Breaking News

ಮರಾಠ ಸಮುದಾಯಕ್ಕೆ ‘ 2ಎ ‘ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಬೆಳಗಾವಿ ಉಪಚುನಾವಣೆ ಅಷ್ಟೇ ಅಲ್ಲ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ: ಅಂಜಲಿ ನಿಂಬಾಳ್ಕರ್

Spread the love

ಧಾರವಾಡ : ಮರಾಠ ಸಮುದಾಯಕ್ಕೆ ‘ 2ಎ ‘ ಮೀಸಲಾತಿ ನೀಡಬೇಕು. ಇಲ್ಲದಿದ್ರೆ ಬೆಳಗಾವಿ ಉಪಚುನಾವಣೆ ಅಷ್ಟೇ ಅಲ್ಲ ಮುಂದಿನ ಎಲ್ಲ ಚುನಾವಣೆಗಳನ್ನು ಬಹಿಷ್ಕರಿಸುತ್ತೇವೆ ಎಂದು ಖಾನಾಪುರ ಶಾಸಕಿ ಅಂಜಲಿ ನಿಂಬಾಳ್ಕರ್ ಎಚ್ಚರಿಸಿದ್ದಾರೆ.

ಧಾರವಾಡದ ಮರಾಠ ಕ್ರಾಂತಿ ಮೋರ್ಚಾ ಸಭೆಯಲ್ಲಿ ಮಾತನಾಡಿದ ಅವರು, ನಮಗೆ ಮರಾಠ ಪ್ರಾಧಿಕಾರ ಬೇಡ, ಅಷ್ಟೊಂದು ಮರಾಠರ ಮೇಲೆ ಬಿ.ಎಸ್.ಯಡಿಯೂರಪ್ಪ ನವರಿಗೆ  ಕಾಳಜಿ ಇದ್ದರೆ. ‘2ಎ’ ಗೆ ಸೇರಿಸಿ ಎಂದು ಆಗ್ರಹಿಸಿದ್ದಾರೆ.

7 ದಿನಗಳಲ್ಲಿ ಮರಾಠ ಸಮುದಾಯವನ್ನು ‘ 2ಎ’ ಗೆ ಸೇರಿಸಿದರೆ ಮಾತ್ರ ಮತದಾನ. ಇಲ್ಲದಿದ್ದರೆ ಮುಂದೆ ಬರುವ ಬೆಳಗಾವಿ ಲೋಕಸಭಾ ಸೇರಿ ವಿಧಾನಸಭೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ,  ಗ್ರಾಮ ಪಂಚಾಯಿತಿ ಚುನಾವಣೆಯನ್ನು ಬಹಿಷ್ಕರಿಸುತ್ತೇವೆ ಎಂದು ಎಚ್ಚರಿಸಿದ್ದಾರೆ.

ಸರ್ಕಾರ ಮರಾಠ ಪ್ರಾಧಿಕಾರ ರಚಿಸಿರುವ ಹಿನ್ನಲೆ ವಿರೋಧ ಅಲೆ ಹೆಚ್ಚಾಗಿದೆ. ಈ ಮಧ್ಯಯೇ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.


Spread the love

About Laxminews 24x7

Check Also

ಶಿಕ್ಷಿಸುವುದಕ್ಕಿಂತ ಸರಿಯಾದ ದಾರಿಗೆ ತರೋದೇ ನಮ್ಮ ಧರ್ಮ: ನಿಂದಿಸಿದ ಮಕ್ಕಳನ್ನು ಕ್ಷಮಿಸಿದ ಮೋದಿ

Spread the loveನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಘಟನೆ ಮತ್ತು ತಮ್ಮ ಹಾಗೂ ತಮ್ಮ ದಿವಂಗತ ತಾಯಿಯವರ ವಿರುದ್ಧ ವ್ಯಕ್ತವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ