರೆಗೆ ಟ್ಯಾಕ್ಸ್ ವಿನಾಯಿತಿ ನೀಡಬೇಕು ಎಂದು ಖಾಸಗೀ ಬಸ್ ಮಾಲೀಕರ ಸಂಘ ಸರ್ಕಾರಕ್ಕೆ ಬೇಡಿಕೆ ಇಟ್ಟಿದೆ. ಇದರಿಂದ ಖಾಸಗೀ ಬಸ್ಸುಗಳನ್ನೇ ಅವಲಂಬಿಸಿ ಬದುಕು ನಡೆಸುತ್ತಿದ್ದ ನೂರಾರು ಕುಟುಂಬಗಳು ಅತಂತ್ರವಾಗಿವೆ. ಮತ್ತೊಂದೆಡೆ ಗ್ರಾಮೀಣ ಪ್ರದೇಶಗಳಿಗೆ ಸಾರಿಗೆ ಸಂಚಾರವಿಲ್ಲದೆ ಜನರು ಪರದಾಡುವ ಸ್ಥಿತಿ ಎದುರಾಗಿದೆ.

12:29 pm (IST)

ತುಮಕೂರಿಗೆ ಹೋಗೋ ಪ್ರಯಾಣಿಕರೇ ಇಲ್ಲ ಮೆಜೆಸ್ಟಿಕ್ ನಲ್ಲಿ

ಮುಂಜಾನೆ ತುಮಕೂರು, ಕುಣಿಗಲ್, ಮಧುಗಿರಿ ಕಡೆ ಹೋಗೋರ ಸಂಖ್ಯೆ ಜಾಸ್ತಿ ಇತ್ತು

ಆದ್ರೆ ಈಗ ಸಾಲಾಗಿ ಬಸ್ ಗಳು ನಿಂತಿದ್ರೂ ಹೋಗೋಕೆ ಪ್ರಯಾಣಿಕರೇ ಇಲ್ಲ

ಏಳೆಂಟು ಬಸ್ ಗಳು ಸುಮ್ಮನೆ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ನಿಂತಿದೆ

ತುಮಕೂರು ಅಂತ ಕೂಗಿ ಹೇಳ್ತಾ ಇದ್ರೂ ಬಾರದ ಪ್ರಯಾಣಿಕರು

12:28 pm (IST)

ಮಧ್ಯಾಹ್ನದ ನಂತ್ರ ಹತ್ತಿರದ ಜಿಲ್ಲೆಗಳಿಗೆ ಮಾತ್ರ ಬಸ್ ಗಳ ವ್ಯವಸ್ಥೆ

ಈಗಾಗಿ ಪ್ರಯಾಣಿಕರ ಸಂಖ್ಯೆ ಸಹ ಬಹುತೇಕ ಇಳಿಮುಖ

ಶಿವಮೊಗ್ಗಕ್ಕೆ 12 ಗಂಟೆಗೆ ಇಂದಿನ ಕೊನೆಯ ಬಸ್

ಬೆರಳೆಣಿಕೆಯಷ್ಟು ಪ್ರಯಾಣಿಕರು ಮಾತ್ರ ಶಿವಮೊಗ್ಗ ಕ್ಕೆ ಹೊರಡೋ ಬಸ್ ನಲ್ಲಿ

ಶೇ 70 ರಷ್ಟು ಬಸ್ ಗಳ ಸಂಚಾರ ಸ್ಥಗಿತ

11:51 am (IST)

ಮೈಸೂರಿನಿಂದ ಬೆಂಗಳೂರಿಗೆ ಹೊರಡುವ ಬಸ್ 4 ಗಂಟೆಗೆ ಬಂದ್.
ಸಂಜೆ 7 ಗಂಟೆ ಒಳಗಾಗಿ ಬೆಂಗಳೂರು ಸೇರಿಕೊಳ್ಳುವ ಉದ್ದೇಶದಿಂದ 4 ಗಂಟೆಗೆ ಕೊನೆ ಬಸ್ ಸೇವೆ.
ಮೈಸೂರು KSRTC ಗ್ರಾಮಾಂತರ ಡಿಸಿ ಅಶೋಕ್‌ಕುಮಾರ್ ಮಾಹಿತಿ.
ಮೈಸೂರಿನಲ್ಲಿ ಅಕ್ಕಪಕ್ಕದ ಜಿಲ್ಲೆಗಳಿಗೆ ಸಮಯದ ಆಧಾರದ ಮೇಲೆ ಬಸ್ ಸೇವೆ.
ಎಲ್ಲ ಜಿಲ್ಲೆಗಳಿಗು ಸಂಜೆ 7 ಗಂಟೆ ಒಳಗಾಗಿ ಬಸ್ ತಲುಪಬೇಕು.
ಆಯಾ ಜಿಲ್ಲೆಯ ಪ್ರಯಾಣ ಸಮಯದ ಅಂದಾಜಿಸಿ ಬಸ್ ಸೇವೆ ಸ್ಥಗಿತ.
ಮತ್ತೆ ನಾಳೆ ಬೆಳಗ್ಗೆ 7 ಗಂಟೆಯಿಂದ ಬಸ್ ಸೇವೆ ಆರಂಭ.
ಇಂದು 100 ಬಸ್‌ಗಳಲ್ಲು ಸಂಚಾರ ಆರಂಭ.
ಅಗತ್ಯಕ್ಕೆ ತಕ್ಕಂತೆ ಬಸ್ ಸಂಖ್ಯೆ ಹೆಚ್ಚಳ ಇಳಿಕೆಗೆ ನಿರ್ಧಾರ.

11:25 am (IST)

ಮಂಡ್ಯ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರಿಗೆ ಸಂಜೆ 5 ಗಂಟೆಯವರೆಗೂ ಬಸ್ ಗಳು ಇರಲಿದೆ

11:25 am (IST)

ಕೆ ಎಸ್ ಆರ್ ಟಿಸಿಯಿಂದ ಬೇರೆ ಜಿಲ್ಲೆಗೆ ಹೋಗುವ ಲಾಸ್ಟ್ ಬಸ್ ಗಳು

ಸಂಜೆ ಏಳು ಗಂಟೆ ಒಳಗೆ ತಲುಪಬೇಕಾದ ಹಿನ್ನಲೆ

ಕೆ ಎಸ್ ಆರ್ ಟಿಸಿ ಇಂದ ಕೊನೆ ಬಸ್ ಗಳ ಪಟ್ಟಿ

ದಾವಣಗೆರೆ ಮಧ್ಯಾಹ್ನ  1-00 ಗಂಟೆಗೆ ಲಾಸ್ಟ್ ಬಸ್

ಹಾಸನ ಸಂಜೆ -3-30   ಕ್ಕೆ ಲಾಸ್ಟ್ ಬಸ್

ಮೈಸೂರು  ಸಂಜೆ 4-00 ಗಂಟೆಗೆ ಲಾಸ್ಟ್ ಬಸ್

ಮಂಗಳೂರಿಗೆ ಬೆಳಗ್ಗೆ 11-30  ಲಾಸ್ಟ್ ಬಸ್

ಪ್ರಯಾಣಿಕರು ಕೆಸ್ಆರ್ ಟಿಸಿ ನಿಗದಿ ಪಡಿಸಿದ ಸಮಯದೊಳಗೆ ತೆರಳಲು ಮನವಿ

11:15 am (IST)

ಇದುವರೆಗೂ ನಗರದಿಂದ ಹೊರಟ Ksrtc ಬಸ್ ಗಳು


10:20 am (IST)

ತಾಯಿಯ ಶವದ ಜೊತೆ ಐದು ದಿನ ಮನೆಯಲ್ಲೇ ಕಳೆದ ಮಗಳು.

ಶಿವಮೊಗ್ಗದ ಬಸವನಗುಡಿ ಬಡಾವಣೆಯಲ್ಲಿ ಘಟನೆ.

ರಾಜೇಶ್ವರಿ ಕಳೆದ ಐದು ದಿನಗಳ ಹಿಂದೆ ಮೃತಪಟ್ಟಿದ್ದ ಮಹಿಳೆ.

ರಾಜೇಶ್ವರಿ  64 ವರ್ಷ , ನಿವೃತ್ತ ಶಾಲಾ ಶಿಕ್ಷಕಿ.

ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ರಾಜೇಶ್ವರಿ.

ಕಳೆದ ನಾಲ್ಕೈದು ದಿನಗಳ ಹಿಂದೆ, ಸಾವನಪ್ಪಿರುವ ರಾಜೇಶ್ವರಿ.

ಔಷಧದ ಡೋಸ್, ಹೆಚ್ಚಾಗಿ ಸಾವನಪ್ಪಿರುವ ಶಂಕೆ.

ಮಾನಸಿಕ ಅಸ್ವಸ್ಥೆ ಎಂದು ಹೇಳಲಾಗುತ್ತಿರುವ ಮೃತ ಮಹಿಳೆಯ ಮಗಳು ಶಾಂಭವಿ.

ಶವ ಕೊಳೆತ ವಾಸನೆ ಬರುತ್ತಿದ್ದರಿಂದ ಅಕ್ಕಪಕ್ಕದ ನಿವಾಸಿಗಳಿಂದ ಜಯನಗರ ಠಾಣೆ ಪೊಲೀಸರಿಗೆ ಮಾಹಿತಿ.

ಶವವನ್ನು ಶವಾಗಾರಕ್ಕೆ ಸಾಗಿಸಿದ ಪೊಲೀಸರು.

10:19 am (IST)

ಕೆಎಸ್ ಆರ್ ಟಿಸಿ ಬಸ್ ಸಂಚಾರ ಆರಂಭ.
ಈವರೆಗೂ 237 ksrtc ಬಸ್ ಗಳ ಕಾರ್ಯಾಚರಣೆ.
ವಿವಿಧ ಜಿಲ್ಲೆಗಳಿಂದ ಕಾರ್ಯಾಚರಣೆ ಮಾಡುತ್ತಿರುವ ಬಸ್ ಗಳು.


Spread the love

About Laxminews 24x7

Check Also

ಚಿದಾನಂದ ಸವದಿ‌ಗೆ ಚಿಕ್ಕೋಡಿ ಕ್ಷೇತ್ರಕ್ಕೆ ಟಿಕೆಟ್ ನೀಡುವ ಸಾಧ್ಯತೆ

Spread the loveಬೆಳಗಾವಿ, : ಲೋಕಸಭಾ ಚುನಾವಣೆ (Lok Sabha Elections )ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ (Congress) ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದೆ. ಅಳೆದು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ