ಬೆಂಗಳೂರು : ಯಡಿಯೂರಪ್ಪ ಕುಟುಂಬ ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತವಾಗುವ ತನಕ ನಾನು ಬಿಜೆಪಿಗೆ ವಾಪಸ್ ಬರುವುದಿಲ್ಲ ಎಂದು ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ವಿಜಯೇಂದ್ರರನ್ನ ಇಟ್ಟುಕೊಂಡು ಯತ್ನಾಳ್ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದರು.
ಮಗನ ರಕ್ಷಣೆಗೋಸ್ಕರ ಪ್ರತಿಭಟನೆ : ಬೆಲೆ ಏರಿಕೆ ವಿರುದ್ಧ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಯತ್ನಾಳ್, ಯಡಿಯೂರಪ್ಪ ತನ್ನ ಮಗನ ರಕ್ಷಣೆಗೋಸ್ಕರ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಅಷ್ಟೇ. ತಾವು ಸಾಯುವುದಕ್ಕೂ ಮುನ್ನ ವಿಜಯೇಂದ್ರರನ್ನು ಮುಖ್ಯಮಂತ್ರಿಯಾಗಿ ನೋಡಬೇಕು. ಇನ್ನಷ್ಟು ಲೂಟಿ ಮಾಡಬೇಕು ಅನ್ನುವ ಆಸೆ ಯಡಿಯೂರಪ್ಪನವರದ್ದು. ಈಗಾಗಲೇ ಮಾರಿಷಸ್, ದುಬೈನಲ್ಲಿ ಇವರ ಆಸ್ತಿ ಇದೆ.
ಇನ್ನೂ ಜಗತ್ತಿನ ಎಲ್ಲಾ ಕಡೆ ಆಸ್ತಿ ಮಾಡಬೇಕು ಅನ್ನೋದು ಅವರ ಆಸೆ. ಇದಕ್ಕಾಗಿ ಇಷ್ಟು ವಯಸ್ಸಾದರು ಮನೆಯಲ್ಲಿ ಕೂರದೇ ಹೊರಗಡೆ ಬಂದು ಹೋರಾಟಕ್ಕೆ ಇಳಿದಿದ್ದಾರೆ. ಅಷ್ಟೇ ಹೊರತು ಬಡವರ ಪರವಾಗಲಿ, ರೈತರ ಪರವಾಗಲಿ ಅಲ್ಲ ಎಂದು ಬಿಎಸ್ವೈ ವಿರುದ್ಧ ವಾಗ್ದಾಳಿ ನಡೆಸಿದರು.
Laxmi News 24×7