Breaking News

ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಯತ್ನಾಳ್-ನಿರಾಣಿ;

Spread the love

ಜಮಖಂಡಿಯಲ್ಲಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಯತ್ನಾಳ್-ನಿರಾಣಿ;
ಎಲ್ಲಾ ಬಾಲಿಗೂ ಸಿಕ್ಸರ್ ಹೊಡೆಯಬೇಡಿ… ಶಾಸಕರ ಬ್ಯಾಟಿಂಗ್’ಗೆ ಮಾಜಿ ಸಚಿವ ನಿರಾಣಿ ಮಾರ್ಮಿಕ ಸಲಹೆ.
ಯತ್ನಾಳ್-ನಿರಾಣಿ ಒಂದೇ ವೇದಿಕೆಯಲ್ಲಿ ಅಚ್ಚರಿಯ ಮುಖಾಮುಖಿ
ಶಾಸಕ ಯತ್ನಾಳ್’ರನ್ನು ಕ್ರಿಕೆಟಿಗನಿಗೆ ಹೋಲಿಸಿದ ನಿರಾಣಿ
ಯತ್ನಾಳ್ ಒಬ್ಬ ಉತ್ತಮ ಆಲ್’ರೌಂಡರ್
ಎಲ್ಲಾ ಬಾಲಿಗೂ ಸಿಕ್ಸರ್ ಹೊಡೆಯಬೇಡಿ ಎಂದು ಸಲಹೆ
ಬಾಗಲಕೋಟೆಯ ಜಮಖಂಡಿಯಲ್ಲಿ ರಾಜಕೀಯ ಬದ್ಧ ವೈರಿಗಳೆಂದೇ ಕರೆಯಲ್ಪಡುವ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಮುರುಗೇಶ್ ನಿರಾಣಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಯತ್ನಾಳ್ ಅವರನ್ನು ಕ್ರಿಕೆಟ್ ಆಲ್’ರೌಂಡರ್’ಗೆ ಹೋಲಿಸಿದ ನಿರಾಣಿ, ಯತ್ನಾಳ್ ಅವರ ರಾಜಕೀಯ ಶೈಲಿಗೆ ಮಾರ್ಮಿಕವಾಗಿ ಟಾಂಗ್ ನೀಡಿದ್ದಾರೆ.
ಜಮಖಂಡಿ ತಾಲೂಕಿನ ಯಲ್ಲಟ್ಟಿ ಗ್ರಾಮದಲ್ಲಿ ನಡೆದ ಕೊಣ್ಣೂರು ಯುವ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದ ಮುರುಗೇಶ್ ನಿರಾಣಿ, “ಯತ್ನಾಳ್ ಗೌಡ್ರು ಉತ್ತಮ ಬ್ಯಾಟ್ಸ್’ಮನ್, ಬೌಲರ್ ಹಾಗೂ ಫೀಲ್ಡರ್ ಆಗಿರುವ ಆಲ್’ರೌಂಡರ್ ಇದ್ದಂತೆ. ಆದರೆ ಮ್ಯಾನ್ ಆಫ್ ದಿ ಮ್ಯಾಚ್ ಆಗಬೇಕೆಂದರೆ ಬಂದ ಬಾಲಿಗೆಲ್ಲ ಸಿಕ್ಸರ್ ಹೊಡೆಯಬೇಡಿ, ಕೇವಲ ಒಳ್ಳೆಯ ಬಾಲ್ ಬಂದಾಗ ಮಾತ್ರ ಸಿಕ್ಸರ್ ಬಾರಿಸಿ” ಎಂದು ಸಲಹೆ ನೀಡಿದರು. ಈ ವೇಳೆ ಅಖಂಡ ವಿಜಯಪುರ ಜಿಲ್ಲೆಯ ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಮಂತ್ರವನ್ನೂ ಜಪಿಸಿದರು.

Spread the love

About Laxminews 24x7

Check Also

ರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ

Spread the loveರೈತನ ಮಗಳ ಸಾಧನೆ, ಪಿಯು ಸೈನ್ಸ್ ಶೇ. 97.66 ಅಂಕ: ಪುತ್ರಿ ಸಾಧನೆಗೆ ತಂದೆ-ತಾಯಿ ಹರ್ಷ ಬೆಳಗಾವಿ: …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ