ಬ್ರಿಟಿಷರಿಗೆ ಮಾಫಿ ಪತ್ರ ಬರೆದಿದ್ದ ಸಾವರ್ಕರ್ ಅವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಸಂಸತ್ ಪ್ರವೇಶಿಸದಂತೆ ತಡೆಯುವ ಸಂಚು ರೂಪಿಸಿದ್ದರು ಎನ್ನುವುದು ಸ್ವತಃ ಬಾಬಾ ಸಾಹೇಬರ ಕೈಬರಹದಲ್ಲೇ ದಾಖಲಾಗಿದೆ.
ಸಾವಿರಾರು ವರ್ಷಗಳಿಂದ ಶೋಷಿತರ ತಲೆಯ ಮೇಲೆ ಕಾಲಿಟ್ಟುಕೊಂಡು ಬಂದಿದ್ದ ಮನುವಾದಿಗಳಿಗೆ ಅಂಬೇಡ್ಕರ್ ರವರು ಪರಮ ಶತ್ರುವಾಗಿ ಕಂಡಿದ್ದರಲ್ಲಿ ಯಾವುದೇ ವಿಶೇಷತೆ ಇಲ್ಲ.
ಬಾಬಾ ಸಾಹೇಬರನ್ನು ಸೋಲಿಸಿದ್ದು ಕಾಂಗ್ರೆಸ್ ಎನ್ನುವ ಬಿಜೆಪಿಯ ಆಧಾರವಿಲ್ಲದ ಸುಳ್ಳು ನರೇಟಿವ್ ನ್ನು ಇಂದು ಸದನದಲ್ಲಿ ಚಾರಿತ್ರಿಕ ಸಾಕ್ಷಿಯನ್ನು ಮುಂದಿಟ್ಟು ಬಯಲು ಮಾಡಿದ್ದೇನೆ.
ರಾಜೀನಾಮೆ ಕೊಡುವ ಸವಾಲನ್ನು ಸ್ವೀಕರಿಸದ ಬಿಜೆಪಿಗರು ಸಾವರ್ಕರ್ ರವರ ‘sorry ಥಿಯರಿ’ಯನ್ನಾದರೂ ಪಾಲಿಸಲಿ, ಸದನಕ್ಕೆ, ಕಾಂಗ್ರೆಸ್ ಪಕ್ಷಕ್ಕೆ ಹಾಗೂ ದೇಶದ ಜನತೆಗೆ ಕ್ಷಮೆ ಕೇಳಲಿ.
ಸಾವರ್ಕರ್ ಪರವಾದ ವಕಾಲತ್ತು ವಹಿಸುವ @BJP4Karnataka ಅಂಬೇಡ್ಕರ್ ರವರ ವಿರುದ್ಧದ ಸಾವರ್ಕರ್ ಸಂಚಿನ ಹೊಣೆಯನ್ನೂ ಹೊತ್ತುಕೊಳ್ಳಲಿ
Laxmi News 24×7