Breaking News
Home / Uncategorized / ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಬೇಕು: ಕರವೆ ಪ್ರವೀಣ ಶೆಟ್ಟಿ.

ಮುಂಬೈ ಕೇಂದ್ರಾಡಳಿತ ಪ್ರದೇಶ ಮಾಡಬೇಕು: ಕರವೆ ಪ್ರವೀಣ ಶೆಟ್ಟಿ.

Spread the love

ಕನ್ನಡಿಗರಿಗೆ ಎಂ.ಇ.ಎಸ್ ಮುಖಂಡ ಶುಭಂ ಸಾಳುಂಕೆ ದಮ್ಕಿ ಹಾಕಿರುವ ಹಿನ್ನೆಲೆಯಲ್ಲಿ ಗುರುವಾರ ಬೆಳಗಾವಿಯ ಚನಮ್ಮ ವೃತ್ತದಲ್ಲಿ ಕರವೆ ಪ್ರವಿಣ ಶೆಟ್ಟಿ ಬಣದಿಂದ ಪ್ರತಿಭಟನೆ ಮಾಡಲಾಯಿತು.

ಕೆಲ ದಿನಗಳಹಿಂದ ಎಂ.ಇ.ಎಸ್ ಮುಖಂಡ ಶುಭಂ ಸಾಳುಂಕೆ ಕೆಂಪು,ಹಳದಿ ಬಣ್ಣದ ಶಾಲು ಧ್ವಜ ನಮ್ಮ ಮುಂದೆ ಬಂದರೆ ಅಟ್ಟಾಡಿಸಿ ಹೊಡೆಯುದಾಗಿ ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆರಳಿಸಿದರು.

ಈ ಕುರಿತು ಮಾತನಾಡಿರುವ ಪ್ರವೀಣ ಕುಮಾರ ಶೆಟ್ಟಿ ಎಂ.ಇ ಎಸ್, ಶಿವಸೇನೆ ಕನ್ನಡಿಗರನ್ನು ಕೆರಳಿಸಿದೆ. ನಮ್ಮ ಬಾವುಟ ಮತ್ತು ಶಾಲು ಹಾಕಿರುವನ್ನು ಹೊಡೆಯುದ್ದಾಗಿ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಭಾವನೆಯನ್ನು ಕೆರಳಿಸಿದೆ. ಈ ಕೂಡಲೆ ಬಾಂಬೆಯನ್ನು ಕೇಂದ್ರಾಡಳಿತ ಪ್ರದೇಶ ಮಾಡಬೇಕು.‌ ಇಂದು ನಾವು ಮಹಾರಾಷ್ಟ್ರದ ಶಿನ್ನೋಳ್ಳಿಗೆ ಹೋಗಿ ಕನ್ನಡ ಬಾವುಟ ನೆಡುತ್ತೇವೆ. ಕನ್ನಡ ವಿರೋಧಿ ಚಟುವಟಿಕೆಗಳನ್ನು ಮಾಡುವರ ವಿರುದ್ದ ನಮ್ಮ ಸರ್ಕಾರ ಯಾವುದೇ ಕ್ರಮ ಕೈ ಗೊಳ್ಳುತ್ತಿಲ್ಲ. ಮಹಾರಾಷ್ಟ್ರದಲ್ಲಿ ಕನ್ನಡಿಗರಿಗೆ ತೊಂದರೆ ಆಗಬಾರದು ಅವರಿಗೆ ಪೊಲೀಸ್ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.‌
ಬೆಳಗಾವಿ ವರದಿ ಕುತುಬುದ್ದಿನ್.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ