Breaking News

ಹಣ ಸಹಾಯ ಮಾಡಿಲ್ಲವೆಂದು ಐಎಂಎ ಅಧ್ಯಕ್ಷರ ಮೇಲೆ ಹಲ್ಲೆ

Spread the love

ನೆಲಮಂಗಲ, ಜೂನ್​​ 30: ಬೆಂಗಳೂರು ಗ್ರಾಮಾಂತರ (Bengaluru Rural) ಜಿಲ್ಲೆಯ ನೆಲಮಂಗಲದ (Nelamangala) ಖಾಸಗಿ ಆಸ್ಪತ್ರೆಯಲ್ಲಿ ಐಎಮ್​ಎ (IMA) ಅಧ್ಯಕ್ಷರಿಗೆ ಕಪಾಳಮೋಕ್ಷ ಮಾಡಲಾಗಿದೆ.

ಡಾ.ಜಯಪ್ರಸಾದ್ ಹಲ್ಲೆಗೆ ಒಳಗಾದ ಐಎಂಎ ಅಧ್ಯಕ್ಷ. ಡಾ.ಅಬ್ದುಲ್ ಹಲ್ಲೆ ಮಾಡಿದ ಆರೋಪಿ. ಆರೋಪಿ ಡಾ.ಅಬ್ದುಲ್ ರೆಹಮಾನ್ ಶರೀಫ್ ಖಾಸಗಿ ಅಸ್ಪತ್ರೆಯಲ್ಲಿ ಮೈಕ್ರೋ ಬಯಾಲಜಿಸ್ಟ್ ಆಗಿ ಕೆಲಸ ಮಾಡುತ್ತಿದ್ದನು.

ನೆಲಮಂಗಲ: ಹಣ ಸಹಾಯ ಮಾಡಿಲ್ಲವೆಂದು ಐಎಂಎ ಅಧ್ಯಕ್ಷರ ಮೇಲೆ ಹಲ್ಲೆ

ಮಗನ ಆರೋಗ್ಯ ಹದಗೆಟ್ಟ ಹಿನ್ನೆಲೆಯಲ್ಲಿ ಡಾ. ಅಬ್ದುಲ್ ವೈದ್ಯಕೀಯ ಸಂಘದಿಂದ 25 ಲಕ್ಷ ರೂ. ಸಹಾಯ ಮಾಡಿ ಎಂದು ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಅವರಿಗೆ ಮನವಿ ಮಾಡಿದ್ದನು.

ಆದರೆ, ಐಎಂಎ ಅಧ್ಯಕ್ಷ ಡಾ.ಜಯಪ್ರಸಾದ್ ಹಣ ಸಹಾಯ ಮಾಡಿರಲಿಲ್ಲ. ಇದರಿಂದ ಕೋಪಕೊಂಡ ಡಾ.ಅಬ್ದುಲ್​​ ಡಾ.ಜಯಪ್ರಸಾದ್ ಮೇಲೆ ಹಲ್ಲೆ ಮಾಡಿದ್ದಾನೆ. ಹಲ್ಲೆಯಿಂದಾಗಿ ಅಧ್ಯಕ್ಷ ಡಾ.ಜಯಪ್ರಸಾದ್ ಎಡಕಿವಿ ಮತ್ತು ಎಡ ದವಡೆಗೆ ಪೆಟ್ಟಾಗಿದೆ. ಎಡ ಕಿವಿ ತಮಟೆ ಹೊಡೆದು ಕಿವಿ ಕೇಳುತ್ತಿಲ್ಲ.


Spread the love

About Laxminews 24x7

Check Also

ಬಿಜೆಪಿ ಮುಖಂಡನ ಪುತ್ರನ ವಿರುದ್ಧ ಅತ್ಯಾಚಾರ ಕೇಸ್: ಮಗುವಿನ ಜನ್ಮ ನೀಡಿದ ಸಂತ್ರಸ್ತೆ

Spread the loveಮಂಗಳೂರು, ): ಪುತ್ತೂರು ಬಿಜೆಪಿ ಮುಖಂಡನ ಪುತ್ರನ (Puttur BJP leader Son )ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ