Breaking News
Home / ಜಿಲ್ಲೆ / ಮಹಾಮಾರಿ ಕೊರೊನಾ ವೈರಸ್‍ಗೆ ಹೆಚ್ಚಾಗಿ ವೃದ್ಧರೇ ಬಲಿಯಾಗುತ್ತಿದ್ದು,…..

ಮಹಾಮಾರಿ ಕೊರೊನಾ ವೈರಸ್‍ಗೆ ಹೆಚ್ಚಾಗಿ ವೃದ್ಧರೇ ಬಲಿಯಾಗುತ್ತಿದ್ದು,…..

Spread the love

 ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‍ಗೆ ಹೆಚ್ಚಾಗಿ ವೃದ್ಧರೇ ಬಲಿಯಾಗುತ್ತಿದ್ದು, ಇದರ ಹಿಂದಿನ ಅಸಲಿಯತ್ತು ಇದೀಗ ಬಯಲಾಗಿದೆ.

ವಯಸ್ಸಾಗಿದೆ ಅಂತ ವೃದ್ಧರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಐಸೂಲೇಷನ್ ವಾರ್ಡಿನಲ್ಲಿ ವೃದ್ಧರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾಗೆ ಹೆಚ್ಚಾಗಿ ವೃದ್ಧರೇ ಬಲಿಯಾಗಿತ್ತಿದ್ದಾರೆ ಎಂಬ ಎಕ್ಸ್ ಕ್ಲೂಸೀವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಇದಕ್ಕೆ ಸಾಕ್ಷಿ ಎಂಬಂತೆ ಸಾಯುವುದಕ್ಕೂ ಮುನ್ನ ಕುಟುಂಬಸ್ಥರ ಜೊತೆ ಚಿಕ್ಕಬಾಣಾವರದ ವೃದ್ಧೆಯೊಬ್ಬರು ತನ್ನ ಅಳಲು ತೋಡಿಕೊಂಡಿದ್ದಾರೆ. ಕುಟುಂಬದ ಮಗಳು, ಮೊಕ್ಕಳಿಗೆ ಕರೆ ಮಾಡಿ ಮಾತಾನಾಡಿರುವ ಅಜ್ಜಿ, ವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದ 70 ವರ್ಷದ ವೃದ್ಧೆ, ಕುಟುಂಬಸ್ಥರ ಜೊತೆ ಮಾತಾಡಿದ ಮೂರನೇ ದಿನಕ್ಕೆ ಮೃತಪಟ್ಟಿದ್ದಾರೆ.

ಅಜ್ಜಿ ಅಳಲು ಏನು?
ನಮ್ಮನ್ನು ಇಲ್ಲಿ ಸರಿಯಾಗಿ ನೋಡಿಕೊಳ್ತಿಲ್ಲ. ನೀರು ಕೇಳಿದ್ರೆ ನೀರು ಕೊಡಲ್ಲ. ಬೆಳಗ್ಗೆ ನೀರು ಕೇಳಿದ್ದು ಸಂಜೆ ಕೊಟ್ಟಿದ್ದಾರೆ. ಮೈತುಂಬಾ ಗುಳ್ಳೆ ಉಕ್ಕಿವೆ. ಅಲ್ಲದೆ ಈ ಗುಳ್ಳೆ ಒಡೆದು ರಕ್ತ ಬಂದರೂ ಆಯಿಂಟ್ಮೆಂಟ್ ಕೊಡ್ತಿಲ್ಲ ಎಂದು ಅಜ್ಜಿ ತನ್ನ ಕುಟುಂಬಸ್ಥರ ಜೊತೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಆರ್ಭಟದ ನಡುವೆ ಐಸೂಲೇಷನ್ ವಾರ್ಡ್‍ಗಳಲ್ಲಿ ಸೋಂಕಿತರ ಕುಟುಂಬಸ್ಥರು ಇರಲ್ಲ ಅಂತ ಆಡಿದ್ದೇ ಆಟ ಎನ್ನುವಂತಾಗಿದೆ. ಹೀಗಾಗಿ ಎಷ್ಟು ಜನ ವೃದ್ಧರನ್ನ ಗುಣಮುಖ ಮಾಡಿ ಮನೆಗೆ ಕಳಿಸಿದ್ದೀರಿ…? ಹಾಗೆಯೇ ಎಷ್ಟು ಜನ ಬೆಂಗಳೂರಲ್ಲಿ ವೃದ್ಧರು ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಲೆಕ್ಕ ಕೊಡಿ. ನಿಮ್ಮ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜನ ವೃದ್ಧರು ಬಲಿಯಾಗಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ವಯಸ್ಸಾಗಿದೆ ಅಂತ ವೃದ್ಧರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ.  ವಾರ್ಡಿನಲ್ಲಿ ವೃದ್ಧರಿಗೆ ಸರಿಯಾದ ಚಿಕಿತ್ಸೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೊರೊನಾಗೆ ಹೆಚ್ಚಾಗಿ ವೃದ್ಧರೇ ಬಲಿಯಾಗಿತ್ತಿದ್ದಾರೆ ಎಂಬ ಎಕ್ಸ್ ಕ್ಲೂಸೀವ್ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

1ಇದಕ್ಕೆ ಸಾಕ್ಷಿ ಎಂಬಂತೆ ಸಾಯುವುದಕ್ಕೂ ಮುನ್ನ ಕುಟುಂಬಸ್ಥರ ಜೊತೆ ಚಿಕ್ಕಬಾಣಾವರದ ವೃದ್ಧೆಯೊಬ್ಬರು ತನ್ನ ಅಳಲು ತೋಡಿಕೊಂಡಿದ್ದಾರೆ. ಕುಟುಂಬದ ಮಗಳು, ಮೊಕ್ಕಳಿಗೆ ಕರೆ ಮಾಡಿ ಮಾತಾನಾಡಿರುವ ಅಜ್ಜಿವೈದ್ಯಕೀಯ ಸಿಬ್ಬಂದಿ ನಿರ್ಲಕ್ಷ್ಯದ ಬಗ್ಗೆ ಹೇಳಿಕೊಂಡಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಾ ಇದ್ದ 70 ವರ್ಷದ ವೃದ್ಧೆ, ಕುಟುಂಬಸ್ಥರ ಜೊತೆ ಮಾತಾಡಿದ ಮೂರನೇ ದಿನಕ್ಕೆ ಮೃತಪಟ್ಟಿದ್ದಾರೆ.

ನಮ್ಮನ್ನು ಇಲ್ಲಿ ಸರಿಯಾಗಿ ನೋಡಿಕೊಳ್ತಿಲ್ಲ. ನೀರು ಕೇಳಿದ್ರೆ ನೀರು ಕೊಡಲ್ಲ. ಬೆಳಗ್ಗೆ ನೀರು ಕೇಳಿದ್ದು ಸಂಜೆ ಕೊಟ್ಟಿದ್ದಾರೆ. ಮೈತುಂಬಾ ಗುಳ್ಳೆ ಉಕ್ಕಿವೆ. ಅಲ್ಲದೆ ಈ ಗುಳ್ಳೆ ಒಡೆದು ರಕ್ತ ಬಂದರೂ ಆಯಿಂಟ್ಮೆಂಟ್ ಕೊಡ್ತಿಲ್ಲ ಎಂದು ಅಜ್ಜಿ ತನ್ನ ಕುಟುಂಬಸ್ಥರ ಜೊತೆ ಮಾತನಾಡುತ್ತಾ ಕಣ್ಣೀರು ಹಾಕಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಆರ್ಭಟದ ನಡುವೆ ಐಸೂಲೇಷನ್ ವಾರ್ಡ್‍ಗಳಲ್ಲಿ ಸೋಂಕಿತರ ಕುಟುಂಬಸ್ಥರು ಇರಲ್ಲ ಅಂತ ಆಡಿದ್ದೇ ಆಟ ಎನ್ನುವಂತಾಗಿದೆ. ಹೀಗಾಗಿ ಎಷ್ಟು ಜನ ವೃದ್ಧರನ್ನ ಗುಣಮುಖ ಮಾಡಿ ಮನೆಗೆ ಕಳಿಸಿದ್ದೀರಿ…? ಹಾಗೆಯೇ ಎಷ್ಟು ಜನ ಬೆಂಗಳೂರಲ್ಲಿ ವೃದ್ಧರು ಮೃತಪಟ್ಟಿದ್ದಾರೆ ಎಂಬುದರ ಬಗ್ಗೆ ಲೆಕ್ಕ ಕೊಡಿ. ನಿಮ್ಮ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಜನ ವೃದ್ಧರು ಬಲಿಯಾಗಬೇಕು ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.


Spread the love

About Laxminews 24x7

Check Also

ನೇಹಾ ಕೊಲೆ ಪ್ರಕರಣದ ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮುಸ್ಲಿಂ ಸಮುದಾಯದಿಂದ ಪ್ರತಿಭಟನೆ

Spread the loveಹುಬ್ಬಳ್ಳಿ : ಕಾಂಗ್ರೆಸ್ ಕಾರ್ಪೊರೇಟರ್ ಪುತ್ರಿ ನೇಹಾ ಹಿರೇಮಠ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿರುವ ಆರೋಪಿ ಫಯಾಝ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ