ಕಲಬುರಗಿ, ಜೂನ್ 22: ಬಡವರಿಗೆ ಮನೆ ಬೇಕು ಅಂದರೆ ವಸತಿ ಇಲಾಖೆ ಅಧಿಕಾರಿಗಳಿಗೆ ಹಣ ಕೊಡಲೇಬೇಕು ಎಂದು ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ (BR Patil) ಬಾಂಬ್ ಸಿಡಿಸಿದ್ದರು. ಇದರ ಬೆನ್ನಲ್ಲೇ ಚೆಕ್ ಮಾಡಿದಾಗ ಅಫಜಲಪುರ ಕ್ಷೇತ್ರದಲ್ಲಿ ಹಣ ಕೊಡದಿದಕ್ಕೆ ಮನೆಗಳ ಸ್ಥಳಾಂತರ ಮಾಡಿರುವುದು ಬೆಳಕಿಗೆ ಬಂದಿತ್ತು.
ಇದೀಗ ಇದೇ ರೀತಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರ (Aland Assembly constituency) ವ್ಯಾಪ್ತಿಯ ಗ್ರಾಮದಲ್ಲಿ ಕೂಡ ರಿಯಾಲಿಟಿ ಚೆಕ್ ಮಾಡಿದ್ದು, ಮತ್ತೊಂದು ಸಾಕ್ಷಿ ಲಭ್ಯವಾಗಿದೆಹಣ ಕೊಟ್ಟರಷ್ಟೇ ಮನೆ ಅಂತಾ ಆರೋಪಿಸಿದ್ದ ಬಿ.ಆರ್.ಪಾಟೀಲ್, ಕೆಲ ಗ್ರಾಮ ಪಂಚಾಯಿತಿ ಹೆಸರು ಉಲ್ಲೇಖ ಮಾಡಿದ್ದರು.
ಅದರಲ್ಲಿ ಆಳಂದ ವಿಧಾನಸಭಾ ಕ್ಷೇತ್ರ ಕೂಡ ಒಂದು. ರಿಯಾಲಿಟಿ ಚೆಕ್ನಲ್ಲಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ದಂಗಾಪುರ ಗ್ರಾಮ ಪಂಚಾಯಿತಿನಲ್ಲಿ 200 ಮನೆ ಹಂಚಿಕೆ ಸಂಬಂಧ ನಡೆದ ಹಣಕಾಸಿನ ವ್ಯವಹಾರದ ವಿಡಿಯೋ ಸಾಕ್ಷಿ ಲಭ್ಯವಾಗಿದೆ.