ಹುಕ್ಕೇರಿ : ಸತೀಶ ಜಾರಕಿಹೋಳಿ ಹೇಳಿಕೆಗೆ ಸ್ಪಷ್ಟನೆ ನಿಡಿದ್ದಾರೆ – ಸಂಸದೆ ಪ್ರೀಯಾಂಕ.
ಸತಿಶ ಜಾರಕಿಹೋಳಿ ರಾಜ್ಯ ಅದ್ಯಕ್ಷ ಸ್ಥಾನದ ಕುರಿತು ನೀಡಿದ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ ಅದರ ಬಗ್ಗೆ ಹಿರಿಯ ನಾಯಕರು ತಿರ್ಮಾನ ಮಾಡುತ್ತಾರೆ ಆ ಕುರಿತು ನಾನು ಹೇಳಿಕೆ ನೀಡುವಷ್ಟು ದೊಡ್ಡವಳಲ್ಲಾ ಎಂದು ಚಿಕ್ಕೋಡಿ ಸಂಸದೆ ಪ್ರೀಯಾಂಕಾ ಜಾರಕಿಹೋಳಿ ಹೇಳಿದರು.
ಅವರು ಹುಕ್ಕೇರಿ ತಾಲೂಕಿನ ಯರನಾಳ ಕಾಳಿಕಾ ಮಠಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ಬ್ರಮ್ಮಾನಂದ ಅಜ್ಜನವರಿಂದ ಆಶಿರ್ವಾದ ಪಡೆದು ಮಾಧ್ಯಮಗಳೊಂದಿಗೆ ಮಾತನಾಡುತ್ತಾ ನಾನು ಸಂಸದೆಯಾಗಿ ಚುನಾಯಿತರಾದ ಬಳಿಕ ಪ್ರಥಮ ಬಾರಿ ಯರನಾಳ ಕಾಳಿಕಾ ಮಠಕ್ಕೆ ಭೇಟಿ ನೀಡಿ ಗುರುಗಳಿಂದ ಆಶಿರ್ವಾದ ಪಡೆದಿದ್ದೆನೆ ಎಂದರು,
ಸತೀಶ ಜಾರಕಿಹೋಳಿ ಯವರ ಹೇಳಿಕೆ ಕುರಿತು ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಸಂಸದೆ ನೋಡಿ ಈಗಾಗಲೇ ನಮ್ಮ ತಂದೆಯವರ ಹೇಳಿಕೆಗೆ ಅವರೆ ಸ್ಷಷ್ಟನೆ ನೀಡಿದ್ದಾರೆ ದೊಡ್ಡವರ ಮತ್ತು ಪಕ್ಷದ ಸಮಸ್ಯೆಗಳ ಬಗ್ಗೆ ಮಾತನಾಡುವಷ್ಟು ನಾನು ದೊಡ್ಡವಳಲ್ಲಾ ಈ ಕುರಿತು ಪಕ್ಷದ ಹಿರಿಯರು ತಿರ್ಮಾಣ ತಗೆದುಕೋಳ್ಳುತ್ತಾರೆ ಎಂದರು
ನಂತರ ಮಠದ ವತಿಯಿಂದ ಸಂಸದೆಯನ್ನು ಸತ್ಕರಿಸಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಯರನಾಳ ಕಾಳಿಕಾ ಮಠದ ಭಕ್ತರಾದ ಮುಕುಂದ ಮಠದ, ಶಂಕ್ರಯ್ಯಾ ಮಠದ, ಗೋಪಾಲ ಮಠದ ಹರೇಕೃಷ್ಣ ಮಠದ, ಗೀತಾ ಮಠದ, ಹೇಮಾ ಮಠದ, ಕಾಂಗ್ರೆಸ್ ಪಕ್ಷದ ಮುಖಂಡರಾದ ರಮೇಶ ಪೂಜಾರ, ಪ್ರವೀಣ, ಬಸವರಾಜ ಕೋಳಿ ಮೊದಲಾದವರು ಉಪಸ್ಥಿತರಿದ್ದರು
Laxmi News 24×7