Breaking News

ಫಲಿತಾಂಶ ಬಳಿಕ ಸರ್ಕಾರ ರಚಿಸಲು ‘INDIA’ ರಣತಂತ್ರ : ನಿತೀಶ್ ಕುಮಾರ್ ಗೆ ಉಪಪ್ರಧಾನಿ ಪಟ್ಟದ ಆಫರ್!

Spread the love

ವದೆಹಲಿ : ಲೋಕಸಭೆಯ ಫಲಿತಾಂಶ ಬಹುತೇಕ ಇದೀಗ ಹೊರಬಿದ್ದಿದ್ದು, ಎನ್ ಡಿ ಎ ಸುಮಾರು 300ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದಿದ್ದು ಅಲ್ಲದೆ ಇಂಡಿಯಾ ಮೈತ್ರಿಕೂಟ ಕೂಡ 230 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ಇದೀಗ ಇಂಡಿಯಾ ಹೊಸ ರಣತಂತ್ರ ಒಂದು ಹೆಣೆದಿದ್ದು ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಹಾಗೂ ನಿತೀಶ್ ಕುಮಾರ್ ಅವರ ಜೊತೆ ಹೇಗೆ ಮಾತುಕತೆ ನಡೆಸಿದ್ದು ಭರ್ಜರಿ ಆಫರ್ ಒಂದನ್ನು ನೀಡಿದೆ ಎಂದು ಹೇಳಲಾಗುತ್ತಿದೆ.

BREAKING : ಫಲಿತಾಂಶ ಬಳಿಕ ಸರ್ಕಾರ ರಚಿಸಲು 'INDIA' ರಣತಂತ್ರ : ನಿತೀಶ್ ಕುಮಾರ್ ಗೆ ಉಪಪ್ರಧಾನಿ ಪಟ್ಟದ ಆಫರ್!

ಹೌದು ಕಿಂಗ್ ಮೇಕರ್ ಎಂದೇ ಹೇಳಲಾಗುತ್ತಿರುವ ಚಂದ್ರಬಾಬು ನಾಯ್ಡು ಹಾಗೂ ನೀತಿಶ್ ಕುಮಾರ್ ಅವರಿಗೆ ಇಂಡಿಯಾ ಮೈತ್ರಿಕೂಟ ಭರ್ಜರಿ ಆಫರ್ ನೀಡಿದೆ ನಿತೀಶ್ ಕುಮಾರ್ ಗೆ ಉಪ ಪ್ರಧಾನಿ ಪಟ್ಟದ ಆಫರ್ ನೀಡಿದ ಇಂಡಿಯಾ ಮೈತ್ರಿಕೂಟ, ಅಲ್ಲದೆ ಆಂಧ್ರಪ್ರದೇಶಕ್ಕೆ ಕೂಡ ವಿಶೇಷ ಸ್ಥಾನಮಾನದ ಆಫರ್ ನೀಡಲಾಗಿದೆ ಎಂದು ತಿಳಿದುಬಂದಿದೆ.

ಈ ಕುರಿತಂತೆ NCP ನಾಯಕ ಶರದ್ ಪವಾರ್ ಅವರು ಮಾತನಾಡಿ, ಇಂಡಿಯಾ ಮೈತ್ರಿಕೂಟ ನಾಯಕರ ಜೊತೆಗೆ ಚರ್ಚಿಸುದ್ದೇನೆ. ಹಿಂದಿ ಪ್ರಾಬಲ್ಯ ರಾಜ್ಯಗಳಲ್ಲಿ ಇಂಡಿಯಾ ಉತ್ತಮ ಕೆಲಸ ಮಾಡಿದೆ. ನಾಳೆ ಇಂಡಿಯಾ ಮೈತ್ರೀಕೂಟದ ಸಭೆ ಕರೆಯಲಾಗಿದೆ ಎಂದು NCP ನಾಯಕ ಶರತ್ ಪವಾರ್ ಮಾಹಿತಿ ನೀಡಿದ್ದಾರೆ.


Spread the love

About Laxminews 24x7

Check Also

ಮಕ್ಕಳ ಶಿಕ್ಷಣಕ್ಕೆ ಯಾವುದೇ ಮೂಲಸೌಲಭ್ಯ ಕೊರತೆಯಾಗದಂತೆ ಕ್ರಮ : ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ 3 ಶಾಲೆಗಳ 6 ಕೊಠಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

Spread the love ಬೆಳಗಾವಿ : ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಶಿಕ್ಷಣ ಮತ್ತು ಆರೋಗ್ಯ ಸೇವೆ ಅಭಿವೃದ್ಧಿಗೆ ಹೆಚ್ಚಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ