Breaking News

ಒಬ್ಬ ಹೆಣ್ಣಾದ ನನ್ನನ್ನು ಈ ಪ್ರಕರಣಕ್ಕೆ ಬಳಸಿಕೊಂಡರು -ಉಮಾಪತಿ ವಿರುದ್ಧ ಅರುಣಾಕುಮಾರಿ ಕಿಡಿ

Spread the love

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್​ಗೆ ₹ 25 ಕೋಟಿ ವಂಚನೆ ಯತ್ನ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅರುಣಾಕುಮಾರಿ ಮಾಧ್ಯಮಗಳಿಗೆ ವಿಡಿಯೋ ಒಂದನ್ನ ಹರಿಬಿಟ್ಟಿದ್ದಾರೆ.

ನನ್ನ ಪಾಡಿಗೆ ನನಗೆ ಬದುಕಲು ಬಿಡಿ
ಈ ಪ್ರಕರಣದಿಂದ ನನಗೆ, ಕುಟುಂಬಕ್ಕೆ ನೋವಾಗಿದೆ. ದಯವಿಟ್ಟು ನನ್ನ ಪಾಡಿಗೆ ನಾನು ಬದುಕಲು ಬಿಡಿ. ಇವೆಲ್ಲಾ ಬೆಳವಣಿಗೆಯಿಂದ ಸಾಯಬೇಕು ಎನಿಸುತ್ತಿದೆ. ನಾನು ಬಹಳ ನೋವಿನಿಂದ ಮಾತನಾಡುತ್ತಿದ್ದೇನೆ. ಮಾರ್ಚ್​ 30ರಿಂದ ನನಗೂ ಅವರಿಗೂ ಸಂಪರ್ಕವಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಸತ್ಯ ಹೊರಬರಲಿದೆ.

ಪ್ರಕರಣದಲ್ಲಿ ಉಮಾಪತಿಗೆ ಯಾವ್ದೇ ಲಾಭ ಇಲ್ಲ. ಒಬ್ಬ ಹೆಣ್ಣಾದ ನನ್ನನ್ನು ಪ್ರಕರಣಕ್ಕೆ ಬಳಸಿಕೊಂಡರು. ಉಮಾಪತಿ ನೇರವಾಗಿ ಹರ್ಷ ಬಳಿ ಮಾತನಾಡಬೇಕಿತ್ತು. ಹರ್ಷನ ಬಳಿ ಮಾತನಾಡಲು ನನ್ನ ಏಕೆ ಬಳಸಿದ್ರು? ಇದರಲ್ಲಿ ನನ್ನನ್ನು ಮಧ್ಯೆ ಎಳೆತಂದಿದ್ದು ಏಕೆ ಹೇಳಿ? ಈ ವಿಚಾರದಲ್ಲಿ ನಾನು ಯಾರ ಬಳಿ ಹಣ ಪಡೆದಿಲ್ಲ.

ಲೋನ್​​ಗೆ ಅಪ್ಲೈ ಮಾಡಿಲ್ಲ, ಅಪ್ರೋಚ್ ಮಾಡಿರುವುದು. ಲೋನ್​ಗೆ ಅಪ್ರೋಚ್ ಮಾಡಿದ್ದಾಗಿ ನಾನು ಹೇಳಿದೆ. ಈ ಪ್ರಕರಣದಿಂದ ನಾನು ಡಿಪ್ರೆಷನ್​ಗೆ ಹೋಗಿದ್ದೇನೆ. ನನ್ನಂತಹ ಅಮಾಯಕೆಯನ್ನು ಬಳಸಿಕೊಂಡರು. ನನ್ನ ಜೀವನದ ಕಥೆ ಏನು ಎಂದು ಭಯವಾಗಿದೆ. ಪ್ರಕರಣದಲ್ಲಿ ನನ್ನನ್ನು ಬಳಸಿಕೊಂಡಿದ್ದು ತಪ್ಪು. ನನ್ನ ಪಾಡಿಗೆ ನಾನು ಬದುಕಲು ಬಿಟ್ಟುಬಿಡಿ ಎಂದು ವಿಡಿಯೋವನ್ನ ಹರಿಬಿಟ್ಟಿದ್ದಾರೆ.


Spread the love

About Laxminews 24x7

Check Also

ಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್!

Spread the loveಅಪಘಾತದ ಕಥೆ ಕಟ್ಟಿ ಹಣ ಸುಲಿಗೆ; ವಯೋವೃದ್ಧ ಕಾರು ಚಾಲಕರೇ ಈತನ ಟಾರ್ಗೆಟ್! ಬೆಂಗಳೂರು: ವಯೋವೃದ್ಧ ಕಾರು ಚಾಲಕರನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ