ಬೆಳಗಾವಿಯ ಪ್ರವೇಶ ದ್ವಾರದಂತಿರುವ ಗಾಂಧಿನಗರ ಅಸ್ವಚ್ಛತೆಯಿಂದಾಗಿ ಈಗ ‘ಗಂಧಗಿ’ ನಗರದಂತಾಗಿದೆ….
ಚರಂಡಿ ದುರಸ್ತಿ ಸೇರಿದಂತೆ ಹಲವು ಸಮಸ್ಯೆಗಳನ್ನು ಪರಿಹರಿಸದಿದ್ದರೆ ಪ್ರತಿಭಟನೆಯ ಎಚ್ಚರಿಕೆ ನೀಡಿರುವ ಹಳೆ ಗಾಂಧಿನಗರ, ದೀಪಕ ಗಲ್ಲಿ ಸುಭಾಷ ಗಲ್ಲಿ ನಿವಾಸಿಗಳು
ಸ್ಮಾರ್ಟ್ ಸಿಟಿ ಎಂದು ಹೇಳುತ್ತಿರುವ ಬೆಳಗಾವಿಯ ವಿವಿಧ ಬಡಾವಣೆಗಳು ಸಮಸ್ಯೆಯ ಆಗರಗಳಾಗಿವೆ ಹಳೆ ಗಾಂಧಿನಗರ, ದೀಪಕ್ ಗಲ್ಲಿ, ಸುಭಾಷ್ ಗಲ್ಲಿಯ ಚರಂಡಿ, ರಸ್ತೆಗಳು ದುರಸ್ತಿಯಾಗದೆ ಕಸದ ರಾಶಿಯಿಂದ ಬೇಸತ್ತ ನಾಗರಿಕರು ಪಾಲಿಕೆಯ ನಿರ್ಲಕ್ಷಕ್ಕೆ ಹಿಡಿ ಶಾಪ ಹಾಕಿದ್ದಾರೆ ಇಲ್ಲಿದೆ ನೋಡಿ ವಿವಿಧ ಬಡಾವಣೆ ನಿವಾಸಿಗಳ ಗೋಳಿನ ಕಥೆ
ಎರಡನೆಯ ರಾಜಧಾನಿ ಎಂದೇ ಬಿಂಬಿತವಾಗಿರುವ ಬೆಳಗಾವಿ ಸ್ಮಾರ್ಟ್ ಸಿಟಿಯಾಗಲು ಹೊರಟಿದೆ. ಆದರೆ ಕುಂದಾನಗರಿಯ ಒಡಲಲ್ಲಿರುವ ಹಲವು ಬಡಾವಣೆಗಳು ಅಭಿವೃದ್ದಿಯಿಂದ ದೂರವಾಗಿದ್ದು, ಸ್ವಚ್ಛತೆ ಇಲ್ಲದೆ ಹಾಳು ಕೊಂಪೆಗಳಂತೆ ಪರಿಣಮಿಸುತ್ತಿವೆ.
ಬೆಳಗಾವಿಯ ಪ್ರವೇಶ ದ್ವಾರ ದಂತಿರುವ ಹಳೆ ಗಾಂಧಿನಗರ, ದೀಪಕ್ ಗಲ್ಲಿ, ಸುಭಾಷ್ ಗಲ್ಲಿಯು ಸ್ವಚ್ಛತೆ ಮತ್ತು ಅಭಿವೃದ್ಧಿ ಕಂಡು ಎಷ್ಟೋ ವರ್ಷಗಳಾಗಿವೆ
ಇಲ್ಲಿಯ ಚರಂಡಿಗಳು, ಗಟಾರಗಳು ಸ್ವಚ್ಛತೆ ಇಲ್ಲದೆ ಕೊಳಚೆ ನೀರು ತುಂಬಿ ಹರಿದು ಮನೆಬಾಗಿಲಿಗೆ ಬಂದು ರಸ್ತೆಗೆ ಹರಿದು ಅಸಹನೀಯವಾದ ಕಬ್ಬು ವಾಸನೆ ತುಂಬಿಕೊಂಡಿದೆ. ಮಳೆಗಾಲವಿರುವುದರಿಂದ ಸಾಂಕ್ರಾಮಿಕ ರೋಗಗಳು ಬರುವ ಭಯ ಕಾಡುತ್ತಿದೆ. ಎಲ್ಲೆಂದರಲ್ಲಿ ಕಸ ಚೆಲ್ಲುತ್ತಿದ್ದು ವಿಲೇವಾರಿ ಆಗದ್ದರಿಂದ ತಿಪ್ಪೆಗಳಂತಾಗಿವೆ.
ಕಸ ವಿಲೇವಾರಿ ವಾಹನ ಸರಿ ಇಲ್ಲದ್ದರಿಂದ ತುಂಬಿಕೊಂಡ ಕಸವನ್ನು ರಸ್ತೆ ಉದ್ದಕ್ಕೂ ಚೆಲ್ಲುತ್ತಾ ಹೋಗುತ್ತಿದೆ. ಕುಡಿಯುವ ನೀರು ಕೂಡ ಸರಿಯಾಗಿ ಬರುತ್ತಿಲ್ಲ. ವಿದ್ಯುತ್ ತಂತಿಗಳು ಹರಿದು ಜೋತು ಬಿದ್ದು ಪ್ರಾಣ ತೆಗೆಯಲು ಹಾತೊರೆಯುತ್ತಿವೆ.
ರಸ್ತೆಗಳು ಡಾಂಬರು ಕಾಣದೆ ಎಷ್ಟೋ ವರ್ಷಗಳಾಗಿವೆ. ಹೀಗಿದ್ದರೂ ಪಾಲಿಕೆ ಅಧಿಕಾರಿಗಳಾಗಲಿ ಜನಪ್ರತಿನಿಧಿಗಳಾಗಲಿ ಈ ಸಮಸ್ಯೆಯನ್ನು ಬಗೆಹರಿಸುತ್ತಿಲ್ಲ ಎನ್ನುವುದು ಇಲ್ಲಿಯ ನಿವಾಸಿಗಳ ಗೋಳು ಈ ಕುರಿತು ಇನ್ ನ್ಯೂಸ್ ನೊಂದಿಗೆ ತಮ್ಮ ಗೋಳು ಹೇಳಿಕೊಂಡ ಸುಭಾಷ್ ಗಲ್ಲಿಯ ಅಜ್ಜಿ ಒಬ್ಬರು, ಚರಂಡಿಗಳನ್ನು ಸ್ವಚ್ಛಗೊಳಿಸದಿದ್ದರಿಂದ ನೀರು ಹೊರಬಂದು ಬಾಗಿಲ ಬಳಿಯೇ ನಿಂತಿರುತ್ತದೆ ದುರ್ವಾಸನೆ ಬೀರುತ್ತಿದ್ದು ರೋಗ ರುಜಿನಗಳು ಬರುವ ಪರಿಸ್ಥಿತಿ ಇದೆ. ರಸ್ತೆಗಳು ತೀವ್ರ ಹದಗೆಟ್ಟಿದ್ದು ಹೊರಗಡೆ ತಿರುಗಾಡದ ಪರಿಸ್ಥಿತಿ ನಿರ್ಮಾಣವಾಗಿದೆ. ವಾಹನ ಸವಾರರು ಬೀಳುತ್ತಿದ್ದಾರೆ
ಕಳೆದ ಎರಡು ವರ್ಷಗಳಿಂದ ಈ ಸಮಸ್ಯೆ ಇದ್ದರೂ ಯಾರೂ ಪರಿಹರಿಸುತ್ತಿಲ್ಲವೆಂದು ತಮ್ಮ ಅಸಮಾಧಾನ ಹೊರಹಾಕಿದರು ಹಳೆ ಗಾಂಧಿನಗರ ದೀಪಕ ಗಲ್ಲಿಯ ಕಥೆಯೂ ಸಹ ಇದಕ್ಕಿಂತ ಭಿನ್ನವಾಗಿಲ್ಲ ಇಲ್ಲಿಯ ನಿವಾಸಿ ಬಾಬು ಸಂಗೊಳ್ಳಿ ಇನ್ ನ್ಯೂಸ್ ನೊಂದಿಗೆ ಮಾತನಾಡಿ, ಫಿರೋಜ್ ಶೇಠ್ ಅವರು ಶಾಸಕರಿದ್ದಾಗ 2016ರಲ್ಲಿ ಡಾಂಬರ್ ಮಾಡಲಾಗಿತ್ತು. ಹತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ರಸ್ತೆ ಹದಗೆಟ್ಟು ಹೋಗಿದೆ. ಚರಂಡಿ ಸ್ವಚ್ಛಗೊಳಿಸದ್ದರಿಂದ ನೀರು ರಸ್ತೆಗೆ ಬರುತ್ತಿದೆ.
ಎಲ್ಲರೂ ತ್ಯಾಜ್ಯ ವನ್ನು ಒಗೆಯುತ್ತಿದ್ದು ಕಸದ ತಿಪ್ಪೆಯಾಗಿದೆ. ಮಹಾನಗರ ಪಾಲಿಕೆಯಿಂದ ಇಂಜಿನಿಯರಾಗಲಿ ಸದಸ್ಯರಾಗಲಿ ಯಾರೂ ಬಂದಿಲ್ಲ ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ ತೀವ್ರ ತೊಂದರೆಯನ್ನು ಅನುಭವಿಸುತ್ತಿದ್ದೇವೆ. ಆದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸದಿದ್ದರೆ ಹಳೆ ಗಾಂಧಿನಗರ ದೀಪಕಗಲ್ಲಿ ಸುಭಾಷ್ ಗಲ್ಲಿ ನಿವಾಸಿಗಳು ಹೆದ್ದಾರಿಯನ್ನು ಬಂದ್ ಮಾಡುತ್ತೇವೆ ಮತ್ತು ಕಸವನ್ನು ತೆಗೆದುಕೊಂಡು ಮಹಾನಗರ ಪಾಲಿಕೆ ಮುಂದೆ ಎರಚಿ ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದರು
ಗಾಂಧಿನಗರ ದೀಪಕ್ ಗಲ್ಲಿಯ ಹಿರಿಯ ನಾಗರಿಕರೊಬ್ಬರು ಮಾತನಾಡಿ, ಡ್ರೈನೇಜ್ ಎಲ್ಲವೂ ತುಂಬಿಹೋಗಿವೆ ನೀರು ಹೊರಗೆ ಬಂದು ತೀವ್ರ ತೊಂದರೆಯಾಗುತ್ತಿದೆ. ಸಮಯಕ್ಕೆ ಸರಿಯಾಗಿ ನೀರು ಕೂಡ ಬರುತ್ತಿಲ್ಲ ಎಂದರು
ಚರಂಡಿಯಲ್ಲಿ ಕಸ ತುಂಬಿ ಹೋಗಿದೆ ಯಾರೂ ತೆಗಿಯೋರಿಲ್ಲ ಕಸ ವಿಲೇವಾರಿ ಮಾಡುವ ವಾಹನ ಈ ಕಡೆಗೆ ಬರುತ್ತಿಲ್ಲ ವಿದ್ಯುತ್ ತಂತಿಗಳು ಹರಿದು ಜೋತು ಬಿದ್ದಿವೆ ಅವುಗಳನ್ನು ಸರಿ ಮಾಡುತ್ತಿಲ್ಲ ಪ್ರಾಣಾಪಾಯವಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ ಅವರು ಶೀಘ್ರವಾಗಿ ಈ ಸಮಸ್ಯೆಗಳನ್ನು ಬಗೆಹರಿಸಿ ಸ್ವಚ್ಛ ಮಾಡಿಕೊಡಬೇಕೆಂದು ಸ್ಥಳೀಯ ನಿವಾಸಿ ಕೇಳಿಕೊಂಡರು