Breaking News

8 ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ: ಒಟ್ಟು 34.90 ಕೋಟಿ ಮೌಲ್ಯದ ಆಸ್ತಿ ಪತ್ತೆ

Spread the love

ಬೆಂಗಳೂರು: ಆದಾಯ ಮೀರಿ ಆಸ್ತಿ ಸಂಪಾದನೆ ಆರೋಪದಡಿ ರಾಜ್ಯದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ 8 ಮಂದಿ ಸರ್ಕಾರಿ ಅಧಿಕಾರಿ ಮನೆ-ಕಚೇರಿ ಹಾಗೂ ಅವರ ಸಂಬಂಧಿಕರ ಮನೆಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಪಾರ ಪ್ರಮಾಣದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರಗಿ, ಧಾರವಾಡ, ಹಾಸನ, ಗದಗ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ 8 ಮಂದಿ ಸರ್ಕಾರಿ ಅಧಿಕಾರಿಗಳ ಮನೆ ಸೇರಿದಂತೆ 45 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಈ ವೇಳೆ ಜಮೀನು, ಚಿನ್ನಾಭರಣ, ನಗದು ಸೇರಿದಂತೆ ಒಟ್ಟು 34.90 ಕೋಟಿ ಲಕ್ಷ ಮೌಲ್ಯದ ಅಸಮತೋಲನ ಆಸ್ತಿ ಪತ್ತೆ ಹಚ್ಚಿದ್ದಾರೆ. ದಾಳಿಗೊಳಗಾದ ಎಂಟು ಮಂದಿ ವಿರುದ್ಧ ಆಯಾ ಜಿಲ್ಲಾ ಠಾಣೆಗಳಲ್ಲಿ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಅಧಿಕಾರಿಗಳು ತಿಳಿಸಿದ್ದಾರೆ.

ದಾಳಿಗೊಳಗಾದ ಅಧಿಕಾರಿಗಳ ವಿವರ:

ಪ್ರಕಾಶ್, ಕೆ.ಎಸ್.ಇ.ಇ. ಬಿಬಿಎಂಪಿ ಗೋವಿಂದರಾಜನಗರ, ಪಶ್ಚಿಮ ಬೆಂಗಳೂರು:
ಇವರಿಗೆ ಸಂಬಂಧಿಸಿದ 6 ಕಡೆಗಳಲ್ಲಿ ಶೋಧ ಕಾರ್ಯ, 3 ನಿವೇಶನಗಳು, 2 ವಾಸದ ಮನೆ, 1 ಎಕರೆ ಕೃಷಿ ಜಮೀನು, 42 ಸಾವಿರ ನಗದು ಪತ್ತೆ, 43 ಲಕ್ಷದ ಮೌಲ್ಯದ ಚಿನ್ನಾಭರಣ, 15.70 ಲಕ್ಷ ಬೆಲೆಯ ವಾಹನಗಳು, 88.20 ಲಕ್ಷ ಬೆಲೆಬಾಳುವ ವಸ್ತುಗಳು ಸೇರಿ ಒಟ್ಟು 5.70 ಕೋಟಿ ಆಸ್ತಿ ಪತ್ತೆ.

ಕೆ.ಜಿ.ಅಮರನಾಥ್, ಮುಖ್ಯಾಧಿಕಾರಿ ಪುರಸಭೆ, ಅನೇಕಲ್, ಬೆಂಗಳೂರು ಗ್ರಾಮಾಂತರ:
ಒಟ್ಟು ಮೂರು ಕಡೆಗಳಲ್ಲಿ ದಾಳಿ. ಆರೋಪಿತ ಅಧಿಕಾರಿಯ 2 ನಿವೇಶನಗಳು, 1 ವಾಸದ ಮನೆ, 14.75 ಲಕ್ಷ ನಗದು, 40 ಲಕ್ಷದ ಮೌಲ್ಯದ ಚಿನ್ನ, 38 ಲಕ್ಷ ಮೌಲ್ಯದ ವಾಹನಗಳು, 12 ಲಕ್ಷದ ಬೆಲೆಯ ಇತರ ವಸ್ತುಗಳು ಸೇರಿ ಒಟ್ಟು 3.85 ಕೋಟಿ ಆಸ್ತಿ ಪತ್ತೆ.

ಮಲ್ಲಿಕಾರ್ಜುನ ಅಲ್ಲಿಪುರು, ಇ.ಇ., ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಲಬುರಗಿ
ಒಟ್ಟು 4 ಕಡೆಗಳಲ್ಲಿ ದಾಳಿ. 1 ನಿವೇಶನ, 3 ವಾಸದ ಮನೆಗಳು, 4 ಎಕರೆ ಕೃಷಿ ಜಮೀನು, 2.80 ಲಕ್ಷ ರೂ.ನಗದು, ಬ್ಯಾಂಕ್ ಖಾತೆಯಲ್ಲಿ 64.75 ಲಕ್ಷ ಹಣ, 1 ಕೋಟಿ ಮೌಲ್ಯದ ಚಿನ್ನಾಭರಣ, 35 ಲಕ್ಷ ಮೌಲ್ಯದ ವಾಹನಗಳು, 40 ಲಕ್ಷ ಬೆಲೆಬಾಳುವ ಇತರೆ ಗೃಹೋಪಯೋಗಿ ವಸ್ತುಗಳು ಸೇರಿ ಒಟ್ಟು 6.32 ಕೋಟಿ ಆಸ್ತಿ ಪತ್ತೆ.

ರಾಮಚಂದ್ರ ಮಸರಕಲ್, ಪಿಡಿಒ, ಸಣ್ಣೂರು ಗ್ರಾಮ ಪಂಚಾಯಿತಿ, ಕಲಬುರಗಿ:
ನಾಲ್ಕು ಸ್ಥಳಗಳಲ್ಲಿ ದಾಳಿ. 3 ನಿವೇಶನಗಳು, 3 ವಾಸದ ಮನೆಗಳು, 35 ಎಕರೆ ಕೃಷಿ ಜಮೀನು, 1 ಲಕ್ಷ ನಗದು, 8.50 ಲಕ್ಷ ಮೌಲ್ಯದ ಚಿನ್ನ, 18 ಲಕ್ಷ ಮೌಲ್ಯದ ವಾಹನಗಳು, 20.95 ಲಕ್ಷ ಮೌಲ್ಯದ ಗೃಹಪಯೋಗಿ ವಸ್ತುಗಳು ಸೇರಿ ಒಟ್ಟು 2.18 ಕೋಟಿ ಆಸ್ತಿ ಪತ್ತೆ.

ಅಶೋಕ್ ಲಕ್ಷ್ಮಪ್ಪ ವಸನಾಡ್, ಮುಖ್ಯ ಅಭಿಯಂತರ, ಕರ್ನಾಟಕ ನೀರಾವರಿ ನಿಗಮ ನಿಯಮಿತ ಮಲಪ್ರಭಾ ಯೋಜನಾ ವಲಯ, ಧಾರವಾಡ:
ಇವರಿಗೆ ಸೇರಿದ 8 ಕಡೆಗಳಲ್ಲಿ ಶೋಧಕಾರ್ಯ. ಈ ವೇಳೆ 7 ನಿವೇಶನಗಳು, 3 ವಾಸದ ಮನೆಗಳು, 19.03 ಎಕರೆ ಕೃಷಿ ಜಮೀನು, 1.61 ಲಕ್ಷ ನಗದು, 1.74 ಲಕ್ಷ ಬ್ಯಾಂಕ್ ಬ್ಯಾಲೆನ್ಸ್, 96.67 ಲಕ್ಷದ ಚಿನ್ನ, 13.40 ಲಕ್ಷ ಮೌಲ್ಯದ ವಾಹನಗಳು ಸೇರಿದಂತೆ ಒಟ್ಟು 6.11 ಕೋಟಿ ಮೌಲ್ಯದ ಆಸ್ತಿ ಪತ್ತೆ.

ಲತಾಮಣಿ ಡಿ.ಬಿ, ಲೆಕ್ಕಾಧೀಕ್ಷಕರು, ನಗರಸಭೆ ಕಾರ್ಯಾಲಯ, ಚಿಕ್ಕಮಗಳೂರು:
ಒಟ್ಟು 6 ಕಡೆಗಳಲ್ಲಿ ಶೋಧ, ಇವರಿಗೆ ಸೇರಿದ 6 ನಿವೇಶನಗಳು, 2 ವಾಸದ ಮನೆಗಳು, 10 ಗುಂಟೆ ಕೃಷಿ ಜಮೀನು, 1.98 ಲಕ್ಷ ನಗದು, 75 ಲಕ್ಷ ಮೌಲ್ಯದ ಮೌಲ್ಯದ ನಿಶ್ಚಿತ ಠೇವಣಿ (ಎಫ್​ಡಿ), 22 ಲಕ್ಷ ಮೌಲ್ಯದ ಚಿನ್ನ, 10 ಲಕ್ಷ ಮೌಲ್ಯದ ವಾಹನಗಳು, 20 ಲಕ್ಷ ಬೆಲೆಯ ಇತರ ವಸ್ತುಗಳು ಸೇರಿ ಒಟ್ಟು 2.89 ಕೋಟಿ ಆಸ್ತಿ ಪತ್ತೆ.

ಡಿ.ಬಿ.ಪಾಟೀಲ್, ಪೊಲೀಸ್ ನಿರೀಕ್ಷಕ, ಗದಗ ಟೌನ್ ಪೊಲೀಸ್ ಠಾಣೆ:
ಆರೋಪಿತ ಪೊಲೀಸ್ ಅಧಿಕಾರಿಗೆ ಸೇರಿದ ಒಟ್ಟು 8 ಕಡೆಗಳಲ್ಲಿ ದಾಳಿ. 4 ನಿವೇಶನಗಳು, 1 ವಾಸದ ಮನೆ, 4.89 ಲಕ್ಷ ನಗದು, 27 ಲಕ್ಷದ ಮೌಲ್ಯದ ಚಿನ್ನಾಭರಣ, 10 ಲಕ್ಷದ ಮೌಲ್ಯದ ವಾಹನಗಳು, 7 ಲಕ್ಷ ಮೌಲ್ಯದ ಗೃಹೋಪಯೋಗಿ ವಸ್ತುಗಳು ಸೇರಿದಂತೆ ಒಟ್ಟು 1.48 ಕೋಟಿ ಆಸ್ತಿ ಪತ್ತೆ.

ಡಾ.ಪ್ರದೀಪ್, ಪ್ರಾಧ್ಯಾಪಕ, ಕೋ-ಆರ್ಡಿನೇಟರ್, ಎಡಿಆರ್, ಕೆಎಸ್ಎನ್​ಯುಎಹೆಚ್ಎಸ್, ಶಿವಮೊಗ್ಗ
ಆರೋಪಿತರಿಗೆ ಸೇರಿದ ಒಟ್ಟು 6 ಕಡೆಗಳಲ್ಲಿ ದಾಳಿ. ಈ ವೇಳೆ 5 ನಿವೇಶನಗಳು, 1 ವಾಸದ ಮನೆ, 16.7 ಎಕರೆ ಕೃಷಿ ಜಮೀನು, 10 ಸಾವಿರ ನಗದು, 34.75 ಲಕ್ಷದ ಚಿನ್ನ, 30 ಲಕ್ಷ ಮೌಲ್ಯದ ವಾಹನಗಳು, 25 ಸಾವಿರ ರೂ. ವಿದೇಶಿ ಕರೆನ್ಸಿಗಳು, 15.50 ಲಕ್ಷ ಮೌಲ್ಯದ ಮೇಕೆ ಹಾಗೂ ಹಸುಗಳು, 50 ಲಕ್ಷದ ಮೌಲ್ಯದ ಫಾರ್ಮ್ ಹೌಸ್, 29.75 ಲಕ್ಷ ರೂ. ಬ್ಯಾಂಕ್ ಬ್ಯಾಲೆನ್ಸ್, 28.75 ಲಕ್ಷ ಮೌಲ್ಯದ ಬೆಲೆಬಾಳುವ ವಸ್ತುಗಳು ಸೇರಿ 6.34 ಕೋಟಿ ಆಸ್ತಿ ಪತ್ತೆಯಾಗಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ. ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ – ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಸ್ಪಷ್ಟನೆ

Spread the loveಕೆಎಂಎಫ್ ಅಧ್ಯಕ್ಷ ಸ್ಥಾನದ ರೇಸ್ ಲ್ಲಿ ನಾನಿಲ್ಲ. ಕೆಲವು ಮಾಧ್ಯಮಗಳಲ್ಲಿ ಬರುತ್ತಿರುವುದು ಕೇವಲ ಊಹಾಪೋಹ – ಬೆಮುಲ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ