Breaking News

ಐನಾಪುರ-ಮೂಳೆ, ಶೇಡಬಾಳ ಸ್ಟೇಷನ್ ರಸ್ತೆ ಕಾಮಗಾರಿಗೆ ಶ್ರೀಮಂತ ಪಾಟೀಲ್ ಚಾಲನೆ

Spread the love

ಕಳೆದ ಅನೇಕ ವರ್ಷಗಳಿಂದ ಹದಗೆಟ್ಟು ಹೋದ ಐನಾಪುರ್ -ಮೂಳೆ,3 ಕೋಟಿ ಸೇಡಬಾಳ ಸ್ಟೇಷನ ದಲ್ಲಿ 60 ಲಕ್ಷ ರೂ ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಕಾಗವಾಡ ಶಾಸಕ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ ಚಾಲನೆ ನೀಡಿದರು.

ಶುಕ್ರವಾರ ರಂದು ಶಾಸಕ ಶ್ರೀಮಂತ ಪಾಟೀಲರು ಸೇಡಬಾಳ ಸ್ಟೇಷನ್ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಪೂಜೆ ಸಲ್ಲಿಸಿದರು. ಶಾಸಕ ಶ್ರೀಮಂತ ಪಾಟೀಲರು ಅಭಿಯಂತರಿಗೆ ಮತ್ತು ಗುತ್ತಿಗೆದಾರರಿಗೆ ಗುಣಮಟ್ಟದ ರಸ್ತ ಕಾಮಗಾರಿ ನಿರ್ಮಿಸಲು ಸೂಚನೆ ನೀಡಿದರು ಕಳಪೆ ಕಾಮಗಾರಿ ಆದರೆ ನಿಮ್ಮಿಂದ ಮತ್ತೆ ಕಾಮಗಾರಿ ನಿರ್ಮಿಸುವ ವೇಳೆ ಬರಬಾರದು ಎಂದು ಎಚ್ಚರಿಕೆ ನೀಡಿದರು.

ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿಯ ಮುಖ್ಯ ಅಧಿಕಾರಿ ಮಾನತೇಶ್ ಕೊಲ್ಲಾಪುರೆ, ಬಿಜೆಪಿ ಪಕ್ಷದ ಮುಖಂಡರಾದ ಭರತೇಶ್ ಪಾಟೀಲ್, ಉತ್ಕರ್ಷಿ ಪಾಟೀಲ್, ಸಂದೀಪ್ ಸಾಳುಂಕೆ, ಪಟ್ಟಣ ಪಂಚಾಯಿತಿ ಸದಸ್ಯ ರೇಣುಕಾ ತುಕಾರಾಮ ಕನಕಾಂಬಳೆ, ಮಾರುತಿ ಮಾಕನವರ್, ನಾನಾಸಾಹೇಬ್ ಜಾದವ್ ,ಸಚಿನ್ ಹೊಸವಾಡೆ ಸೇರಿದಂತೆ ಅನೇಕರಿದ್ದರು.

ಐನಾಪುರ್ -ಮೂಳೆ ಮಾರ್ಗದ 3 ಕೋಟಿ ರೂ ವೆಚ್ಚದ ರಸ್ತೆ ಕಾಮಗಾರಿ ಪೂಜಾ ಕಾರ್ಯಕ್ರಮದಲ್ಲಿ ತಮ್ಮನಾ ಪಾರ್ಶೆಟ್ಟಿ ದಾದಾ ಪಾಟೀಲ್, ರಾಜೇಂದ್ರ ಪೋತದಾರ್, ಮೋಹನ್ ಕಾರಚಿ, ಗುತ್ತಿಗೆದಾರರಾದ ಎ. ಜಿ. ಹಳ್ಳಿ ಶಿವು ಮಾಲಗಾವೆ, ಸೇರಿದಂತೆ ಅನೇಕ ಕಾರ್ಯಕರ್ತರು ಉಪಸಿತರಿದ್ದರು.


Spread the love

About Laxminews 24x7

Check Also

ಮತ್ತೆ ಪಾಚಿಕಟ್ಟಿದ ಸುವರ್ಣ ಸೌಧ:

Spread the loveಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಬೆಳಗಾವಿಯ ಸುವರ್ಣ ವಿಧಾನಸೌಧ ಮತ್ತೆ ಪಾಚಿಕಟ್ಟಿದೆ. ಸ್ವಚ್ಛತೆಗೆ ಅನುದಾನ ಕೊರತೆ ಎದುರಾಗಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ