ಟೈಗರ್ ಗ್ಯಾಂಗ್ ಬಗ್ಗೆ ಲಖನ ಜಾರಕಿಹೋಳಿ ಹೇಳಿದ್ದೇನು… ?
ಗೋಕಾಕ:ಸುಮಾರು ದಿನಗಳಿಂದ ಸುದ್ದಿ ಯಲ್ಲಿರುವ ಟೈಗರ್ ಗ್ಯಾಂಗ್ ಬಗ್ಗೆ ಇವತ್ತು ಲಕ್ಷ್ಮಿ ನ್ಯೂಸ್ ವಾಹಿನಿ ಜೊತೆ ಮಾತನಾಡಿದ ಚಿಕ್ಕ ಸಾಹುಕಾರರು ಇಬ್ಬರು ಸಹೋದರರ ಪರ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಯಲ್ಲಿ ನನ್ನ ಅಣ್ಣಾ ರಮೇಶ್ ಜಾರಕಿಹೊಳಿ ಹಾಗೂ ಸತೀಶ್ ಜಾರಕಿಹೊಳಿ ಅವರು ಹೇಳಿದ್ದು ಸರಿಯಿದೆ ಈ ಒಂದು ಟೈಗರ್ ಗ್ಯಾಂಗ್ ಮುಂಚೆ ಇದ್ದಿದ್ದೇ ಬೇರೆ, ಇದು ಬೇರೆ ಯಾವುದೋ ಬಿಲ್ಲಿ ಮಿಯವ್ ಮಿಯವ, ಗ್ಯಾಂಗ್ ಇದೆ.
ಜನರನ್ನ ಹೆದರಿಸಿ,ಬೆದರಿಸಿ ವಸೂಲಿ ಮಾಡುವ ಇಂಥ ಒಂದು ತಂಡ ಗೋಕಾಕ ನಲ್ಲಿ ಸುಮಾರು ದಿನದಿಂದ ಈ ವಿಷಯ ಕೇಳಿ ಬರುತ್ತಿತ್ತು.
ಇನ್ನು ಇವರು ಬಂಧನ ವಾಗಿರೋದು ಒಳ್ಳೆಯ ವಿಷಯ ಇವರನ್ನ ಪೊಲೀಸರು ತುಂಬಾ ದಿನದ ಹಿಂದೇನೆ ಬಂಧಿಸ ಬೇಕಾಗಿತ್ತು. ಆದರೂ ಇವಾಗ ಪೊಲೀಸರು ಮಾಡಿರುವ ಕಾರ್ಯಕ್ಕೆ ಭೇಷ್ ಎಂದಿದ್ದಾರೆ ಚಿಕ್ಕ ಸಾಹುಕಾರರು.
ಇನ್ನು ಇಬ್ಬರು ಸಹೋದರರ ಹೇಳಿಕೆ ಸರಿ ಇದೆ ಈ ಗ್ಯಾಂಗ್ ಬಗ್ಗೆ ಮಾತಾಡಿದ್ದು ಹಾಗೂ ಈ ಒಂದು ತಂಡ ಸುಮಾರು ಕಡೆ ಅನೇಕ ಕಾನೂನು ಬಾಹಿರ ಕೆಲಸ ಗಳನ್ನ ಮಾಡ್ತಾ ಬಂದಿದೆ ಇವರು ಪೊಲೀಸರ ವಶಕ್ಕೆ ಸಿಕ್ಕಿದ್ದು ಗೋಕಾಕ ಜನತೆಗೆ ಸ್ವಲ್ಪ ಸಮಾಧಾನಕರ ತಂದಿದೆ
ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಂತೆ ಆಗಲಿ ಎಂದು ಹೇಳಿ ದ್ದಾರೆ..