Breaking News

ರಾಮತೀರ್ಥ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ…..

Spread the love

ಬೆಳಗಾವಿ : ರಾಮತೀರ್ಥ ನಗರದಲ್ಲಿ ವಿಶ್ವ ಪರಿಸರ ದಿನಾಚರಣೆ…..
ಪರಿಸರವನ್ನು ನಿತ್ಯವೂ ಪ್ರೀತಿಸಿ : ನಿವೃತ್ತ ಜಿಲ್ಲಾಧಿಕಾರಿ ಎಮ್. ಜಿ. ಹಿರೇಮಠ
ಪರಿಸರ ನಮ್ಮ ಬದುಕಿಗೆ ಕೊಡುವ ಸಂಪತ್ತು ಅತ್ಯಮೂಲ್ಯವಾಗಿದ್ದು, ನಿತ್ಯವೂ ಪರಿಸರವನ್ನು ಪ್ರೀತಿಸುವ ಗುಣ ನಮ್ಮದಾಗಬೇಕು. ಪರಿಸರವೇ ದೇವರು ಎಂದು ಬೆಳಗಾವಿ ನಿವೃತ್ತ ಜಿಲ್ಲಾಧಿಕಾರಿ ಎಮ್. ಜಿ. ಹಿರೇಮಠ ಹೇಳಿದರು.
ಅವರು ಶನಿವಾರ ಬೆಳಗಾವಿಯ ರಾಮತೀರ್ಥನಗರದ ಶ್ರೀ ಕಾರ್ಯಸಿದ್ದಿ ಆಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ವನ್ಯಜೀವಿ ಪರಿಸರ ಅಭಿವ್ರದ್ಧಿ ವೇದಿಕೆ ಮತ್ತು ಸ್ನೇಹ ಸಮಾಜ ಸೇವಾ ಸಂಘಗಳ ಸಂಯುಕ್ತಾಶ್ರಯದಲ್ಲಿ ಜರುಗಿದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಗಿಡ ನೆಟ್ಟು ಪರಿಸರ ಪ್ರೀಯರನ್ನುದ್ದೇಶಿಸಿ ಮಾತನಾಡಿದರು. ಉಸಿರಿಗೊಂದಾದರೂ ಗಿಡ ನೆಡಬೇಕು.
ಊರಿಗೊಂದಾದರೂ ವನವಿರಬೇಕು. ಪ್ರತಿಯೊಬ್ಬರಲ್ಲೂ ನೆಟ್ಟ ಗಿಡದ ಬೆಳವಣಿಗೆ ಬಗ್ಗೆ ಉತ್ಸುಕತೆ ಇರಬೇಕು. ಪರಿಸರದ ಮುಖ್ಯ ಭಾಗಗಳೆನಿಸಿದ ಭೂಮಿ, ನೀರು, ಗಾಳಿ, ಬೆಟ್ಟ, ಗುಡ್ಡ ಸೇರಿದಂತೆ ವನ್ಯಜೀವಿ ಗಳ ಸಂರಕ್ಷಣೆ ನಮ್ಮ ಹೊಣೆಯಾಗಿದ್ದು, ಈ ಮೌಲ್ಯಯುತ ಸಂಪತ್ತು ಮುಂದಿನ ನಮ್ಮ ಪೀಳಿಗೆಯ ಅತೀ ದೊಡ್ಡ ಆಸ್ತಿ ಎಂಬುದನ್ನು ನಾವು ಅರಿಯಬೇಕು ಎಂದರು.
ಪರಿಸರ ವೇದಿಕೆ ಪ್ರಧಾನ ಕಾರ್ಯದರ್ಶಿ ಡಾ. ಡಿ. ಎನ್. ಮಿಸಾಳೆ ಮಾತನಾಡಿ, ಪರಿಸರದ ಬಗ್ಗೆ ಪ್ರತಿಯೊಬ್ಬರಲ್ಲೂ ಅರಿವು ಇರಬೇಕು. ಪರಿಸರದ ಕುರಿತು ಚಿಂತನ, ಮಂಥನಗಳು ನಡೆಯಬೇಕಲ್ಲದೆ, ಮಕ್ಕಳಿಗೆ ಪರಿಸರದ ಅರಿವು ಮೂಡಿಸಬೇಕು ಎಂದರು.
ವೇದಿಕೆಯ ಖಜಾಂಚಿ ಜಗದೀಶ ಮಠದ, ಅಧ್ಯಕ್ಷ ಸುರೇಶ ಉರಬಿನಹಟ್ಟಿ,
ಪ್ರೊ. ಎ. ಕೆ.ಪಾಟೀಲ ದೇವಸ್ಥಾನ ಕಮಿಟಿ ಉಪಾಧ್ಯಕ್ಷ ಎಸ್ ಜಿ ಕಲ್ಯಾಣಿ, ಖಜಾಂಚಿ ಮನೋಹರ ಕಾಜಗಾರ, ಶಿವಾನಂದ ಮಠಪತಿ, ಸದಸ್ಯರಾದ ಡಿ ಎಮ್ ಟೊಣ್ಣೆ, ಎಸ್ ಎಲ್ ಸನದಿ, ಕ್ರಷ್ಣಾ ಪಾಟೀಲ, ಎನ್ ಬಿ ಹಣ್ಣಿಕೇರಿ, ಬಸವರಾಜ ಹಿರೇಮಠ, ಜಿ ಎಸ್ ಪಾಟೀಲ, ಎಸ್ ಎಂ ಮೇಲಿನಮನಿ, ದಿಲೀಪ ಟಕ್ಕಳೆ, ಮಲ್ಹಾರ ದಿಕ್ಷಿತ್, ಪ್ರಶಾಂತ ಸಂಗೊಳ್ಳಿ, ಆನಂದ ಹಣ್ಣಿಕೇರಿ
ಮತ್ತು ತನುಜಾ ಹಿರೇಮಠ, ಸುಧಾ ಮಠದ, ಶ್ರೀ ದುರ್ಗಾ ಮಹಿಳಾ ಮಂಡಳ ದ ನಿರ್ಮಲಾ ಉರಬಿನಹಟ್ಟಿ, ಕಾವ್ಯಾ ಚಿಟಗಿ ಮಹಾದೇವಿ ಕಮತ್ ಲತಾ ಕಾಜಗಾರ ಉಮಾ ಖಾನವಾಡೆ, ಸುಮಂಗಲಾ ಪುನ್ನೂರಿ, ಸುಮಂಗಲಾ ತೋಂಟಾಪೂರ , ಸುಜಾತಾ ಜುಟ್ಟನ್ನವರ, ಜಯಶ್ರೀ ,ಶಶಿರೇಖಾ ನಾಯರ್, ಸೇರಿದಂತೆ ಸದ್ಭಕ್ತರು, ಕಮಿಟಿ ಸದಸ್ಯರು, ಪರಿಸರ ಪ್ರೀಯರು ಉಪಸ್ತಿತರಿದ್ದರು.
ದೇವಸ್ಥಾನ ಅರ್ಚಕ ಪ್ರಕಾಶ ದೀಕ್ಷಿತ್
ಪೂಜೆ ಸಲ್ಲಿಸಿದರು.

Spread the love

About Laxminews 24x7

Check Also

ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.12ರಿಂದ ಭಾರಿ ಮಳೆ,

Spread the loveಬೆಂಗಳೂರು, ಜೂನ್ 08: ಕರ್ನಾಟಕದ ಈ ಜಿಲ್ಲೆಗಳಲ್ಲಿ ಜೂ.12ರಿಂದ ಭಾರಿ ಮಳೆ(Rain)ಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ